Skip to main content

ಪುರಾಣದ ಕಥೆ ಲಕ್ಷ್ಮಣ ರೇಖೆ

ಪುರಾಣದ ಕಥೆ

  ಲಕ್ಷ್ಮಣ ರೇಖೆ

ಪಿತೃವಾಕ್ಯ ಪರಿಪಾಲಕನಾದ ಶ್ರೀ ರಾಮಚಂದ್ರನು ಹದಿನಾಲ್ಕು ವರ್ಷ ವನವಾಸಕ್ಕೆಂದು ಹೊರಟಾಗ ಪತಿವ್ರತಾ ಶಿರೋಮಣಿಯಾದ ಶ್ರೀ ರಾಮನ ಹೆಂಡತಿ ಸೀತಾಮಾತೆಯೂ ಅವರೊಂದಿಗೆ ಹೊರಟಳು ಕಾಡು ಮೇಡುಗಳಲಿ ಹಣ್ಣುಗಳನ್ನು ತಿನ್ನುತ್ತಾ ಅವರು   ಅಲ್ಲಿ ಒಂದು ಪರ್ಣಕುಟೀರವನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾಗ, ಮಾರೀಚನೆಂಬ ಮಾಯಾವಿ  ರಾಕ್ಷಸನು ಸೀತಾದೇವಿಯನ್ನು ಆಕರ್ಷಿಸಲು ಚಿನ್ನದ ಜಿಂಕೆಯ ರೂಪ ತಾಳಿ ಪರ್ಣ ಕುಟೀರದ ಸುತ್ತುಮುತ್ತಲಿನ ಸ್ಥಳಗಳಲ್ಲಿ ತಿರುಗಾಡುತ್ತಿದ್ದನು ..ಚಿನ್ನದ ಜಿಂಕೆಯನ್ನು ಕಂಡ ಸೀತಾದೇವಿಗೆ ಅದರ ಮೇಲೆ ಮೋಹವುಂಟಾಗಿ, ಆಕೆ ತನ್ನ ಗಂಡ ಶ್ರೀರಾಮಚಂದ್ರನಲ್ಲಿ ಅದನ್ನು ಜೀವಂತವಾಗಿ ತಂದು ಕೊಡುವಂತೆ ಪೀಡಿಸುತ್ತಾಳೆ. ಶ್ರೀ ರಾಮನು ಎಷ್ಟೆಷ್ಟೋ ಸಮಾಧಾನ ಮಾಡಿದರೂ ಸೀತಾದೇವಿ ತನ್ನ ಹಠವನ್ನು ಬಿಡುವುದಿಲ್ಲ .ಅದು ರಾಕ್ಷಸರ.ಮಾಯೆ ನಿಜವಾದ ಜಿಂಕೆಯಲ್ಲ  ಎಂದು ಹೇಳಿದರೂ ಸೀತಾದೇವಿ ತನ್ನ ಆಸೆಬಿಡದೆ ತನಗೆ ಅದು ಬೇಕೇ ಬೇಕೆಂದು ಹಠ ಹಿಡಿಯುತ್ತಾಳೆ. ಗತ್ಯಂತರವಿಲ್ಲದೆ ಶ್ರೀರಾಮನು ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ .ಹೋಗುವಾಗ ತನ್ನ ತಮ್ಮ ಲಕ್ಷ್ಮಣ ನನ್ನು ಸೀತಾದೇವಿಯ ರಕ್ಷಣೆಗೆ  ನಿಲ್ಲಿಸಿ ತಾನು ಬಿಲ್ಲು ಬಾಣ ತೆಗೆದುಕೊಂಡು ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ ಮಾಯಾವಿಯಾದ ಜಿಂಕೆ ರಾಮನನ್ನು  ಆಟವಾಡಿಸುತ್ತ ಕೈಗೆ ಸಿಕ್ಕಿಯೂ ಸಿಕ್ಕದಂತೆ ಜಾರಿಕೊಂಡು ಓಡುತ್ತಾ ನೆಗೆಯುತ್ತಾ ದಿಕ್ಕು ತಪ್ಪಿಸುತ್ತಿತ್ತು.ಅದನ್ನು ಕೊಲ್ಲದೆ ಜೀವಂತ ತರಲು ಸೀತಾದೇವಿಯ ಆಜ್ಞೆಯಾಗಿದ್ದರಿಂದ ಕೊಲ್ಲುವಂತೆಯೂ ಇರಲಿಲ್ಲ. ಜಿಂಕೆಯು ಶ್ರೀ ರಾಮನನ್ನು ದೂರ ದೂರಕ್ಕೆ  ಸೆಳೆದೊಯ್ದಿತು. ಕೊನೆಗೆ ಅನಿವಾರ್ಯವಾಗಿ  ಶ್ರೀ ರಾಮನು ಅದರ ಮೇಲೆ ಬಾಣ ಪ್ರಯೋಗ ಮಾಡಬೇಕಾಯಿತು. ಶ್ರೀರಾಮನ ಬಾಣಕ್ಕೆ ಗುರಿಯಾದ ಜಿಂಕೆ ಸಾಯುವಾಗ ಹಾ ಸೀತೆ..ಹಾ .ಲಕ್ಷ್ಮಣ  ಎಂದು ಶ್ರೀ ರಾಮನ ದನಿಯಲ್ಲಿ ಕೂಗಿ  ಪ್ರಾಣ ಬಿಟ್ಟಿತು.

