Skip to main content

Posts

Showing posts from October, 2019

ಗಜಲ್ ಮುಂಜಾನೆ ಬಗ್ಗೆ

ಗಜಲ್   ಮುಂಜಾನೆಯ ಮಂಜಿನಲಿ  ನಡೆಯುತಿರಲು ಮುದ ರವಿ ಉದಯಿಸುವ ಹೊತ್ತಿನಲಿರಲು ಮುದ ಪ್ರಕೃತಿ ಮಾತೆಯ ಮಡಿಲಲ್ಲಿ ನಲಿದಾಡಿದರಾಗದೆ? ಮೈ ಮನವೆಲ್ಲಾ ಉಲ್ಲಾಸ ತುಂಬುತಿರಲು ಮುದ ಎಲ್ಲೆಲ್ಲೂ ಹಸಿರು ತುಂಬಿದ ಸಿರಿಯ ವೈಭವದ ದೃಶ್ಯ ಕಣ್ಣು ತುಂಬುವ ಚೆಲುವ ನೋಡುತ ಕುಳಿತಿರಲು ಮುದ  ಮರಗಿಡಗಳು ಹೂಹಣ್ಣುಗಳಿಂದ ತುಂಬಿ ತೊನೆದಾಡುತ್ತಿದೆಯೇ? ಹಕ್ಕಿಗಳ ಕಲರವವ ಕೇಳುತಿರಲು ಮುದ ಮಲ್ಲಿಗೆಯ ಕಂಪನು ಬೀರುತಿದೆ ಬೀಸುವ ತಂಗಾಳಿ ಚುಮುಚುಮು ಚಳಿಯಲಿ ಕಚಗುಳಿಯಿಡುತಿರಲು ಮುದ ತಾವರೆ ಕೊಳದಲಿ ಅರಳಿವೆ ಬಣ್ಣ ಬಣ್ಣದ ನೈದಿಲೆಗಳು ಬಾನಿನಲಿ ಕಲಸಿದ ಚಿತ್ತಾರಗಳ ಕಾಣುತಿರಲು ಮುದ ಪಂಕಜಾಳಿಗೆ ಸೂರ್ಯೋದಯದ ಬೆಡಗಿನಲಿ ನಲಿಯಲು ಆಶೆ ಬಗೆ ಬಗೆ ಹೂಗಳ ಗಂಧವನು ಸವಿಯುತಿರಲು ಮುದ ಪಂಕಜಾ.ಕೆ

ಅಂತರ

ಅಂತರ ನನ್ನ ನಿನ್ನ ನಡುವೆ ಆಕಾಶ ಭೂಮಿಯಷ್ಟು ಅಂತರ ಎಂದು ಸೃಷ್ಟಿಯಾಯಿತೋ ಈ  ಅಂತರ ಪರಿಹಾರ ಕಾಣದೆ ಬಳಲಿರುವೆ ನಲ್ಲ ದಾರಿಕಾಣದೆ ಪರದಾಡುತಿರುವೆ ಬಿಡಿಸಲಾರದೆ ಈ ಅಂತರದ  ಕಗ್ಗಂಟು ನಾ ಮಾಡಿದ ತಪ್ಪೇನು ಹೇಳು ನಲ್ಲ ತಿಳಿಯದೆ ನೋಯುತಿರುವೆ ನಿರಂತರ ನೀ ದೂರಹೋದರೆ ನಾ ಬಾಳಲಾರೆ ಅಂತರವ ಸರಿಸುತ್ತ ಮನವ ತಣಿಸು ನನ್ನ ನಿನ್ನೊಳಗೆ ಬೇಡ ಈ ಹಮ್ಮು ಬಿಮ್ಮು ಇರಲಿ ಎಂದೆಂದೂ ಪ್ರೀತಿ ಒಲವು ಒಮ್ಮೆ ನೀ ಬಳಿಗೆ ಬಂದು ನಕ್ಕು ಬಿಡು ಈ ಹೃದಯ ನಿನಗಾಗಿ ಮಿಡಿಯುತ್ತಿದೆ ಅಂತರಂಗವ ತೆರೆದಿಟ್ಟು ಕಾದಿರುವೆ ಹೇಗಿದ್ದವಳು  ಹೇಗಾದೆ ಎಲ್ಲವೂ ನಿನಗಾಗಿ ಹೃದಯದ ದನಿ ಕೇಳದೆ ನಿನಗೆ ಯಾಕೆ ದೂರವಾದೆ ಹೇಳು ನೀ ಪ್ರಿಯ ಇನ್ನಾದರೂ ಸರಿಯಲಿ ನನ್ನ ನಿನ್ನ  ಈ ಮುಸುಕಿನೊಳಗಿನ ಗುದ್ದಾಟ ಆಗಿದ್ದೇ ಸಾಕು ಬಿಡು ನಿನ್ನ ಕೋಪ ತಾಪವ ಯಾರಿಗೂ ಸುಖವಿಲ್ಲ ಈ ಮೌನ ಯುದ್ಧ ಸಾಕಿನ್ನು ನಿತ್ಯ ಈ ಮೌನ ಹೋರಾಟ ಸವೆಯಬೇಕಿದೆ ಬಾಳ ದಾರಿ ಇನ್ನು ಬಹುದೂರ ಒಂಟಿ ಪಯಣವಿದು ಮನಕೆ  ಬಲು ಕಷ್ಟ ಇದ್ದಾಗ ಕೋಪತಾಪದಿ ಸುಡಲೇಕೆ ಬಾಳು ನಲುಗೀತು  ನೋಡು ನಮ್ಮ ಪ್ರೀತಿಯ ಹೂವು ಪ್ರೀತಿ ತುಂಬಿದ ಮನವವಿರಲು ನಗುನಗುತಿರಲೇನಿದೆ ಖರ್ಚು ಸರಿಸು  ಬಾ ನನ್ನ ನಿನ್ನ ನಡುವಿನ  ಈ ಅಂತರ ಪಂಕಜಾ ಕೆ

