Skip to main content

Posts

Showing posts from June, 2019

ಕಥೆ

[25/06, 11:16 PM] pankajarambhat: ಅಂಬಾ...ಅಂಬಾ ಸುಮಾರು  ಒಂದು ವಾರಂದ  ವಿಪರೀತ ಮಳೆ ,ಹಿಡುದ ಜಡಿಮಳೆ ಬಿಡುವ ಲಕ್ಷಣ ಕಾಣುತ್ತಿಲ್ಲೆ .ಸೌಜನ್ಯ ನೋಡಿಗೊಂಡಿಪ್ಪ ಹಾಂಗೆ ಎದುರಿನ ಕಟ್ಟಡ ಮರ ಸೆಸಿ ಗುಡ್ಡೆ ಎಲ್ಲಾ ನೀರಿಲಿ ಕೊಚ್ಚಿಗೊಂಡು ಹೋವುತ್ತಾ ಇದ್ದು .ಸೌಜನ್ಯ ಇಪ್ಪ ಮನೆ  ಅಕ್ಷರಶಃ ಒಂದು ದ್ವೀಪದ ಹಾಂಗೆ ಆಯಿದು  .ಸೌಜನ್ಯ ಎಂತ ಮಾಡುದು ಹೇಳಿ ಆಗದ್ದೆ  ಹೆದರಿ ನಡುಗಿಗೊಂಡು ಇತ್ತು. ಈ ಪ್ರಳಯ ಈಮನೆಯನ್ನೂ ಆಹುತಿ  ತೆಕ್ಕೊಂಬಲೆ ಇನ್ನು ಹೆಚ್ಚು ಹೊತ್ತು ಬೇಕಾಗ ಹೇಳಿ ಅದಕ್ಕೆ ಕಂಡತ್ತು ಆನು ಸಾವಿಂಗೆ ಹತ್ತರೆ ಇದ್ದೆ ಹೇಳಿ ತಿಳುದು ಅದಕ್ಕೆ ತುಂಬಾ ದುಃಖಆತು  ಎಂತ ಮಾಡುದು ದೇವಾ ಎಲ್ಲಾ ಮುಳುಗುತ್ತಾ ಇದ್ದು ಎನಗೆ ನೀನೇ ಗತಿ ಹೇಳಿ ಯೋಚನೆ ಮಾಡಿ  ತಡಮಾಡದ್ದೆ ಅದಕ್ಕೆ ಅಗತ್ಯ ಬೇಕಾಪ್ಪ ವಸ್ತುಗಳ   ಒಂದು ಬ್ಯಾಗಿಲಿ ತುಂಬಿಸಿ  ಮನೆಯ ಮೇಲೆಹೋಗಿ ಕೆಂಪು ವಸ್ತ್ರವ  ಆಡಿಸಿಗೊಂಡು ಇದ್ದತ್ತು. ಅಷ್ಟಪ್ಪಗ ಒಂದು ದೊಡ್ಡ ಶಬ್ದ ಮಾಡಿಗೊಂಡು ಅದರ ಎದುರೇ ಇತ್ತ ದೊಡ್ಡ ಕಟ್ಟಡ ಜರುದು ಬಿದ್ದು,ಜೋರಾಗಿ ಗಾಳಿ ಬಂದು ಮೋರಗೆ ಅಪ್ಪಳಿಸಿತ್ತು. ಒಟ್ಟಿಂಗೆ ದೊಡ್ಡ ಶಬ್ದ ಮಾಡುತ್ತಾ ಬಂದ ಗುಡುಗು ಮಿಂಚು ಕಂಡು ಸೌಜನ್ಯ ಕಣ್ಣು ಕಸ್ತಲೆಬಂದು ಪ್ರಜ್ಞೆ ಕಳಕೊಂಡತ್ತು.                     ಮತ್ತೆಂತಾತೋ ಅದಕ್ಕೆ ಗೊಂತಿಲ್ಲೆ ಎಚ್ಚರಿಗೆ ಅಪ್ಪಗ ಅದು ಒಂದು ಮನೆಯ ಮಂಚಲ್ಲಿ ಮನುಗಿಗೊಂಡು ಇತ್ತು ಕಣ್ಣು ಒಡದ ಕೂಡಲೇ ಅದಕ್ಕೆ ಆನು ಎಲ್ಲಿದ್ದೆ ಹೇಳಿ ಗೊಂತ

