Skip to main content

ಕಥೆ ಹೂಮನದ ಹುಡುಗಿ

ಹೂಮನದ ಹುಡುಗಿ

          ಆ ದಿನ ಎಲ್ಲಾ ಕೆಲಸ ಬೇಗ ಮುಗುತ್ತು ಶ್ರಾವಣಿಗೆ ಹಾಂಗೆ ರಜ ಹೊತ್ತು ಹೆರ ಗಾಳಿಗೆ ಕೂಪ ಹೇಳಿ ಹೆರ ಲಾನ್ಲಿ ಕೂದು ಸುತ್ತಲ ಪ್ರಕೃತಿ ಸೌಂದರ್ಯವ ಸವಿಕೊಂಡಿಪ್ಪಗ ಭಗವಂತ ಎಷ್ಟು ಕರುಣಾಮಯಿ ಹೇಳಿ ಅದಕ್ಕೆ ಕಂಡತ್ತು
       ಆ ದಿನ ಮನೆಲಿ ಆರೂ ಇಲ್ಲೇ ಇವುಯಾವದೋ ಮದುವೆ ಹೇಳಿ ಹೋಗಿತ್ತವು  .ಮಕ್ಕೊ ರಜೆ ಹೇಳಿ ಅಜ್ಜನಮನೆಗೆ ಹೋಯಿದವು.  ಒಬ್ಬನೇ ಕೂದುಗೊಂಡು ಇಪ್ಪಗ ಶ್ರಾವ್ಯನ್ಗೆ ಆದರ ಹಿಂದಣ ದಿನಂಗಳ ನೆನಪು ಒಂದೊಂದಾಗಿ ಮನಸ್ಸಿಲಿ ಹಾದು ಹೋತು

ಅಪ್ಪು ಅದು ಅಬ್ಬೆ ಅಪ್ಪನ ಮುದ್ದಿನ ಮಗಳು ಎರಡು ಜನ ಅಣ್ಣಂದಿರ ಪ್ರೀತಿಯ ತಂಗೆ ಮಗಳು ಬೇಕು ಹೇಳಿ ಬಯಸಿ ಬಯಸಿ ಪಡೆದ ಅಪರೂಪದ ಕೂಸು ಅದು
ಅದೆಂತದೋ ಒಂದು ದಿನ ಶಾಲೆಂದ ಬಂದ ಕೂಸು ತಲೆಸೆಳಿತ್ತು ಹೇಳಿ ಮನುಗಿತ್ತು ಅಬ್ಬೆ ಬೆಸಿಲಿಂಗೇ ನಡಕೊಂಡು ಶಾಲೆಗೆ ಹೋಗಿ ಬಂದು ಮಗಳಿಂಗೆ ಬಚ್ಚಿದ್ದು ಹೇಳಿ ಗ್ರೇಹಿಸಿ ಒರಗಿದರೆ ಕಮ್ಮಿ ಅಕ್ಕು ಹೇಳಿ ಮಗಳ ಹಾಸಿಗೆಲಿ ಮನುಗಿಸಿ ಮೈ ತುಂಬ ಹೊದೆಸಿ ಬೇರೆ ಕೆಲಸಕ್ಕೆ ಹೋದವು
     ಇದ್ದಕ್ಕಿದ್ದ ಹಾಂಗೆ ಮಗಳು ನರಳುದು ಕೇಳಿ ಎಂತಾತಪ್ಪ ಹೇಳಿ ಕೈಲಿತ್ತ.ಕೆಲಸವ ಅಲ್ಲೇ.ಬಿಟ್ಟು ಅಬ್ಬೆ ಶ್ರೀಮತಿ  ಓಡಿಗೊಂಡುಬಂತು ಮಗಳ ಹಣೆ ಮೇಲೆ ಕೈ ಮಡುಗಿದ ಶ್ರೀಮತಿ ಥಟ್ಟನೆ ಕೈ ಹಿಂದಕ್ಕೆ ತೇಕೊಂಡತ್ತು ಮಗಳ ಮೈ ಕಾದ ಹಂಚಿನ ಹಾಂಗೆ ಸುಡುದು ನೋಡಿ ಅದಕ್ಕೆ ಕೈ ಕಾಲು ಆಡದ್ದ ಹಾಂಗೆ ಆತು
     ಕೂಡಲೇ ಗಂಡ ಮಕ್ಕಳ ದೆನಿಗೇಳಿತ್ತು  ಅವು ಬಂದಪ್ಪದ್ದೆ ಮಗಳ.ಜ್ವರದ ಬಗ್ಗೆ ಶ್ರೀಮತಿ ತಿಳಿಸಿದ್ದು ನೋಡಿ ಕೂಡಲೇ.ಕಾರಿಲಿ ಶ್ರಾವಣಿಯ  ದೊಡ್ಡ ಆಸ್ಪತ್ರೆಗೆ ಕರಕೊಂಡು ಹೋದವು
ಡಾಕ್ಟರ್ ಪರೀಕ್ಷೆ ಮಾಡಿ ನಿಂಗ ಕೂಡಲೇ ಕರಕೊಂಡು ಬಂದದು ಒಳ್ಳೆದಾತು ಇಲ್ಲದ್ದರೆ ಅದರ ಜೀವಕ್ಕೆ ಅಪಾಯ ಆವುಸಿತ್ತು  ಹೇಳಿದವು ಒಂದು ಇಂಜೆಕ್ಷನ್ ಕೊಟ್ಟವು ಇಂಜೆಕ್ಷನ್ ನ ಪ್ರಭಾವಂದ ಶ್ರಾವಣಿ  ಲಾಯಿಕ್ ಒರಗಿತ್ತು.
       ಮಗಳ ಬಾಡಿದ ಮೊರೆ ನೋಡಿ ಅಣ್ಣಂದಿರು ಹಾಗೂ ಅಪ್ಪ ಕಂಗಾಲು ಆದವು ದೇವರ ಧ್ಯಾನ ಮಾಡಿಗೊಂಡು ಕೂದವು ಒಂದು ವಾರ ಬಿಡದ್ದೆ ಕಾಡಿದ.ಜ್ವರ ಮಗಳ ಹಿಂಡಿ ಹಿಪ್ಪೆ ಮಾಡಿದ್ದು ನೋಡಿ ಶ್ರೀಮತಿ ಗೆ ಕಣ್ಣಿಲಿ ನೀರು ಬಂತು ಬೇಗ ಹುಸಾರಿ ಆಗಲಿ ಹೇಳಿ ದೇವರಿಂಗೆ ಪ್ರಾರ್ಥನೆ ಮಾಡಿದವು ಎಲ್ಲೋರ ಪ್ರಾರ್ಥನೆಯ  ಫಲವೋ ಹೇಳುವಾಂಗೆ ಶ್ರಾವಣಿ ಚೇತರಿಸಿಗೊಂಡತ್ತು

