Skip to main content

Posts

Showing posts from July, 2026

*ಆರೋಗ್ಯದ ಗುಟ್ಟು*ಒಂದು ಹನಿ ಪೋಲಿಯೋ ಬಿಂದು ಮಕ್ಕಳ ಪಾಲಿನ ಅಮೃತದ ಸಿಂಧು ಹಾಕಿರಿ ಮಕ್ಕಳಿಗೆ ಪೋಲಿಯೋ ಲಸಿಕೆಬಾರದಂತೆ ಅಂಗವಿಕಲತೆಯ ಕುಣಿಕೆಆರೋಗ್ಯವಂತರಾಗಿರಲು ನಾವುತಿನ್ನಬೇಕು ಆಹಾರದ ಜತೆ ಬೇವುಕಾಲಕ್ಕೆ ಸರಿಯಾಗಿ ಊಟ ತಿಂಡಿ ಮಾಡಿಸಾಕಷ್ಟು ನೀರು ಕುಡಿಯುವುದು ನೋಡಿಸಮತೋಲನ ಆಹಾರ ಸೇವಿಸಬೇಕುಕಾಲಕಾಲಕ್ಕೆ ಊಟ ತಿಂಡಿ ಮಾಡಬೇಕುಹಣ್ಣು ಹಂಪಲುಗಳು ನಿಮ್ಮ ಆಹಾರದಲ್ಲಿರಲಿಆರೋಗ್ಯಕ್ಕಾಗಿ ಯೋಗ ನಡಿಗೆಯ ಅಭ್ಯಾಸವಿರಲಿಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸಿ ಕುರುಕಲು ತಿಂಡಿಗಳ ಸೇವನೆಯನ್ನು ನಿವಾರಿಸಿಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ನಿತ್ಯವೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿಕನಿಷ್ಠ ಆರು ಗಂಟೆಗಳ ನಿದ್ದೆ ಅವಶ್ಯಕದೇಹ ಮನಸಿಗೆ ಆರಾಮದಾಯಕಹಸಿವೆ ಆದಾಗ ಮಾತ್ರ ಆಹಾರ ಸೇವಿಸಿಮಾದಕ ವಸ್ತುಗಳ ಸೇವನೆ ನಿಲ್ಲಿಸಿ*ಪಂಕಜಾ.ಕೆ.ರಾಮ ಭಟ್**ಮುಡಿಪು.ಕುರ್ನಾಡು*

ಅಯೋಧ್ಯೆಯಲ್ಲಿ ರಾಮಮಂದಿರ

ಅಯೋದ್ಯೆಯಲ್ಲಿ ರಾಮ ಮಂದಿರ ಕೋಸಲ ದೇಶದ ರಾಜನು ದಶರಥ ತನ್ನಯ ಮಡದಿಯರೊಡನೆಯೆ ಕೂಡುತ ಬನ್ನವ  ಪಡದೆಯೇ ಬದುಕುತಲಿದ್ದನು  ಅಯೋಧ್ಯೆ ನಗರದಲಿ ||೦೧|| ಮಹಾ ಪರಾಕ್ರಮಿಯಾದ ರಾಜಗೆ ಮಕ್ಕಳಿಲ್ಲದ ಚಿಂತೆಯು ಕಾಡಲು ಕುಲಗುರು ವಸಿಷ್ಟರಾಣತಿಯಂತೆಯೆ ಮಾಡಿದ ಯಾಗವನು ||೦೨|| ಭಕುತಿ ಬಾವದಲಿ ಯಜ್ಞವ ಮಾಡಲು ಯಜ್ಞದ ಕುಂಡದಿ  ದಿವ್ಯ ಪುರುಷನು ಬಂದು ಚಾಚಿದನು ರಾಜನ ಕಡೆಗೆ ಪಾಯಸದ  ಬಟ್ಟಲನು ||೦೩|| ಕರದಲ್ಲಿರಿಸಿದ ಪ್ರಸಾದ ಪಾಯಸ ಮಡದಿಯರೆಲ್ಲರಿಗೆ ಹಂಚಿದನು ಪ್ರಸಾದ ಫಲದಿಂ ಸತಿಯರೆಲ್ಲರೂ ಹೆತ್ತರು  ಪುತ್ರರನು  ||೦೪|| ಶ್ರೀರಾಮ ಜನಿಸಿದ  ಪುಣ್ಯ ಸ್ಥಳದಲಿ ರಾಮನ ಮಂದಿರ ತಲೆಯನ್ನೆತ್ತುತ ರಾಮಜನ್ಮ ಭೂಮಿಯದು ಎನ್ನುತ  ಪ್ರಸಿದ್ದಿ ಪಡೆದಿಹುದು ||೦೫|| ಮತಾಂಧ ಮೊಘಲನು ರಾಜ ಬಾಬರನು  ಕೆಡವಿಯೆ ಬಿಡುತಲಿ ರಾಮ ಮಂದಿರವ ಕಟ್ಟಿಯೆ ಬಿಟ್ಟನು ಮಸೀದಿಯನ್ನು ತನ್ನಯ ಹೆಸರಲ್ಲೇ ||೦೬|| ವಾದ ವಿವಾದಗಳಿಗೆಡೆ ಕೊಡುತಲಿ ದಶಕ ದಶಕಗಳು ಕಳೆದೂ ಹೋದವು ಸಾವಿರ ಸಾವಿರ ಕರಸೇವಕರು ಒಡೆದರು ಕಟ್ಟಡವ ||೦೭|| ಕೂಡಿದರೆಲ್ಲರು ಒಂದೊಂದಾಗಿಯೆ ಕಟ್ಟಡ ಕಟ್ಟುವ ಸಾಮಗ್ರಿಯೊಂದಿಗೆ  ಗೆದ್ದು ಭೂಮಿಯ ಗೈದು ಬಿಟ್ಟರು  ಶಂಕು ಸ್ಥಾಪನೆಯ ||೦೮|| ಶಿಲೆಗಳು ಸಾರಿವೆ ರಾಮನ ಮಹಿಮೆಯ ನಾಗರ ಶೈಲಿಯ ವಾಸ್ತು ಶಿಲ್ಪದಲಿ ಕಟ್ಟಿದ ಆಕೃತಿ ಜಗತಿನ ಜನಗಳ ಗಮನವ ಸೆಳೆದಿಹುದು ||೦೯|| ರಾಮನಾಮದ ಉದ್ಘೋಷ ಮೊಳಗುತ ಪ್ರಪಂಚದೆಲ್ಲೆಡ...