ಗಜಲ್ 14 ಬಾನ ಬಯಲಲಿ

ಗಜಲ್. 14 ಬಾನ ಬಯಲಲಿ ಮುಗಿಲು ಹರಡಿದೆ ಮಳೆಯ ಸುರಿಸದೆ ಬಯಲು ಬಿರಿದಿದೆ ಬಿಸಿಲ ತಾಪಕೆಸುಟ್ಟು ಹೋದ ಬುವಿಗೆ ಮಳೆಯ ಸಿಂಚನ ಅಮಲು ತಂದಿದೆ ಒಣಗಿದ ಗಿಡಮರಗಳು ಚಿಗುರಿ ನಿಂತು ಭೂದೇವಿಯ ಒಡಲು ತಣಿದಿದೆ ಬೇಸಿಗೆಯಲ್ಲಿ ತಿಳಿಯಿತಲ್ಲಾ ನೀರ ಮಹತ್ವ ಮಳೆಯ ನೀರನು ಇಂಗಿಸಲು  ಪ್ರಯತ್ನಿಸಬೇಕಿದೆ ಮಳೆಕೊಯ್ಲು ನಿರಂತರವಾಗಿರಬೇಕು ಮಳೆ ಸುರಿದು ಪಂಕಜಾಳ ಮನದಲು  ಮುದ ತುಂಬಿದೆ ಪಂಕಜಾ.ಕೆ.

ನನ್ನ ಪ್ರೀತಿಯ ಅಪ್ಪ

ನನ್ನ ಪ್ರೀತಿಯ ಅಪ್ಪ ಹೊತ್ತುಹೆತ್ತುಮುದ್ದಾಡಿರಬಹುದು ಅಮ್ಮ ನೂರಾರು ಚಿಂತೆ ನೋವುಗಳ ಎಡೆಯಲೂ ಹೆಣ್ಣು ಗಂಡು ಎಂಬ ಭೇದಭಾವವ ತೋರದೆ ಮಕ್ಕಳೆಲ್ಲರನು ಪ್ರೀತಿಯಿಂದ ನೋಡುತ ಒಳ್ಳೆಯ ದಾರಿಯಲಿ ನಡೆಯಲು ಕಲಿಸಿ ಹೆಜ್ಜೆ ಹೆಜ್ಜೆಗೂ ಕಣ್ಣ ರೆಪ್ಪೆಯ ತೆರದಿ ನೀ ಕಾಯ್ದು ತಂದೆ ನಮ್ಮೆಲ್ಲರನ್ನು ಒಂದು ನೆಲೆಗೆ ನಿಮ್ಮ ನೆನಪು ಅನುದಿನವು ಮನದಲಿ ತುಂಬಿರಲು ನಿಮಗೊಂದು ದಿನವಿಟ್ಟು ನೆನೆಯಬೇಕೆ ನೀವು ಇಂದು ನಮ್ಮನಗಲಿದರೂ ನಮ್ಮೊಡನೆಯೇ ಇರುವ ಭಾವ ಮನದಿ ನಿಮ್ಮನೆನಪೊಂದೊಂದೂ ಮಧುರ ನೆನಪು ಮರೆಯಲಾರೆ ನಿಮ್ಮ ಪ್ರೋತ್ಸಾಹ ದ ನುಡಿಗಳ ನಿಮ್ಮ ಆ ಧೀಮಂತ ವ್ಯಕ್ತಿತ್ವದ  ನೆನಪು ಮಾಸಲಾರದೆಂದಿಗೂ ನಿತ್ಯಅದು  ನಮಗೊಂದು ಬೆಳಕು ಪಂಕಜಾ .ಕೆ.