             ಇತ್ತ ಪರ್ಣಕುಟೀರದಲ್ಲಿದ್ದ ಸೀತೆ ಹಾಗೂ ಲಕ್ಷ್ಮಣನಿಗೆ ಈ ಆಕ್ರಂದನವು ಕೇಳಿ  ಸಿಡಿಲು ಬಡಿದಂತಾಯಿತು. ಅದು ರಾಕ್ಷಸರ ಮಾಯೆಯಿರಬಹುದೆಂಬ ಸಂಶಯ ಲಕ್ಷ್ಮಣನಿಗೆ ಬಂತು .ಆತ ಸೀತಾದೇವಿಯನ್ನು ಸಮಾಧಾನ ಪಡಿಸಿದ .ಆದರೆ ಸೀತಾದೇವಿಯು ಕಟುಮಾತುಗಳಿಂದ ಲಕ್ಷ್ಮಣನನ್ನು ನಿಂದಿಸಿ  ಶ್ರೀ ರಾಮನ   ಸಹಾಯಕ್ಕೆ ಕೂಡಲೇ ಹೊರಟು ಹೋಗಲು ತಿಳಿಸಿದಳು .ಅತ್ತಿಗೆಯ ಕಟುಮಾತುಗಳನ್ನು ಕೇಳಲಾರದೆ  ಅತ್ತಿಗೆಯ ಆಜ್ಞೆಯಂತೆ.  ಧ್ವನಿ ಬಂದ ದಿಕ್ಕಿನತ್ತ ಲಕ್ಷ್ಮಣ  ಹೊರಡುತ್ತಾನೆ. ಹೋಗುವ ಮೊದಲು ಲಕ್ಷ್ಮಣನು ಸೀತಾದೇವಿಯ ಸುರಕ್ಷತೆಗಾಗಿ ಕುಟೀರದ ಹೊರಗೆ ಮೂರು ಗೆರೆಯನ್ನು ಎಳೆದು ಅಭಿಮಂತ್ರಿಸಿ ಅಣ್ಣನನ್ನು ಕಾಣಲು ತೆರಳಿದನು.ಇದೇ ಸಂದರ್ಭಕ್ಕೆ  ಕಾದಿದ್ದ ರಾವಣನು ಸನ್ಯಾಸಿಯ ವೇಷ ಧರಿಸಿ ಸೀತಾದೇವಿಯಲ್ಲಿ ಭಿಕ್ಷೆ ಬೇಡಿ ಆಕೆ ಲಕ್ಷ್ಮಣ ರೇಖೆಯನ್ನು ಮೀರಿ  ಹೊರಗೆ ಬರುವಂತೆ ಮಾಡಿ ಆಕೆಯನ್ನು ಅಪಹರಿಸುತ್ತಾನೆ.ಇದು ಮುಂದೆ ರಾವಣನ ಸಂಹಾರಕ್ಕೆ  ಕಾರಣವಾಗುತ್ತದೆ.ಇಲ್ಲಿ ಸೀತೆಯ ಹಠ ಲಕ್ಷ್ಮಣ ರೇಖೆಯನ್ನು ಮೀರಿ ನಡೆದ ಫಲ ಸೀತಾದೇವಿಯನ್ನು ರಾವಣನು ಅಪಹರಿಸಲು ಕಾರಣವಾಯಿತು. ಇಲ್ಲಿ ಹಾಕಿದ ಲಕ್ಷ್ಮಣರೇಖೆ ಸೀತಾದೇವಿಗೆ ಮಾತ್ರವಲ್ಲದೆ ಪ್ರಪಂಚದ ಎಲ್ಲರಿಗೂ ಅನ್ವಯಿಸುತ್ತದೆ.ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ನೈತಿಕ ಕಟ್ಟುಪಾಡುಗಳು ಲಕ್ಷ್ಮಣರೇಖೆಯಾಗಿದೆ.ಅವುಗಳನ್ನು ಮೀರಿ ನಡೆದರೆ ಅನಾಹುತ ತಪ್ಪಿದ್ದಲ್ಲ ಎನ್ನುವುದನ್ನು  ರಾಮಾಯಣದ ಈ ಪ್ರಕರಣದಿಂದ ತಿಳಿಯಬಹುದು

             

ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...