ದಿನಂದ ದಿನಕ್ಕೆ ಶ್ರಾವಣಿ ಚೇತರಿಸಿಗೊಂಡು ಮೊದಲಿನ ಹಾಂಗೆ ಆಡಿಗೊಂದು ಶಾಲೆಗೆ ಹೋಪಲೆ ಸುರುಮಾಡಿದ್ದು ನೋಡಿ ಎಲ್ಲೋರು ನಿಟ್ಟುಸಿರು ಬಿಟ್ಟವು  ಅಣ್ಣಂದಿರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ದೂರದ ಊರಿಂಗೆ ಹಾಸ್ಟೆಲ್ ಲಿಲಿದ್ದು  ಕಾಲೇಜಿಂಗೆ ರಜೆ ಇಪ್ಪಗ ಮಾತ್ರ  ಬಪ್ಪ ಅಭ್ಯಾಸ ಮಾಡಿದವು ಅವಾಗ ಈಗಣ ಹಾಂಗೆ ಮೊಬೈಲ್ ಎಲ್ಲಾ ಇಲ್ಲೇ ಎಲ್ಲಾ ವಿಷಯಕ್ಕೂ ಕಾಗದವೆ  ಬರೆಯಕ್ಕೂ ಹಾಂಗೆ ಅಣ್ಣಂದಿರು ಆಗಾಗ ಶ್ರಾವಣಿಗೆ ಕಾಗದ ಬರಕೊಂಡು ಇತ್ತಿದ್ದವು

ಇದ್ದಕ್ಕಿದ್ದ ಹಾಂಗೆ ಒಂದು ದಿನ ಶ್ರಾವಣಿಗೆ ಕೆಮಿ ಕೇಳುದು ಕಮ್ಮಿ ಆದ ಅನುಭವ ಆತು ಶಾಲೆಲಿ ಟೀಚರ್ ದೆನಿಗೇಳಿದರೆ ಕೇಳದ್ದೇ ತಳಿಯದ್ದೇ ಕೂದ್ದು ನೋಡಿ ಹತ್ತರೆ ಕೂದ ಅದರ ಫ್ರೆಂಡ್ ಶ್ರಾವಣಿಯ ನೂಕಿತ್ತು ಶ್ರಾವಣಿ ಗಡಿ ಬಿಡಿಲಿ ಎದ್ದು ನಿಂದತ್ತು ಟೀಚರ್  ಇನ್ನೊಂದರಿ ಹೇಳಿದ ಮೇಲೆ ಶ್ರಾವಣಿಉತ್ತರ ಕೊಟ್ಟತ್ತು ಏರ್ ವಿಷಯವ ಮನೆಲಿ ಬಂದು ಅಬ್ಬೆಗೆ ಹೇಳಿದರು ಅಬ್ಬೆ ಅದು ಅಂತೆ ಆದಿಕ್ಕು ಹೇಳಿ ಗ್ರೇಹಿಸಿತ್ತು ಹಿಂಗೇ ಇಪ್ಪಗ ಒಂದು ದಿನ ಅಬ್ವೆ ಅದರ ಎಷ್ಟು ದೆನಿಗೆಳಿದರೂ ಶ್ರಾವಣಿ ಉತ್ತರ ಕೊಡದ್ದದು ನೋಡಿ ಶ್ರೀಮತಿ ಅದರ  ಹತ್ತರೆ ಬಂದು ತಲೆ ಸವರಿ ಆಗಂದ ದೆನಿಗೇಳುತ್ತೆ ಆನು ನೀನು ತಳಿಯದ್ದೇ ಕೂಯಿದೆ ಎಂತ ಯೋಚನೆ ಕೂಸೆ ಹೇಳಿ ಕೇಳಿತ್ತು ಶ್ರಾವಣಿಗೆ ಅಶ್ವರ್ಯ ಅಮ್ಮಾ ನೀನು ಎನ್ನ ದೇನಿಗೆಲಿದ್ದೆಯಾ ಎನಗೆ ಕೇಳಿದ್ದೆ ಇಲ್ಲೆನ್ನೇ ಹೇಳಿತ್ತು ಅಮ್ಮಂಗೆ ಚಿಂತೆ ಆಗಿ ಅಪ್ಪನತ್ತರೆ ಈ ವಿಷಯ ಹೇಳಿದವು ಅಪ್ಪಾ ಶ್ರಾವಣಿ ಯ ಕಿವಿ ಮೂಗು ತಜ್ಞರ ಹತ್ತರೆ ಕರಕೊಂಡು ಹೋದವು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...