ಕನಸು

.ಕನಸು ನಿನ್ನ ಕಂಡಾಗಲೆಲ್ಲಾ ಮನದಲೇನೋ ತಲ್ಲಣ ಕನಸಿನೂರಿಗೆ  ಸಾಗುತಿದೆ ಪಯಣ ಕನಸಿನ ಉಯ್ಯಾಲೆಯಲಿ ತೂಗುತಿದೆ ಮನಸು ಭಾವದಲೆಗಳಲಿ ತೇಲುತಿದೆ ಕನಸು ತುಂಬಿ ಹರಿವ ತೊರೆಯಂತೆ ಜೀವನ ಒಲವ ರಸ ತುಂಬಿ ಬಿರಿವ  ಹೂಬನ ತಲ್ಲಣಗಳ ಭಾರದಲಿ ಮುಳುಗಿ ಹೋದ ಮನಸು ನೀ ಬಂದು ತುಂಬಿತದರಲ್ಲಿ  ಸವಿಯಾದ  ಕನಸು ಮಳೆ ಬಂದು ಇಳೆಯ ತಬ್ಬಿದಾಗಿನ ಆನಂದ ನೀ ಜತೆಯಲಿರಲು ಬಾಳಲ್ಲಿ ತುಂಬುತಿದೆ  ಮಕರಂದ ಪಂಕಜಾ.ಕೆ. ಮುಡಿಪು

ಕವಿಗೋಷ್ಠಿ ವಸಂತ ಸಾಹಿತ್ಯೋತ್ಸವ

ವಸಂತ ಸಾಹಿತ್ಯೋತ್ಸವ ವಿ.ಬಿ. ಕುಲಮರ್ವ ಅವರ ಮನೆಯಲೊಂದುಕವನವಾಚನದ ಅವಕಾಶವು ಒದಗಿದ ಸುದಿನವಿದು ತುಂಬಿದಸಾಹಿತ್ಯಾಭಿಮಾನಿಗಳೆಡೆಯಲಿ ಚಂದದಿ ಜರುಗಿತು ಕವಿಗೋಷ್ಠಿ ಸಭಾಕಂಪನವ ಹತ್ತಿಕ್ಕುತ ನಾನು ಓದಿದೆ ಚಂದದ ಕವಿತೆಯನು ಕೊಟ್ಟರು ಸ್ಮರಣಿಕೆಒಂದನು ಇಂದು ನೆನಪಿನ ದೋಣಿಯ ಪಯಣಕ್ಕೆ ಸ್ವರಚಿತ ಕವನವ ಓದುವ ಅವಕಾಶವ ಒದಗಿಸಿದರೀ ದಂಪತಿಗಳು ಸಾಹಿತ್ಯ ಸೇವೆಯ ನಿರಂತರ ಮಾಡುವ ಶಿಕ್ಷಣ ಕ್ಷೇತ್ರದ ತಾರೆಗಳು ಸಲ್ಲಿಸುವೆನಿವರಿಗೆ  ನನ್ನಯ ವಂದನೆ ನಿರಂತರ ಹರಿಯಲಿ ಪ್ರೋತ್ಸಾಹದ ದಾರೆ ಪಂಕಜಾ.ಕೆ. ಕವನ ವಾಚನಕ್ಕೆ ಅವಕಾಶ ಮಾಡಿಕೊಟ್ಟ ವಿ.ಬಿ. ಕುಲಮರ್ವ ದಂಪತಿಗೊಕ್ಕೆ ಧನ್ಯವಾದಂಗ ಳ ಸಲ್ಲಿಸುತ್ತಾ ಬರೆದೆ ಈ ಪುಟ್ಟ ಕವನ🙏🙏

ಹನಿಗವನ ಅರಳಿದೆ ಕಮಲ

ಅರಳಿದೆ  ಕಮಲ ಅರಳಿದೆ ಇಂದು ದೇಶದೆಲ್ಲೆಡೆ ಕಮಲ ಚದುರಂಗದಾಟದಲಿ ಗೆದ್ದವರದೆ  ಕಾಲ ಏರಿತು ಚುನಾವಣೆಯ ಕಾವು ಬಡಿಯಿತು ಎಲ್ಲರಿಗೆ ರಾವು ಗೆದ್ದು ಬಂದರು  ಇಂದು ಮೋದಿ ತುಳಿಯಬೇಕವರಜತೆ ಹೊಸ ಹಾದಿ ಪಂಕಜಾ.ಕೆ

