Skip to main content

ಕೊನೆಯಿಲ್ಲದ ದಾರಿ ಕಥೆ

21  ಕೊನೆಯಿಲ್ಲದ ದಾರಿ
  
ರಾಕೇಶನ ಕಾಲುಗಳು  ಕೊನೆಯಿಲ್ಲದ ಆ ದಾರಿಯಲ್ಲಿ ನಡೆಯುತ್ತಾ ಇದ್ದರೂ  ಮನಸು ಮಾತ್ರ ಕಳೆದು ಹೋದ  ದಿನಗಳನ್ನು   ಮೆಲುಕು ಹಾಕುತ್ತಿತ್ತು
                     ಚಿಕ್ಕಂದಿನಿಂದಲೂ ಬಡತನದಲ್ಲಿ ಬೆಳೆದ ರಾಕೇಶ ನಿಗೆ ಹಣದ ಬೆಲೆ ತಿಳಿದಿತ್ತು .ಆದ್ದರಿಂದ  ಶಾಲೆಗೆ ಹೋಗುತ್ತಿದ್ದಾಗಲೇ ಬೆಳಗ್ಗಿನ ಜಾವ  ಬೇಗನೆ ಎದ್ದು ಮನೆ ಮನೆಗೆ ಪೇಪರ್ ಹಾಕಿ ಸಂಪಾದನೆ ಮಾಡಿ ತನ್ನ ಶಾಲಾ ಪುಸ್ತಕ ಇತ್ಯಾದಿ ಸಣ್ಣಪುಟ್ಟ ಖರ್ಚುಗಳನ್ನು ಭರಿಸುತ್ತಿದ್ದ..
                 ಓದಿನಲ್ಲಿ ಜಾಣನಾಗಿದ್ದ ರಾಕೇಶ್ ಪ್ರತಿ ತರಗತಿಯಲ್ಲು  ಪ್ರಥಮ ಸ್ಥಾನ ಬಂದು  ಎಸ್.ಎಸ್.ಎಲ್.ಸಿ ಯಲ್ಲಿ  ರಾಜ್ಯಕ್ಕೆ ಪ್ರಥಮ ಸ್ಥಾನ ಬಂದು ಆ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದ. ಆತನ ಮುಂದಿನ ಓದಿನ ಖರ್ಚನ್ನು ಸರಕಾರವೇ ಭರಿಸಿದ್ದರಿಂದ ರಾಕೇಶ್ ತನ್ನ ವಿದ್ಯಾಭ್ಯಾಸವನ್ನು ಪೂರೈಸಿ  ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ಹಾಗೂ ತನ್ನ. ಮನೆಯವರ ಬಡತನವನ್ನು ನೀಗಿಸಿದ್ದಲ್ಲದೆ  ತನ್ನಂತೆ ಬಡ  ಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಲಾಗದ   ಎಷ್ಟೋ ಜನರನ್ನು ತನ್ನ ಖರ್ಚಿನಲ್ಲಿ ಓದಿಸಿದ್ದು . ಅವರೆಲ್ಲಾ ಇಂದು ಉತ್ತಮ ಕೆಲಸದಲ್ಲಿದ್ದು .ರಾಕೇಶನ ಬಗ್ಗೆ ಅಭಿಮಾನವಿಟ್ಟು ಕೊಂಡಿದ್ದರು. 
                   ಎಷ್ಟೊಂದು  ಸುಂದರವಾಗಿತ್ತು  ನನ್ನ ಸಂಸಾರ  ಪತ್ನಿ ರಮಾ ನನ್ನ ಬೇಕು ಬೇಡಗಳನ್ನು ತಾನು ಹೇಳುವ ಮುಂಚೆಯೇ ತಿಳಿದುಕೊಂಡು  ಮಾಡುತ್ತಿದುದರಿಂದ ತನಗೆ ಮನೆಯ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ ಮಕ್ಕಳಿಬ್ಬರೂ ತನ್ನಂತೆ  ಪ್ರತಿಭಾವಂತರಾಗಿದ್ದರು .