ಅಯೋದ್ಯೆಯಲ್ಲಿ ರಾಮ ಮಂದಿರ ಕೋಸಲ ದೇಶದ ರಾಜನು ದಶರಥ ತನ್ನಯ ಮಡದಿಯರೊಡನೆಯೆ ಕೂಡುತ ಬನ್ನವ ಪಡದೆಯೇ ಬದುಕುತಲಿದ್ದನು ಅಯೋಧ್ಯೆ ನಗರದಲಿ ||೦೧|| ಮಹಾ ಪರಾಕ್ರಮಿಯಾದ ರಾಜಗೆ ಮಕ್ಕಳಿಲ್ಲದ ಚಿಂತೆಯು ಕಾಡಲು ಕುಲಗುರು ವಸಿಷ್ಟರಾಣತಿಯಂತೆಯೆ ಮಾಡಿದ ಯಾಗವನು ||೦೨|| ಭಕುತಿ ಬಾವದಲಿ ಯಜ್ಞವ ಮಾಡಲು ಯಜ್ಞದ ಕುಂಡದಿ ದಿವ್ಯ ಪುರುಷನು ಬಂದು ಚಾಚಿದನು ರಾಜನ ಕಡೆಗೆ ಪಾಯಸದ ಬಟ್ಟಲನು ||೦೩|| ಕರದಲ್ಲಿರಿಸಿದ ಪ್ರಸಾದ ಪಾಯಸ ಮಡದಿಯರೆಲ್ಲರಿಗೆ ಹಂಚಿದನು ಪ್ರಸಾದ ಫಲದಿಂ ಸತಿಯರೆಲ್ಲರೂ ಹೆತ್ತರು ಪುತ್ರರನು ||೦೪|| ಶ್ರೀರಾಮ ಜನಿಸಿದ ಪುಣ್ಯ ಸ್ಥಳದಲಿ ರಾಮನ ಮಂದಿರ ತಲೆಯನ್ನೆತ್ತುತ ರಾಮಜನ್ಮ ಭೂಮಿಯದು ಎನ್ನುತ ಪ್ರಸಿದ್ದಿ ಪಡೆದಿಹುದು ||೦೫|| ಮತಾಂಧ ಮೊಘಲನು ರಾಜ ಬಾಬರನು ಕೆಡವಿಯೆ ಬಿಡುತಲಿ ರಾಮ ಮಂದಿರವ ಕಟ್ಟಿಯೆ ಬಿಟ್ಟನು ಮಸೀದಿಯನ್ನು ತನ್ನಯ ಹೆಸರಲ್ಲೇ ||೦೬|| ವಾದ ವಿವಾದಗಳಿಗೆಡೆ ಕೊಡುತಲಿ ದಶಕ ದಶಕಗಳು ಕಳೆದೂ ಹೋದವು ಸಾವಿರ ಸಾವಿರ ಕರಸೇವಕರು ಒಡೆದರು ಕಟ್ಟಡವ ||೦೭|| ಕೂಡಿದರೆಲ್ಲರು ಒಂದೊಂದಾಗಿಯೆ ಕಟ್ಟಡ ಕಟ್ಟುವ ಸಾಮಗ್ರಿಯೊಂದಿಗೆ ಗೆದ್ದು ಭೂಮಿಯ ಗೈದು ಬಿಟ್ಟರು ಶಂಕು ಸ್ಥಾಪನೆಯ ||೦೮|| ಶಿಲೆಗಳು ಸಾರಿವೆ ರಾಮನ ಮಹಿಮೆಯ ನಾಗರ ಶೈಲಿಯ ವಾಸ್ತು ಶಿಲ್ಪದಲಿ ಕಟ್ಟಿದ ಆಕೃತಿ ಜಗತಿನ ಜನಗಳ ಗಮನವ ಸೆಳೆದಿಹುದು ||೦೯|| ರಾಮನಾಮದ ಉದ್ಘೋಷ ಮೊಳಗುತ ಪ್ರಪಂಚದೆಲ್ಲೆಡ...