ಆಶೆ. ನಿರಾಶೆ

ಆಸೆ    ನಿರಾಸೆ ಬಾಂದಳವೆಲ್ಲಾ ಮುಗಿಲನು ಕಟ್ಟಿ ಆಸೆಯ ಮನದಲಿ ಮೂಡಿಸಿತು ಕಟ್ಟಿದ ಮೋಡದಎಡೆಯಲಿ ಇಣುಕುತ ರವಿಯಣ್ಣನು ಬಂದನು ಭರದಿಂದ ಕಟ್ಟಿದ ಆಶೆಯ ಬಲೆಯದು  ಹರಿದು ತಂದಿತುಮನಕೆ ದುಗುಡವನು ಮಳೆಯಲಿ ಮೀಯುವ ಆಸೆಯು ಬತ್ತಿ ನಿರಾಸೆಯ ಮನದಲಿ ಮೂಡಿಸಿತು ಪಂಕಜಾ.ಕೆ.

ಇನಿಯ ಸುರಿಸಿದ ಮುತ್ತು

ಇನಿಯ ಸುರಿಸಿದ ಮುತ್ತು   ಬಾನು ತುಂಬಿದ ಮುಗಿಲ ಕಂಡು ಆಶೆ ನಿರಾಶೆಯ ತೊಟ್ಟಿಲಲ್ಲಿ ತೂಗಿ ವಿರಹದುರಿಯಲಿ  ತನುವು ಕಾದು ನರಳುತ್ತಿದ್ದಾಕ್ಷಣ ಮನದಿ ತುಂಬಿದ ವಿರಹವ ಕಳೆದು ಒಲವ ತನಿರಸವನು ಉಣಿಸುತ ವರುಣ ಬಂದನು  ಭರದಲಿ ಇಳೆಯ ಕಾತರವ ತಣಿಸುತ ಒಲವ ತನಿರಸವ ಸವಿ ಸವಿದು ಇಳೆಯು ಕುಣಿ ಕುಣಿದು ನರ್ತಿಸುತ ಬೀಗಿ ಬಾಗಿದ ಕ್ಷಣದಲಿ ಬಳುಕಿ ನಿಂತಿತು ತರುಲತೆಗಳು ಒಡಲಲ್ಲಿ ಅಡಗಿದ್ದ ಬೀಜಗಳು ತಲೆ ಎತ್ತಿ ಭೂತಾಯಿ ಒಡಲಿನಿಂದ ಮೇಲೆದ್ದು ಮೈಮನದಲಿ ಉಲ್ಲಾಸವ ತುಂಬುತ್ತಾ ತಣಿಸಿತು ಇಳೆಯ  ಬೇಗೆಯನು ಇನಿಯ ಸುರಿಸಿದ ಮುತ್ತು ಹನಿಗಳು ಭೂದೇವಿಯ ಮುಕುಟ ಮಣಿಯಾಗಿ ಬಾಡಿ ಬಸವಳಿದ ಒಡಲ ತಣಿಸಿ ಜೀವಕೋಟಿಗಳಿಗೆ ತಂದಿತು ಹರ್ಷದುಸಿರನು ಪಂಕಜಾ.ಕೆ.

ರಾಧಾ ಮಾಧವ

       ರಾಧಾ ಮಾಧವ ಮುರಳಿಗಾನದಿ ಮೈ ಮರೆತಳಾ ರಾಧೆ ಒಲವ ಗಾನದಲಿ ಒಲಿಸುವನೆಂದುಕಾದಳಾ  ಮುಗುದೆ ಮಾಧವನ ಸುಳಿವಿಲ್ಲದೆ ಬಸವಳಿದಿದೆ ತನು ಚಂದ್ರಕಾಂತಿಯ ಇರುಳ ಕತ್ತಲಿನಲೂ ಕಂಪಿಸುತ್ತಿದೆ ತನು ಪ್ರೇಮದಾರತಿಯನು ಹೊತ್ತಿಸಿ ಕಾದೆ ಬಂದೇ ಬರುವೆಯೆಂದು ಮನ ತೆರೆದು ಕಾದೆ ಮುರಳಿ ಲೋಲನಾಗಮನದಲಿ  ಖುಷಿ ರಾಧೆಯ ಮೊಗವರಳಿ ಹೊಮ್ಮುತ್ತಿದೆ ಕಾಂತಿ ಬೃಂದಾವನದಲಿ ಹಕ್ಕಿಗಳ ಮಧುರ ಗಾನ ವಸಂತನಾಗಮನಕೆ ಅರಳುವ ಹೂಬನ ಮಾಧವನ ಒಲವಿನಾಸರೆಯ  ಪಾನ ರಾಧೆಯ ಮನದಲಿ ಮಾಧವನದೇ ಧ್ಯಾನ ಬುವಿಯಲಿ  ನವಿಲ ನರ್ತನದ ಚಂದ ಒಲವಿನ ರಸದಲಿ ಬದುಕಿನಾಸರೆಯ ಬಂಧ ರಾಧಾಮಾಧವರ  ಪ್ರೀತಿಯ   ಅನುಬಂಧ ಮುರಳೀ ಲೋಲನ ಒಲವಿನಾಸರೆಯು ಚಂದ ಪಂಕಜಾ.ಕೆ.

