ಮಾಡಿದ್ದುಣ್ಣೋ ಮಹರಾಯ ವೃದ್ದಾಶ್ರಮದ ಬಾಗಿಲಲ್ಲಿ ಕುಳಿತ ಸಾಗರನಿಗೆ ಅಂದೇಕೋ ಬೇಡ ಬೇಡವೆಂದರೂ ಹಳೆಯ ನೆನಪುಗಳು ಮನದಲ್ಲಿ ಸಾಗರದ ಅಲೆಗಳಂತೆ ಉಕ್ಕಿ ಉಕ್ಕಿ ಬರುತ್ತಿತ್ತು. ಚಿಕ್ಕಂದಿನಿಂದ ತನ್ನನ್ನು ಮುದ್ದಿಸಿ ತನ್ನ ಬೇಕು ಬೇಡಗಳನ್ನು ಪೂರೈಸುತ್ತಾ ತಮ್ಮ ಆಸೆ ಅಕಾಕ್ಷೆಗಳನ್ನೆಲ್ಲ ಬದಿಗೊತ್ತಿ ತನಗಾಗಿ ಕಷ್ಟಪಟ್ಟು ಹಗಲಿರುಳೂ ಬೆವರು ಹರಿಸಿ ದುಡಿದ ತಂದೆಯನ್ನು ವೃದ್ದಾಪ್ಯದಲ್ಲಿ ತಾನು ಅನಾಥಾಶ್ರಮಕ್ಕೆ ಸೇರಿಸಿದಾಗ ಅವರು ಎಷ್ಟು ಬೇಸರ ದುಃಖ ಪಟ್ಟಿರಬಹುದು ಎನ್ನುವ ಒಂದು ಚಿಕ್ಕ ಯೋಚನೆ ತನಗೆ ಅಂದು ಬರುತ್ತಿದ್ದರೆ ತಾನು ಇಂದು ಈ ವೃದ್ಧಾಶ್ರಮದಲ್ಲಿ ಮಕ್ಕಳಿದ್ದು ಈ ರೀತಿ ಅನಾಥನಂತೆ ದಿನ ಕಳೆಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿದಾಗ ಪಶ್ಹಾತ್ತಾಪ ದಿಂದ ಸಾಗರನ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯಿತು.ತಂದೆಯನ್ನು ತಾನು ಅಂದು ನಡೆಸಿಕೊಂಡ ರೀತಿ ನೆನೆದು ಆತ ನಾಚಿಕೆಯಿಂದ ಮುಖ ಕೆಳಗೆ ಹಾಕಿ ಕುಳಿತುಕೊಂಡ ಪಂಕಜಾ.ಕೆ ಮುಡಿಪು ಕುರ್ನಾಡು.ದ.ಕ
ಮತ್ತೆ ಕೂಗಿತು ಕೋಗಿಲೆ ಪಾರ್ಕಿನ ಕಲ್ಲಿನ ಬೆಂಚಿನಲ್ಲಿ ಕುಳಿತ ಶ್ರೀಪತಿರಾಯರ ಮನಸು ಇಂದೇಕೋ ಅಸ್ತವ್ಯಸ್ತವಾಗಿತ್ತು.ತಾನು ಹೊರಡುವಾಗ ತನ್ನನ್ನೇ ದಿಟ್ಟಿಸಿದ ಆಕೆಯ ಕಣ್ಣುಗಳಲ್ಲಿ ತುಂಬಿದ ನೀರು ಯಾಕಾಗಿ ಇರಬಹುದು?ಏಕೋ ಇತ್ತೀಚೆಗೆ ರತ್ನ ಮೌನಿಯಾಗುತ್ತಿದ್ದಾಳೆ ಅರಳು ಹುರಿದಂತೆ ಮಾತನಾಡುತ್ತಿದ್ದ ಆಕೆ ಯಾಕೆ ಮೌನವಾದಳು? ಅದನ್ನು ತಿಳಿಯಬೇಕೆನ್ನುವ ಕುತೂಹಲವೂ ತನಗಿಲ್ಲ ಯಾಕೆ ಅದನ್ನು ತಿಳಿಯಲು ತನಗಿರುವ ಅಹಂ ಅಡ್ಡಬಂತೆ?ತಾನು ತಪ್ಪಿದೆಲ್ಲಿ ಎಂದು ಯೋಚಿಸಬೇಕಿತ್ತು ಅವಳಿಗೇನು ಕಡಿಮೆ ಮಾಡಿದ್ದೇನೆ ಉಡಲು ಉಣ್ಣಲು ಕೊರತೆಯಿಲ್ಲ ಅರಮನೆಯಂತ ಮನೆಯಿದೆ ಕೆಲಸಕ್ಕೆ ಆಳು ಕಾಳುಗಳಿದ್ದಾರೆ ಇನ್ನೇನು ಬೇಕು ಎನ್ನುವ ದೊರಣೆ ನನ್ನದು . ಆದರೆ ಇಂದೇಕೋ ರತ್ನ ವಿಶೇಷವಾಗಿ ಕಾಡುತ್ತಿದ್ದಾಳೆ ಎಂದು ಯೋಚಿಸುತ್ತಾ ಇದ್ದಾಗ.ಪಕ್ಕದಲ್ಲಿಯೇ ಕುಳಿತ ವೃದ್ಧ ದಂಪತಿಗಳ ಸರಸ ಸಲ್ಲಾಪದತ್ತ ಮನ ಹೊರಳಿತು. ವಿದ್ಯಾ ನೀನು ನನ್ನ ಬಾಳಿಗೆ ಬಂದ ದಿನದಿಂದವೇ ನನ್ನ ಬಾಳಲ್ಲಿ ಬೆಳದಿಂಗಳು ಮೂಡಿತು ಎಂದು ಹೇಳಿ ಮಡದಿಯನ್ನು ಬಿಗಿದಪ್ಪುವ ವೃದ್ಧನನ್ನು ಕಂಡಾಗ ಶ್ರೀಪತಿರಾಯರ ಮನಸ್ಸು ಕೂಡಾ ಹೌದಲ್ಲವೇ ರತ್ನ ತನ್ನ ಬಾಳಿಗೆ ಬಂದ ದಿನವೇ ತನ್ನ ಬಾಳು ಕೂಡಾ ಬೆಳಕಾಗಿತ್ತಲ್ಲ ಆದರೆ ತಾನು ಅದನ್ನು ಒಮ್ಮೆಯೂ ಆ ವೃದ್ದರಂತೆ ಅವಳೊಡನೆ ಹೇಳಿಲ್ಲ ಯಾಕೆ ತಾನು ಅವಳೊಡನೆ ಒಮ್ಮೆಯೂ ಪ್ರೀತಿಯ ಮಾತನಾಡಲಿಲ್ಲ ತಾನು ತಪ್ಪಿದ್ದೆಲ್ಲಿ ಎನ್ನು