Skip to main content

Posts

Showing posts from June, 2022

ಟಂಕಾ

ತುಳು  ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ ಟಂಕಾ ದತ್ತಪದ. ಭರವಸೆ ಭರವಸೆಯು ಇದ್ದರೆ ಬಾಳಿನಲಿ ಸಿಗಬಹುದು ಸುಖ ಶಾಂತಿ ನೆಮ್ಮದಿ ಜೀವನ ಬಂಧುರವು ಪಂಕಜಾ.ಕೆ. ಮುಡಿಪು

ವರುಣನ ಒಲವು

ವರುಣನ ಒಲವು ಏನು ವೈಭವ ಮೇಘ ಗರ್ಜನೆ  ಹರಿದು ಬಾನನು ಸುರಿಸಿ ತಣ್ಣನೆ ಮಳೆಯ ನೀರನು ಇಳಿಸಿ ಬಿಮ್ಮನೆ ವರುಣ  ತಾ ಇಳೆಯ ತಬ್ಬುವನು ಮೇಘರಾಜನ ಒಲವ ಸುಧೆಯಲಿ ತನುವು ಅರಳಿಸಿ ನಲಿವ ಸುಂದರಿ ಬಾಳ  ಬಯಲಲಿ ಬಯಕೆ ತುಂಬುತ ನಾಜೂಕಿನಲಿ ತೂಗಿ ಬಾಗಿತು ಸಸ್ಯಸಂಕುಲವು ಹರಿದು ನೀರದು ಇಳೆಯ ತುಂಬಿತು ತಂಪು ಗಾಳಿಯು ಬೀಸಿ ಹಬ್ಬಿತು ಬಿಸಿಲ ಬೇಗೆಯ ತಣಿಸಿ ಎಲ್ಲೆಡೆ ಮಣ್ಣ ಗಂಧವು ಹರಡಿ ತನುವಿಗೆ ತಂಪು ತಂದಿಹುದು ಇಳೆಯ ನೋವನು ಕಳೆದು ಪಕ್ಕನೆ ತಬ್ಬಿ ಮುದ್ದಿಸಿ  ತನುವ ಅರಳಿಸಿ ಮನದಿ ಚೆಲುವಿನ  ಕನಸ ಬಿತ್ತುತ  ಓಡುತೋಡುತ ವರುಣ ಬೇಗ ಬಂದಿಹನು ಪಂಕಜಾ.ಕೆ. ಮುಡಿಪು