ತನ್ನಂತೆ   ಅವರು ಕಷ್ಟಪಡಬಾರದೆಂದು ಅವರಿಗೆ ಎಲ್ಲಾ ಅನುಕೂಲತೆಗಳನ್ನು ಮಾಡಿ ಕೊಟ್ಟಿದ್ದ ತಾನು ಅವರನ್ನು ಪ್ರೀತಿಸುವುದರಲ್ಲಿಯೂ ಹಿಂದೆ ಬಿದ್ದಿರಲಿಲ್ಲ ಆದರೆ ಈಗ  ತಾನು  ಕೆಲಸದಿಂದ ನಿವೃತ್ತಿ ಗೊಂಡ ತಕ್ಷಣ ಮಕ್ಕಳಿಗೆ ತಾನು ಬೇಡವಾದೆನೇ  ಪತ್ನಿ ರಮ ಈಗ ಇರುತ್ತಿದ್ದರೆ  ತಾನು ಈ ರೀತಿ  ಮಕ್ಕಳ  ಹಂಗಣೆಯಲ್ಲಿ ಇರಬೇಕಾಗಿರಲಿಲ್ಲ . ಈಗ ಒಂಟಿ ಪಕ್ಷಿಯಾದ ತನಗೆ  ಮಕ್ಕಳ  ನಿರ್ಲಕ್ಷ್ಯ ಸಹಿಸಲಾಗುತ್ತಿಲ್ಲ . ವೃದ್ಧಾಶ್ರಮಕ್ಕೆ ತನ್ನನ್ನು ಸೇರಿಸುವ ಮಾತನಾಡುತ್ತಿರುವ ಮಕ್ಕಳ ಮಾತನ್ನು ಕೇಳಿ ತನಗಂತೂ ತುಂಬಾ ಬೇಸರವಾಗಿತ್ತು . ಇಷ್ಟಕ್ಕಾಗಿಯೇ ,ಇಂಥವರಿಗಾಗಿಯೇ  ತಾನು   ಕಷ್ಟಪಟ್ಟು  ಹಗಲು ಇರುಳೂ ದುಡಿದು ಸಂಪಾದನೆ ಮಾಡಿದ್ದು ಎಂದು  ಬೇಸರದಲ್ಲಿ ರಾತ್ರಿ ಚಳಿಗೆಂದು ಧರಿಸಿದ  ಬೆಚ್ಚನೆಯ ಉಡುಪಿನಲ್ಲಿಯೇ  ಮನೆ ಬಿಟ್ಟು ಬಂದುದಾಗಿತ್ತು .ಹೋಗುವುದು ಎಲ್ಲಿಗೆ  ತಿಳಿಯದೆ ಮುಂದೆ ಉದ್ದಕ್ಕೆ ಚಾಚಿದ ರಸ್ತೆಯಲ್ಲಿ ನಡೆಯುತ್ತಾ ಬಳಲಿ ಒಂದು ಕಡೆ ಕುಳಿತು ಬಿಟ್ಟ ರಾಕೇಶನನ್ನು ಆ ದಾರಿಯಲ್ಲಿ ಬಂದ   ಸುಮಂತ್  ನೋಡಿ   ತನ್ನ ಕಾರಿನಲ್ಲಿ ಮನೆಗೆ ಕರೆದೊಯ್ದು ಅವರನ್ನು ಉಪಚರಿಸಿ,   ಅವರ ಕಥೆಯನ್ನು ಕೇಳಿ  ನೊಂದುಕೊಂಡು ,  ಅಪ್ಪಾಜಿ ನೀವು ಇಲ್ಲೇ ಇದ್ದು ಬಿಡಿ ನನಗೂ ಮನೆಯಲ್ಲಿ ಹಿರಿಯರು ಇದ್ದರೆ  ಏನೋ ಒಂಥರ ಧೈರ್ಯ .ನಮ್ಮ ಮಗನಿಗೂ ಅಜ್ಜನ ಪ್ರೀತಿ ಸಿಗುತ್ತದೆ ಎಂದು  ಹೇಳಿದ್ದು ಕೇಳಿ ರಾಕೇಶನ ಕಣ್ಣುಗಳು ತುಂಬಿ  ಬಂತು.ಅದನ್ನು ಕಂಡ ಸುಮಂತ್ ಅಪ್ಪಾಜಿ ನೀವು ಅಳಬಾರದು  ನನ್ನಂತ ಎಷ್ಟೋ ಅನಾಥರಿಗೆ ದಾರಿ ತೋರಿಸಿದ ನೀವು ಎಂದಿಗೂ ಅನಾಥರಲ್ಲ ಆಗಲು  ನಾನು ಬಿಡುವುದೂ ಇಲ್ಲ ಎಂದು ಅವರನ್ನು ತಬ್ಬಿ ಅವರ ಮಡಿಲಲ್ಲಿ ಮಗುವಿನಂತೆ ಮಲಗಿ ಬಿಟ್ಟ ರಾಯರ ಕೈಗಳು ಸುಮಂತನ ಕೂದಲನ್ನು ಸವರುತ್ತಿದ್ದರೂ ಮನಸ್ಸು ಚಿಂತಿಸುತ್ತಿತ್ತು ಯಾರು ನಮ್ಮವರು ಎಂದು
                   
ಪಂಕಜಾ. ಕೆ. ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...