ಗಜಲ್. 13 ಬೇಕು

       ಗಜಲ್ 13 ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ನೋವು ನಲಿವುಗಳನ್ನು ಒಂದಾಗಿ ಕಾಣಬೇಕು ಸಮುದ್ರದಲ್ಲಿ ಅಲೆಯ ಹೊಡೆತವದು ಸಹಜ ಜೀವನದಲ್ಲಿ ಗಟ್ಟಿಯಾಗಿ ನಿಲ್ಲುತ್ತ ಸವಾಲಾಗಿ ತೆಗೆದುಕೊಳ್ಳಬೇಕು ಲೋಕದ ಜನರ ನಡವಳಿಕೆಯಲ್ಲಿ ಇರಬಹುದು ವ್ಯತ್ಯಾಸ ಮನದಲ್ಲಿ ಶಾಂತಿಯನು ತುಂಬುತ್ತಾ ಹಾಯಾಗಿ ಇರಬೇಕು ಬೇನೆ  ಬೇಸರಗಳಿರದಿರದೇ  ಜೀವನದಲ್ಲಿ ಅಳುತ್ತಾ ಕೂರದೆ  ಎದುರಿಸಿ ಸುಖವಾಗಿ ಬಾಳಬೇಕು ಕೆಸರಿನಲ್ಲಿದ್ದರೂ ಪಂಕಜಾ ಅರಳದಿರುವುದೇ ಅಂಟಿಯೂ ಅಂಟದಂತೆ ಸಮರಸವಾಗಿ ಇರಬೇಕು ಪಂಕಜಾ.ಕೆ.

ಬಿರುಗಾಳಿ

ಬಿರುಗಾಳಿ ಕಾದು ಕಾದು ಬಂತು ಮೊದಲ ಮಳೆ ಗುಡುಗು ಮಿಂಚು ಗಾಳಿಯ ಜತೆ ಅಬ್ಬರಿಸಿ ಮಳೆ ಬೀಸುಗಾಳಿಗೆ ನೆಟ್ಟಗಿಡ ಮರಗಳು ಉರುಳಿ ರೈತ ಕಂಗೆಟ್ಟು ಹೋದ ಬಳಲಿ ಏನಿದು  ಹುಚ್ಚು ಹುಚ್ಚು ಗಾಳಿ ಉರುಳುತ್ತಿದೆ ಬುಡ ಸಮೇತ ಬಾಳೆ ನೆಟ್ಟ ಗಿಡಮರಗಳುಉರುಳಿ ನೆಲಸಮ ರೈತನಬಾಳುಬಿರುಗಾಳಿಗಿಟ್ಟ  ಸೊಡರಸಮ ಸಾಲಸೋಲದಲಿ ಸಿಕ್ಕಿ ಜೀವನ ಕಂಡ ಕನಸುಗಳೆಲ್ಲಾ ನೆಲಸಮ ಗಾಳಿಯ ಆರ್ಭಟಕೆ ಕಟ್ಟಿದ ಮುಗಿಲು ಓಡಿ ಆಶೆ ನಿರಾಶೆಯಲಿ ಮನವು  ಕಾಡಿ ಗಿಡ ಮರಗಳು ನೀರಿಲ್ಲದೆ ಒಣಗಿ ಹೊರಟುಹೋಗುತ್ತಿದೆಬಾಳ ಸವಿ ಸುಂಟರಗಾಳಿಯು ಆರ್ಭಟಿಸಿ ಸಾವು ನೋವುಗಳು ಸಂಭವಿಸಿ ಎಲ್ಲೆಲ್ಲೂ ತುಂಬಿತುಕೊಳಕು ದೂಳು ಜೀವಿಗಳಜೀವನವಾಯಿತುಗೋಳು ಕರುಣೆ ಬಾರದೆ ನಿನಗೆ ಹೇಳುದೇವಾ ಯಾಕೆ ಹೀಗೆ ಕಾಡಿಸುವೆ  ನಮ್ಮ ಜೀವ ಪಂಕಜಾ. ಕೆ

