[25/06, 11:16 PM] pankajarambhat: ಅಂಬಾ...ಅಂಬಾ ಸುಮಾರು ಒಂದು ವಾರಂದ ವಿಪರೀತ ಮಳೆ ,ಹಿಡುದ ಜಡಿಮಳೆ ಬಿಡುವ ಲಕ್ಷಣ ಕಾಣುತ್ತಿಲ್ಲೆ .ಸೌಜನ್ಯ ನೋಡಿಗೊಂಡಿಪ್ಪ ಹಾಂಗೆ ಎದುರಿನ ಕಟ್ಟಡ ಮರ ಸೆಸಿ ಗುಡ್ಡೆ ಎಲ್ಲಾ ನೀರಿಲಿ ಕೊಚ್ಚಿಗೊಂಡು ಹೋವುತ್ತಾ ಇದ್ದು .ಸೌಜನ್ಯ ಇಪ್ಪ ಮನೆ ಅಕ್ಷರಶಃ ಒಂದು ದ್ವೀಪದ ಹಾಂಗೆ ಆಯಿದು .ಸೌಜನ್ಯ ಎಂತ ಮಾಡುದು ಹೇಳಿ ಆಗದ್ದೆ ಹೆದರಿ ನಡುಗಿಗೊಂಡು ಇತ್ತು. ಈ ಪ್ರಳಯ ಈಮನೆಯನ್ನೂ ಆಹುತಿ ತೆಕ್ಕೊಂಬಲೆ ಇನ್ನು ಹೆಚ್ಚು ಹೊತ್ತು ಬೇಕಾಗ ಹೇಳಿ ಅದಕ್ಕೆ ಕಂಡತ್ತು ಆನು ಸಾವಿಂಗೆ ಹತ್ತರೆ ಇದ್ದೆ ಹೇಳಿ ತಿಳುದು ಅದಕ್ಕೆ ತುಂಬಾ ದುಃಖಆತು ಎಂತ ಮಾಡುದು ದೇವಾ ಎಲ್ಲಾ ಮುಳುಗುತ್ತಾ ಇದ್ದು ಎನಗೆ ನೀನೇ ಗತಿ ಹೇಳಿ ಯೋಚನೆ ಮಾಡಿ ತಡಮಾಡದ್ದೆ ಅದಕ್ಕೆ ಅಗತ್ಯ ಬೇಕಾಪ್ಪ ವಸ್ತುಗಳ ಒಂದು ಬ್ಯಾಗಿಲಿ ತುಂಬಿಸಿ ಮನೆಯ ಮೇಲೆಹೋಗಿ ಕೆಂಪು ವಸ್ತ್ರವ ಆಡಿಸಿಗೊಂಡು ಇದ್ದತ್ತು. ಅಷ್ಟಪ್ಪಗ ಒಂದು ದೊಡ್ಡ ಶಬ್ದ ಮಾಡಿಗೊಂಡು ಅದರ ಎದುರೇ ಇತ್ತ ದೊಡ್ಡ ಕಟ್ಟಡ ಜರುದು ಬಿದ್ದು,ಜೋರಾಗಿ ಗಾಳಿ ಬಂದು ಮೋರಗೆ ಅಪ್ಪಳಿಸಿತ್ತು. ಒಟ್ಟಿಂಗೆ ದೊಡ್ಡ ಶಬ್ದ ಮಾಡುತ್ತಾ ಬಂದ ಗುಡುಗು ಮಿಂಚು ಕಂಡು ಸೌಜನ್ಯ ಕಣ್ಣು ಕಸ್ತಲೆಬಂದು ಪ್ರಜ್ಞೆ ಕಳಕೊಂಡತ್ತು. ಮತ್ತೆಂತಾತೋ ಅದಕ್ಕೆ ಗೊಂತಿಲ್ಲೆ ಎಚ್ಚರಿಗೆ ಅಪ್ಪಗ ಅದು ಒಂದು ಮನೆಯ ಮಂಚಲ್ಲಿ ಮನುಗಿಗೊಂಡು ಇತ್ತು ಕಣ್ಣು ಒಡದ ಕೂಡಲೇ ಅದಕ್ಕೆ ಆನು ಎಲ್ಲಿದ್ದೆ ಹೇಳಿ ಗೊಂತ