ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ
ಗುರಿ
ಮನದ ತುಂಬಾ ಕನಸುಗಳು
ತುಂಬಿ ನಿಂತು ಕಾಡಿದೆ
ನನಸು ಮಾಡ ಲದಕೆ ನಾವು
ನಿತ್ಯ ಶ್ರಮಿಸಬೇಕಿದೆ
ಭರವಸೆಯ ಬೆಳಕಿನಲಿ
ಬಾಳ ದೋಣಿ ಸಾಗಿದೆ
ಗುರಿಯ ಸೇರಲದಕೆ ನಾವು
ಛಲವ ತುಂಬ ಬೇಕಿದೆ
ಕಲ್ಲು. ಮುಳ್ಳು ಏನೇ ಇರಲಿ
ಸರಿಸಿ ನಡೆಯ ಬೇಕಿದೆ
ಕಷ್ಟ ಸುಖವ ಸಹಿಸಿಕೊಂಡು
ತೀರ ಸೇರಬೇಕಿದೆ
ಕೋಪ ದ್ವೇಷ ಮರೆತು ನಾವು
ಒಂದುಗೂಡಬೇಕಿದೆ
ನಾವು ಎಲ್ಲಾ ಒಂದೇ ಎನುತ
ನಗುತ ಬಾಳಬೇಕಿದೆ
ಪಂಕಜಾ.ಕೆ.ಮುಡಿಪು
Comments
Post a Comment