ಅನ್ನದಾತ

*ಅನ್ನದಾತ*      *~~~~~~~~~~*  ಮಳೆ ಬಿಸಿಲೆನ್ನದೆ ಚಳಿಯನು ಗಣಿಸದೆ  ಗದ್ದೆಯ ಕೆಸರಲಿ ದುಡಿಯುವನು | ಹೊಲವನು ಉಳುತಲಿ ಬೀಜವ ಬಿತ್ತುತ  ನೇಜಿಯು ಮೊಳೆಯಲು ಕಾಯುವನು || ಕಷ್ಟವ ಗಣಿಸದೆ ನಷ್ಟಕೆ ಹೆದರದೆ  ಇಷ್ಟದ ಕಾಯಕ ಮಾಡುವನು | ಸುಗ್ಗಿಯ ಕಾಲದಿ ಸಡಗರದಿಂದಲಿ ಹಿಗ್ಗುತ ಭೂಮಿಗೆ ನಮಿಸುವನು ||   ಕಾಯಕವೆಂದರೆ ದೇವರು ಎನ್ನುತ  ಬೆವರಿನ ಫಲವನು ಗಳಿಸುವನು | ನೇಗಿಲಯೋಗಿಯು ಅನ್ನವ ನೀಡುತ  ದೇಶದ ಹಸಿವನು ತಣಿಸುವನು ||  ನಮಿಸುವ ಗೆಳೆಯರೆ ದುಡಿಯುವ ರೈತಗೆ  ಅನುದಿನ ಅನ್ನವ ಕೊಡುವವಗೆ |  ಮೈಯನು ಬಗ್ಗಿಸಿ ದೇಹವ ಕುಗ್ಗಿಸಿ  ಛಲದಲಿ ಮುಂದಕೆ ನಡೆವವಗೆ ||  ಪಂಕಜಾ. ಕೆ

ಪ್ರೀತಿ. ಹೂವು

         ಪ್ರೀತಿ ಹೂವು ಪ್ರೀತಿಯ ಹೂವೊಂದು ಅರಳಿದಾಗ ಬಾಳಲಿ ಮೂಡುತಿದೆ ಹೊಸರಾಗ ಮೈಯಲಿ ತುಂಬುತಿದೆ ನವಿರು ಕಂಪನ ಬಾಳೆಲ್ಲಾ ಆಗುತಿದೆ  ಚೆಲುವಿನ ಹೂಬನ ಜೀವಸೆ ಲೆ ಯನು ಉಕ್ಕಿಸುತಿದೆ ಪ್ರೀತಿ ಹೊಮ್ಮುತಿದೆ ಮೈ ಮನದಲಿ ಕಾಂತಿ ಎಲ್ಲೆಲ್ಲೂ ತೋರುತಿದೆ ನವೀನತೆಯ ಗುಂಗು ಬಾಳಲಿ ತುಂಬುತಿದೆ ನವೋಲ್ಲಾಸದ ರಂಗು ಪ್ರೀತಿಯಿಲ್ಲದ ಮನುಜನ ಜೀವನ ಅದು ಒಂದು ಮಸಣಕ್ಕೆ ಸಮಾನ ಒಲವ  ಬಳ್ಳಿಯ  ಜೀವಜಲವೇ ಪ್ರೀತಿ ಇರಲಿ  ಎಂದೆಂದೂ ಅದರಲ್ಲೊಂದು ಮಿತಿ ಇನಿಯನರ ಮನೆಯ   ರಾಣಿ ಅದರಲ್ಲಿ ತಾನೊಬ್ಬಳೇ  ಅರಗಿಣಿ ನಿತ್ಯವೂ ಬಾಳಿನಲಿ ತುಂಬಿರಲು ಒಲವು ತುಂಬುತಿದೆ  ಹೂ ಮನದಲಿ ನಲಿವು ಪ್ರೀತಿ  ಎಂಬುದು ಚೆಲುವಾದ ದೋಣಿ ಅದರಲ್ಲಿ ಸಾಗುತ್ತಿದೆ ನಮ್ಮ ಪಯಣ ಗುರಿ  ಸೇರುವುದರಲ್ಲಿದೆ ಜೀವನ ನಗು ನಗುತಾ ಬಾಳುವುದೇ ಸಾಧನ ಪಂಕಜಾ.ಕೆ.

