ಗುರುಕುಲಾ ಕಲಾ ಪ್ರತಿಷ್ಠಾನ ಅಂತರರಾಜ್ಯ ಘಟಕ ವಾರಕ್ಕೊಬದು ಸ್ಪರ್ಧೆ 20.09.2020 ಸ್ವರಚಿತ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನ ವಿಷಯ..ಪ್ರಕೃತಿ ಶೀರ್ಷಿಕೆ.. ಪ್ರಕೃತಿ ಸೊಬಗು ಬಾನ ಬಯಲಲಿ ಮುಗಿಲು ಕಾಣುತ ಮನದಿ ತುಂಬಿತು ಮೋದವು ಸುರಿದ ಮಳೆಯಲಿ ಕರಗಿ ಹೋಯಿತು ಇಳೆಯ ಮೇಲಿನ ಕೊಳೆಗಳು ಮುಗಿಲಿನೆತ್ತರ ಹಾರುತಿರುವ ಹಕ್ಕಿಗಳ ಕಲರವದಲಿ ಮನವು ನಲಿಯಿತು ನವಿಲಿನಂದದಿ ಕನಸು ಮನಸಲಿ ತುಂಬುತಾ ಏನಿದೇನಿದು ಪ್ರಕೃತಿ ವೈಭವ ಕಣ್ಣು ಮನವನು ತುಂಬಿದೆ ಹಸಿರ ಸಿರಿಯಲಿ ಮೈ ಮರೆಯುತ ನಲಿಯು ಎದೆಯಲಿ ತುಂಬಿದೆ ಹಚ್ಚ ಹಸಿರಿನ ಸೆರಗು ಹಾಸಿದೆ ಪ್ರಕೃತಿ ಮುದದಲಿ ನಲಿಯುತ ಚಿಗುರು ಹೂಗಳು ತುಂಬಿ ತುಳುಕುತ ಕಣ್ಣು ಮನವನು ಸೆಳೆಯಿತು ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಶ್ರೀ ಗಣೇಶ ಕೃಪಾ.ಮುಡಿಪು. ಅಂಚೆ.ಕುರ್ನಾಡು.ದ.ಕ.574153