ಅಯೋದ್ಯೆಯಲ್ಲಿ ರಾಮ ಮಂದಿರ ಕೋಸಲ ದೇಶದ ರಾಜನು ದಶರಥ ತನ್ನಯ ಮಡದಿಯರೊಡನೆಯೆ ಕೂಡುತ ಬನ್ನವ ಪಡದೆಯೇ ಬದುಕುತಲಿದ್ದನು ಅಯೋಧ್ಯೆ ನಗರದಲಿ ||೦೧|| ಮಹಾ ಪರಾಕ್ರಮಿಯಾದ ರಾಜಗೆ ಮಕ್ಕಳಿಲ್ಲದ ಚಿಂತೆಯು ಕಾಡಲು ಕುಲಗುರು ವಸಿಷ್ಟರಾಣತಿಯಂತೆಯೆ ಮಾಡಿದ ಯಾಗವನು ||೦೨|| ಭಕುತಿ ಬಾವದಲಿ ಯಜ್ಞವ ಮಾಡಲು ಯಜ್ಞದ ಕುಂಡದಿ ದಿವ್ಯ ಪುರುಷನು ಬಂದು ಚಾಚಿದನು ರಾಜನ ಕಡೆಗೆ ಪಾಯಸದ ಬಟ್ಟಲನು ||೦೩|| ಕರದಲ್ಲಿರಿಸಿದ ಪ್ರಸಾದ ಪಾಯಸ ಮಡದಿಯರೆಲ್ಲರಿಗೆ ಹಂಚಿದನು ಪ್ರಸಾದ ಫಲದಿಂ ಸತಿಯರೆಲ್ಲರೂ ಹೆತ್ತರು ಪುತ್ರರನು ||೦೪|| ಶ್ರೀರಾಮ ಜನಿಸಿದ ಪುಣ್ಯ ಸ್ಥಳದಲಿ ರಾಮನ ಮಂದಿರ ತಲೆಯನ್ನೆತ್ತುತ ರಾಮಜನ್ಮ ಭೂಮಿಯದು ಎನ್ನುತ ಪ್ರಸಿದ್ದಿ ಪಡೆದಿಹುದು ||೦೫|| ಮತಾಂಧ ಮೊಘಲನು ರಾಜ ಬಾಬರನು ಕೆಡವಿಯೆ ಬಿಡುತಲಿ ರಾಮ ಮಂದಿರವ ಕಟ್ಟಿಯೆ ಬಿಟ್ಟನು ಮಸೀದಿಯನ್ನು ತನ್ನಯ ಹೆಸರಲ್ಲೇ ||೦೬|| ವಾದ ವಿವಾದಗಳಿಗೆಡೆ ಕೊಡುತಲಿ ದಶಕ ದಶಕಗಳು ಕಳೆದೂ ಹೋದವು ಸಾವಿರ ಸಾವಿರ ಕರಸೇವಕರು ಒಡೆದರು ಕಟ್ಟಡವ ||೦೭|| ಕೂಡಿದರೆಲ್ಲರು ಒಂದೊಂದಾಗಿಯೆ ಕಟ್ಟಡ ಕಟ್ಟುವ ಸಾಮಗ್ರಿಯೊಂದಿಗೆ ಗೆದ್ದು ಭೂಮಿಯ ಗೈದು ಬಿಟ್ಟರು ಶಂಕು ಸ್ಥಾಪನೆಯ ||೦೮|| ಶಿಲೆಗಳು ಸಾರಿವೆ ರಾಮನ ಮಹಿಮೆಯ ನಾಗರ ಶೈಲಿಯ ವಾಸ್ತು ಶಿಲ್ಪದಲಿ ಕಟ್ಟಿದ ಆಕೃತಿ ಜಗತಿನ ಜನಗಳ ಗಮನವ ಸೆಳೆದಿಹುದು ||೦೯|| ರಾಮನಾಮದ ಉದ್ಘೋಷ ಮೊಳಗುತ ಪ್ರಪಂಚದೆಲ್ಲೆಡ...
ಪ್ರೇಮಿಗಳ ಸಲ್ಲಾಪ ಚಂದಿರನು ಬಾನಲ್ಲಿ ಮೋಡಗಳ ಎಡೆಯಲ್ಲಿ ನಸುನಗುವ ಬೀರುತ್ತ ಬರುತಿರುವನು ಹುಣ್ಣಿಮೆಯ ದಿನದಲ್ಲಿ ತಾರೆಗಳ ಜತೆಸೇರಿ ಬೆಳದಿಂಗಳ ಬೆಳಕನ್ನು ಹರಿಸುತಿಹನು ಶಶಿ ಕಿರಣ ಸೋಕುತಿರೆ ಕೊಳದಲ್ಲಿ ತುಂಬಿರುವ ನೈದಿಲೆಯು ದಳ ತೆರೆದು ಅರಳುತ್ತಿದೆ ಶಶಿಯೊಡನೆ ಬೆರೆಯುತ್ತ ಚೆಲ್ಲಾಟವಾಡುತ್ತ ನೋಡುಗರ ಮೈಯನ್ನು ತಾ ಮರೆಸಿದೆ ಬೆಳದಿಂಗಳ ಬೆಳಕು ಧರೆಯನ್ನು ತಬ್ಬುತಿ ರೆ ಪ್ರೇಮಿಗಳು ಮೈಮರೆತು ಕುಳಿತಿರುವರು ಚೆಂದುಟಿಯ ರಸವನ್ನು ಮೈಮರೆತು ಸವಿಯುತ್ತ ರಸಗಳಿಗೆಯಲ್ಲಿ ಮೈ ಮರೆತಿರುವರು ಪ್ರೇಮಿಗಳ ಸರಸವನು ನೋಡುತ್ತ ಚಂದಿರನು ಮೋಡಗಳ ಮರೆಯಲ್ಲಿ ಮುಖ ಮರೆಸಿದ ಒಲವನ್ನು ಸುರಿಸುತ್ತ ತಿಂಗಳಿನ ಬೆಳಕಿನಲಿ ನವ ಜೋಡಿಗಳಿಗೆ ತಾ ಸಹಕರಿಸಿದ ಪಂಕಜಾ.ಕೆ.ರಾಮಭಟ್