ಅದ್ವಿಜೋ ಕವನ ಬಗ್ಗೆ

[08/06, 4:21 PM] ಪೀರ್ ಸಾಹೇಬ್ ನವಪರ್ವ: [08/06, 4:19 PM] ಪಿ.ಎಸ್.ಬಿ.: *ಅದ್ವಿಜೋ ಕವನ*  *ಶೀಷಿ೯ಕೆ* :  *ಅಬ್ಬಬ್ಬಾ ಜೀವನ..!* ಸೋಲು ಗೀಲು ಕಾಟ ಗೀಟ ಕೊಟ್ರು, ಸರ ಸರ ಮೇಲೇರಿ, ಬಿದ್ದು ಗೆದ್ದು ಬಿಡಬೇಕು..! ದುಡ್ಡು ಗಿಡ್ಡು , ಕಾಸು ಗೀಸು ಇರ್ಲಿ ಬಿಡ್ಲಿ ಓಡೋಡಿ ಹೋಗಿ ಗೆದ್ದು ಗಿದ್ದು ಬಬೇ೯ಕು..! ವಟ ವಟ, ಗಿಟ ಗಿಟ ಅನ್ನೋಗೆ೯  ಈಸಿ ಗೀಸಿ, ಬೀಗಿ ಗೀಗಿ  ತೋಸ್೯ಬೇಕು..! ಅಂದ ಗಿಂದ, ದುಡ್ಡು ಗಿಡ್ಡು ಮುಖ ಮೂತಿ ನೋಡದೆ ಮಾನ ಗೀನಕ್ಕೆ ಅಂಜಿ ಬದುಕ್ಬೇಕು..!  *ರಚನೆ : ಪೀರ್ ಸಾಹೇಬ್ ಬೀರಬ್ಬಿ,* [08/06, 4:21 PM] ಪಿ.ಎಸ್.ಬಿ.: 👆 ನನ್ನ ಹೊಸ ಸಾಹಿತ್ಯ ಪ್ರಕಾರದ ಚೊಚ್ಚಲ ಕವನ ಪ್ರಕಾರ "ಅದ್ವಿಜೋ"... ಎಲ್ಲಾ ಕವಿ ಮಿತ್ರರು ಅಭಿಪ್ರಾಯ ತಿಳಿಸಿ🙏🙏🙏 [08/06, 4:27 PM] ಪೀರ್ ಸಾಹೇಬ್ ನವಪರ್ವ: *ಅದ್ವಿಜೋ ಪ್ರಕಾರ*  🌷🌷🌷🌷🌷🌷🌷 ಹೊಸ ಸಾಹಿತ್ಯದ ಪರಿಚಯದೊಂದಿಗೆ ನಿಮ್ಮ ಮುಂದೆ........ಒಂದು ಪ್ರಯತ್ನ ಅಷ್ಟೇ...        *ಖಂಡು ಬಂಜಾರ* ●●●●●●●●●●●●●●●● *ಅನುಕರಣಾವ್ಯಯ,ದ್ವಿರುಕ್ತಿ ಜೋಡುನುಡಿ  ಪದಗಳಿಂದ ಕವನಗಳ ರಚನೆ*     🌷  *ಅದ್ವಿಜೋ 🌷ಕವನಗಳ ರಚನಾ ಮಾಹಿತಿ* @@@@@@@@@@@ ಹಾಗಾದರೆ ಯಾವ ರೀತಿ? ಎಂಬ ಪ್ರಶ್ನೆ ನಮಗೆ ಬರುವುದು ಸಹಜ....ಅಲ್ಲವೇ. ನಾವುಗಳು ಸದಾ ಕವನಗಳನ್ನು ಬರೆಯುತ್ತ ಹೋದರೆ ಅವುಗಳಿಗೆ ಕೊನೆಯೆಂ...