ಕಥೆ ಹೂಮನದ ಹುಡುಗಿ

ಹೂಮನದ ಹುಡುಗಿ           ಆ ದಿನ ಎಲ್ಲಾ ಕೆಲಸ ಬೇಗ ಮುಗುತ್ತು ಶ್ರಾವಣಿಗೆ ಹಾಂಗೆ ರಜ ಹೊತ್ತು ಹೆರ ಗಾಳಿಗೆ ಕೂಪ ಹೇಳಿ ಹೆರ ಲಾನ್ಲಿ ಕೂದು ಸುತ್ತಲ ಪ್ರಕೃತಿ ಸೌಂದರ್ಯವ ಸವಿಕೊಂಡಿಪ್ಪಗ ಭಗವಂತ ಎಷ್ಟು ಕರುಣಾಮಯಿ ಹೇಳಿ ಅದಕ್ಕೆ ಕಂಡತ್ತು        ಆ ದಿನ ಮನೆಲಿ ಆರೂ ಇಲ್ಲೇ ಇವುಯಾವದೋ ಮದುವೆ ಹೇಳಿ ಹೋಗಿತ್ತವು  .ಮಕ್ಕೊ ರಜೆ ಹೇಳಿ ಅಜ್ಜನಮನೆಗೆ ಹೋಯಿದವು.  ಒಬ್ಬನೇ ಕೂದುಗೊಂಡು ಇಪ್ಪಗ ಶ್ರಾವ್ಯನ್ಗೆ ಆದರ ಹಿಂದಣ ದಿನಂಗಳ ನೆನಪು ಒಂದೊಂದಾಗಿ ಮನಸ್ಸಿಲಿ ಹಾದು ಹೋತು ಅಪ್ಪು ಅದು ಅಬ್ಬೆ ಅಪ್ಪನ ಮುದ್ದಿನ ಮಗಳು ಎರಡು ಜನ ಅಣ್ಣಂದಿರ ಪ್ರೀತಿಯ ತಂಗೆ ಮಗಳು ಬೇಕು ಹೇಳಿ ಬಯಸಿ ಬಯಸಿ ಪಡೆದ ಅಪರೂಪದ ಕೂಸು ಅದು ಅದೆಂತದೋ ಒಂದು ದಿನ ಶಾಲೆಂದ ಬಂದ ಕೂಸು ತಲೆಸೆಳಿತ್ತು ಹೇಳಿ ಮನುಗಿತ್ತು ಅಬ್ಬೆ ಬೆಸಿಲಿಂಗೇ ನಡಕೊಂಡು ಶಾಲೆಗೆ ಹೋಗಿ ಬಂದು ಮಗಳಿಂಗೆ ಬಚ್ಚಿದ್ದು ಹೇಳಿ ಗ್ರೇಹಿಸಿ ಒರಗಿದರೆ ಕಮ್ಮಿ ಅಕ್ಕು ಹೇಳಿ ಮಗಳ ಹಾಸಿಗೆಲಿ ಮನುಗಿಸಿ ಮೈ ತುಂಬ ಹೊದೆಸಿ ಬೇರೆ ಕೆಲಸಕ್ಕೆ ಹೋದವು      ಇದ್ದಕ್ಕಿದ್ದ ಹಾಂಗೆ ಮಗಳು ನರಳುದು ಕೇಳಿ ಎಂತಾತಪ್ಪ ಹೇಳಿ ಕೈಲಿತ್ತ.ಕೆಲಸವ ಅಲ್ಲೇ.ಬಿಟ್ಟು ಅಬ್ಬೆ ಶ್ರೀಮತಿ  ಓಡಿಗೊಂಡುಬಂತು ಮಗಳ ಹಣೆ ಮೇಲೆ ಕೈ ಮಡುಗಿದ ಶ್ರೀಮತಿ ಥಟ್ಟನೆ ಕೈ ಹಿಂದಕ್ಕೆ ತೇಕೊಂಡತ್ತು ಮಗಳ ಮೈ ಕಾದ ಹಂಚಿನ ಹಾಂಗೆ ಸುಡುದು ನೋಡಿ ಅದಕ್ಕೆ ಕೈ ಕಾಲು ಆಡದ್ದ ಹಾಂಗೆ ಆತು      ಕೂಡಲೇ ಗಂಡ ಮಕ್ಕಳ ದೆನಿಗೇಳಿತ್ತು  ಅವು ಬಂದಪ್ಪದ್ದೆ ಮಗಳ.ಜ್

