Skip to main content

ಹನಿ ಹನಿ ಇಬ್ಬನಿ ಸಮಾಧಾನಕರ ವರ್ಷಧಾರೆ ಭಾವಗೀತೆ

[08/08, 2:52 PM] pankajarambhat: ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ
 
ವರ್ಷಧಾರೆ

ಬಾನಿನಲಿ ಕಟ್ಟಿರುವ
ಕರಿಮೋಡಗಳ ದಂಡು
ಹೂಮಳೆಯ ಸುರಿಸುತ್ತ
ತಂಪೆರೆಯಿತು

ಒಡಲಲ್ಲಿ ಹುದುಗಿದ್ದ
ಬೀಜಗಳು ತಲೆಯೆತ್ತಿ
ಭೂತಾಯಿ ಒಡಲು
ಬಿರಿದರಳಿತು

ನವಮಾಸ ತುಂಬಿರುವ
ಹೆಣ್ಣಿನಂದದಿ ಇಳೆ
ಹಸಿರುಡುಗೆಯಲಿ
ನಲಿದಾಡಿತು

ಕಣ್ಣು ಮನತುಂಬುವ
ಭೂರಮೆಯ  ಚೆಲುವಿಗೆ
ಕವಿಮನದಲೊಂದು
ರಾಗ  ಗುಣುಗುಣಿಸಿತು

ಇನಿಯಳ ಜತೆಯಲ್ಲಿ
ನವಿಲೊಂದು ಕುಣಿದಾಡಿ
ಕಣ್ಮನಕೆ ಹಬ್ಬವನು 
ತಂದೊಡ್ಡಿದು

ಭೋರೆಂದು ಸುರಿಯುವ
ಜಡಿಮಳೆಯ ಜತೆಯಲ್ಲಿ
ಕೋಲ್ಮಿಂಚುಗಳು ಮೂಡಿ
ಮನ ಬೆರಗಾಯಿತು

ಪಂಕಜಾ.ಕೆ. ಮುಡಿಪು
[08/08, 9:05 PM] ವಾಣಿ ಭಂಡಾರಿ ಹನಿ ಹನಿ ಇಬ್ಬನಿ ಬಳಗ: 🎪🎪🎪🎪🎪🎪🎪🎪🎪🎪🎪
*ಹನಿಹನಿಇಬ್ಬನಿ/ ಚಿಂತಕರ ಚಾವಡಿ*
❤️☔❤️☔❤️☔❤️☔❤️☔❤️
*ಇಂದಿನ ಫಲಿತಾಂಶ ಪಟ್ಟಿ*
🤓🥳🤓🥳🤓🥳🤓🥳🤓🥳🤓
*ವಾರ:-ಶನಿವಾರ*
*ದಿನಾಂಕ:-೦೮-೦೮-೨೦೨೦*
*ಪ್ರಕಾರ:-ಭಾವಗೀತೆ*
*ಅಡ್ಮಿನ್:-ವಾಣಿ ಭಂಡಾರಿ* 
🌳🌈🌳🌈🌳🌈🌳🌈🌳🌈🌳
*ಇಂದು ಹೂಮಳೆ ಹರಿಸಿದ ರಭಸಕ್ಕೆ ಇಬ್ಬನಿಯಲ್ಲಿ ಭಾವತರಂಗ ಮೀಟಿದಂತೆ ಆಗಿದೆ.ಹೂಮಳೆಯಲ್ಲಿ ನವಿರಾಗಿ ನೆಂದು,ಮಿಂದು, ಮೈದುಂಬಿ, ಕುಣಿದು, ಕುಪ್ಪಳಿಸಿ, ಸಂತಸದಲೆಯಲ್ಲಿ ಸುಮನಸ್ಸಿನಿಂದ ಬರೆದು ಭಾಗವಹಿಸಿದ ಸರ್ವ ಕವಿ ಹೃದಯಗಳಿಗೂ ಧನ್ಯವಾದಗಳು*
🙏🏻☔🙏🏻☔🙏🏻❤️🙏🏻☔🙏🏻☔🙏🏻
*💧ಇಂದಿನ ಅತ್ಯುತ್ತಮ ಬರಹ💧*

*🏆ಶಂಕರಾನಂದ ಹೆಬ್ಬಾಳ* 

*🌹ಉತ್ತಮ ಅಯ್ಕೆ🌹*
👉  *ಅಭಿಜ್ಞಾ ಪಿ.ಎಂ.  ಗೌಡ* 
👉  *ಶೇಕಪ್ಪ ಸತ್ಯಪ್ಪನವರ*  
👉  *ಮಹಾದೇವ್* 
*ಸಮಾಧಾನಕರ ಆಯ್ಕೆ*
👉 *ದೀಪಿಕಾ ಚಾಟೆ* 
👉 *ಲತಾ ಮಾಲತ* 
👉 *ಪಂಕಜ.ಕೆ.* 

*🥰ಅತ್ಯುತ್ತಮ ವಿಮರ್ಶಕರು🥰*
*🧐ಅಜಿತ್* 
*🌳ಉತ್ತಮ ವಿಮರ್ಶಕರು🌳*
*👉ಕೃಷ್ಣಸ್ವಾಮಿ* 
*👉ಪ್ರಮೀಳಾ ರಾಜ್* 
*👉ಅಮರೇಶ್*
*ಭಾಗವಹಿಸಿದ ಸಮಸ್ತರಿಗೂ ಅಭಿನಂದನೆಗಳು.*
🥳🌹🥳🌹🥳🌹🥳🌹🥳🌹🥳
*ನಾಳಿನ‌ ಅಡ್ಮಿನ್:-ಬಳಗದ ಸರ್ವ ಸದಸ್ಯರು*
*ನಾಳೆ ಭಾನುವಾರ ಆದ ಪ್ರಯುಕ್ತ ಕನ್ನಡ ಸಾಹಿತ್ಯದಲ್ಲಿ ನಿಮಗಿಷ್ಟವಾದ ಪ್ರಕಾರ ಬರೆದು ಇಬ್ಬನಿಯನ್ನು ಅಂದಗೊಳಿಸಿ. ಹಾಗೂ ಚಾವಡಿಯಲ್ಲಿ ವಿಮರ್ಶೆ ಅನಿಸಿಕೆ ಅಭಿಪ್ರಾಯ ಇರಲಿ*
✍️✍️✍️✍️✍️✍️✍️✍️✍️✍️✍️
*ನಮ್ಮೆಲ್ಲರಿಗೂ ಬರೆಯುವ ಅವಕಾಶವನ್ನು ನೀಡುತ್ತಿರುವ ಅಡ್ಮಿನ್ ಖುಷಿ ಕೃಷ್ಣ ಅವರಿಗೆ ನಮನಗಳು*
🦚🌹🦚🌹🦚🌹🦚🌹🦚🌹🦚
*🌚ಶುಭರಾತ್ರಿ*🌚

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...