[05/10, 2:37 PM] ಪದ್ಯಾಣ ಗೋವಿಂದ ಭಟ್: ಪಂಕಜಾ.ಕೆ. ಅವರ
ಬಾಳದೋಣಿ
ಭಾವಗೀತೆ ಕುರಿತು
____________________
ಗೀತೆಯಲ್ಲಿ ಭಾವ ಹತಾಶೆಯ ರೂಪದಲ್ಲಿ ಬಿಂಬಿತವಾಗಿದೆ.ಆರ್ದ್ರತೆಯಿದೆ,ಪ್ರಾರ್ಥನೆಯಿದೆ.ಬದುಕಿನಲ್ಲಿ ಸೋಲು,ನೋವುಗಳನ್ನುಂಡು ಜೀವ ಹಣ್ಣಾಗಿ ದೇವನ ಮೊರೆ ಹೋಗಿದೆ.
ಬಲ ತುಂಬುವುದಕ್ಕಾಗಿ ವಂದನೆಯ ಉಪಚಾರ ದೇವನಿಗೆ! ನಂಬುಗೆಯ,ವಿಶ್ವಾಸದ ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಕೆಯಾಗಿದೆ.ಖಂಡಿತ ಬಯಕೆ ನೆರವೇರಲಿ!
ಒಳ್ಳೆ ಭಾವ ಗೀತೆ.ಹಾಡುವಂತೆಯೂ ಇದೆ.
[05/10, 2:42 PM] ಅನುರಾದ ಉಬರಡ್ಕ ಹವ್ಯ ಕಾವ್ಯ: ಪಂಕಜಾ ಅವರ ಬಾಳದೋಣಿ ಭಾವಗೀತೆ ಸುಲಭವಾಗಿ ಹಾಡಬಹುದಾದಂತೆ ಇದೆ. ಕಷ್ಟ ಕಾರ್ಪಣ್ಯ ಗಳಿಗೆಷ್ಟೇ ಎದೆ ಒಡ್ಡಿದರೂ ಕಟ್ಟಕಡೆಗೆ ಆ ದೇವರಲ್ಲಿ ಶಾಂತಿ ಸಮಾಧಾನಕ್ಕಾಗಿ ಶರಣಾಗತಿ ಹೊಂದುವ ಭಾವ ಕವನದಲ್ಲಿ ವ್ಯಕ್ತವಾಯಿತು. ಚಂದದ ಭಾವಯಾನ
[05/10, 2:42 PM] ಪರಿಮಳ ಅಡ್ವೊಕೇಟ್: *ಬಾಳದೋಣಿಯ ನಾವಿಕಳು ಪಂಕಜ*
ಕಂಡ ಕನಸುಗಳು ನನಸಾಗಲಾರದೇ ಕರಗಿಹೋಗುತ್ತಿವೆ, ಒಡಲು ಒಡೆದಿದೆ. ನೋವೆಂಬುದೇ ಭಾಗ್ಯದಲಿ ಉಳಿದಿದೆ. ಬದುಕಿನ ನಡೆಯು ಬರೀ ಮುಳ್ಳುಹಾದಿಯಾಗಿ ಮುಂದಡಿಯಿಡಲಾರದೇ ಕುಸಿಯುತಿರುವೆ. ಒಂದಷ್ಟು ಸಮಯಗಳು ಕಳೆದು ಹೋಗಿದೆ. ಈಗ ಮೊದಲಿನ ಉತ್ಸಾಹವೂ ಉಳಿದಿಲ್ಲ ಬಾಗಿದ ಬೆನ್ನುಮೂಳೆಯದು ಸೊರಗಿದೆ. ಜೀವ ಮರುಗಿದೆ. ಏನನ್ನೂ ಸಾಧಿಸಲಾರದೆ ಜೀವನೋತ್ಸಾಹ ಕಳೆದುಕೊಂಡ ನಿರಾಶಾಭಾವ. ಜೊತೆಯಲ್ಲೇ ಮುಂದೆಂದಾದರೂ ಒಳಿತಾಗಬಹುದೆಂಬ ಸಣ್ಣ ಆಶಾಭಾವನೆಯೂ ಕಾಣಿಸುತ್ತಿದೆ. ಅದಕಾಗಿಯೇ ದೇವರ ಮೊರೆಹೋಗಿರುವುದು. ಆ ಮನಸ್ಸು ಏಕಾಗ್ರತೆಯನ್ನು ಪಡೆಯಲಿ. ದೇವನೆಂದ ಪರಂ ತತ್ವದಲಿ ನೆಲೆದಲಿ ಎನ್ನುವ ಭಾವ.
[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು ಕಾಗೆಯ ಕಂಡರೆ ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ ದಕ್ಷ ಕೆಲಸಗಾತಿ ಸ್ವಯಂ ನಿವೃತ್ತಿಯ ನಂತರ ಸಂಪೂರ್ಣ ಮನೆಯೊಡತಿ ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ ಹೊಲಿಗೆ ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ ಮುಡಿಪು ಮೆಚ್ಚಿನ ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...
Comments
Post a Comment