ಜಲಮರುಪೂರಣ

ನೀರಿನ ಒಂದೊಂದು ಬಿಂದು ಅಮೂಲ್ಯ ನಿಧಿ ಕಳೆದು ಕೊಂಡಾಗ ತಿಳಿಯುವುದು ಅದರ ಬೆಲೆ ಬೇಸಿಗೆಯ  ಬಿರು ಬಿಸಿಲಿಗೆ ಬಳಲಿ ಬೆಂಡಾದಾಗ ತಿಳಿಯುತ್ತಿದೆ ನೋಡಿ  ನಮಗೆ ನೀರ ಮಹತ್ವ ಮಳೆಯು ಸುರಿಯುವಾಗ ಉಳಿಸಬೇಕು ನೀರಿನ ಅರಿಯಬೇಕು ಜಲಮರುಪೂರಣದ ಮಹತ್ವ ನೀರಿಂಗಿಸಲುಹರಿಯುವ ನೀರಿಗೆ ಒಡ್ಡುಗಳ ಕಟ್ಟಿ ಮನೆಯ ಮಾಡಿನ ನೀರನ್ನು ಬಾವಿ ಕೆರೆ ಗಳಲಿ ಇಂಗಿಸಿ

ಗಜಲ್. ಬಹುದೇ

        ಗಜಲ್ ನೀರಿನಲಿ ಮೀನಿನ ಹೆಜ್ಜೆಯನ್ನು ಹುಡುಕಬಹುದೇ ಕ್ರೂರ ಮನುಜನಲಿ ಮಾನವತೆಯನ್ನು ಕಾಣಬಹುದೇ ಶಿಥಿಲವಾಗುತ್ತಿದೆ ಮಾನವೀಯ ಮೌಲ್ಯಗಳು ಪ್ರೀತಿವಿಶ್ವಾಸದೊಳಗೆ ಸಂಬಂಧಗಳನ್ನು  ಬಂದಿಸಬಹುದೇ ಅಹಂಕಾರದಿಂದ ಮೆರೆದಾಡಿದರೇನುಫಲ ವಿನಯ ವಿಧೇಯತೆಗಳಿಲ್ಲದೆ ಬಾಳನ್ನು ಬೆಳಗಬಹುದೇ ಮನುಜ ಜೀವನವೊಂದು ಅಮೂಲ್ಯ ನಿಧಿ ಕೆಟ್ಟ ಕಾರ್ಯಗಳನ್ನು ಮಾಡಿ ಹೆಸರನ್ನು ಉಳಿಸಬಹುದೇ ಪಂಕಜಾಳಿಗೆಎಲ್ಲರೊಡನೆ ನಕ್ಕುನಲಿಯುವ ಆಶೆ ಮುಖವಾಡಧರಿಸಿಆತ್ಮೀಯತೆಯಸವಿಯನ್ನು ಅರಿಯಬಹುದೇ ಪಂಕಜಾ. ಕೆ.