ನಮಿಸುವೆ ದೇವಿ

ನಮಿಸುವೆ ದೇವಿ ಹಣತೆಯ ಬೆಳಗುತ  ರಂಗೋಲಿ ಇಟ್ಟು ಕಾದಿರುವೆ ನಿನ್ನ ಸ್ವಾಗತಕೆ ಮಲ್ಲಿಗೆ ಮಾಲೆಯ ಕಟ್ಟುತ  ಮನವು ನಿನ್ನನೇ ನೆನೆಯುತ್ತಿದೆ ಸಾವಿರ ದೀಪದ ಸಾಲುಗಳೊಂದಿಗೆ ಬಗೆ ಬಗೆ ಹೂಗಳ ಅರ್ಪಿಸುವೆ ಕುಂಕುಮ ಅರ್ಪಿಸಿ ಕರಗಳ ಮುಗಿದು ಮೌನದಿ ನಿನಗೆ ಪೊಡಮಡುವೆ ಅನುದಿನ ನಿನ್ನ  ಚರಣವ ನೆನೆಯುತ ನಮಿಸುವೆ ದೇವಿ ಕೊಡು ವರವ ಮನದ ಕತ್ತಲೆ ಕಳೆದು ಸುಜ್ಞಾನದ ಬೆಳಕನು ತೋರಿ ಕೈ ಹಿಡಿದೆಮ್ಮನು ನೀ ನಡೆಸು ಕರಗಳ  ಮುಗಿದು ಶಿರವನು ಬಾಗಿ ಭಕ್ತಿಯಲಿ ನಿನ್ನನು ಸ್ತುತಿಸುವೆನು ಭಕ್ತಿಗೆ ಒಲಿಯುತ ವರಗಳ ಕೊಡುತ ಪೊರೆ  ನೀ ಎಮ್ಮನು ಅನವರತ ಪಂಕಜಾ.ಕೆ.

ಅಂತರ ಆಕಾಶ ವಿಷಯದ ಬಗ್ಗೆ

ಅಂತರ ನನ್ನ ನಿನ್ನ ನಡುವೆ ಆಕಾಶ ಭೂಮಿಯಷ್ಟು ಅಂತರ ಎಂದು ಸೃಷ್ಟಿಯಾಯಿತೋ ಈ  ಅಂತರ ಪರಿಹಾರ ಕಾಣದೆ ಬಳಲಿರುವೆ ನಲ್ಲ ದಾರಿಕಾಣದೆ ಪರದಾಡುತಿರುವೆ ಬಿಡಿಸಲಾರದೆ ಈ ಅಂತರದ  ಕಗ್ಗಂಟು ನಾ ಮಾಡಿದ ತಪ್ಪೇನು ಹೇಳು ನಲ್ಲ ತಿಳಿಯದೆ ನೋಯುತಿರುವೆ ನಿರಂತರ ನೀ ದೂರಹೋದರೆ ನಾ ಬಾಳಲಾರೆ ಅಂತರವ ಸರಿಸುತ್ತ ಮನವ ತಣಿಸು ನನ್ನ ನಿನ್ನೊಳಗೆ ಬೇಡ ಈ ಹಮ್ಮು ಬಿಮ್ಮು ಇರಲಿ ಎಂದೆಂದೂ ಪ್ರೀತಿ ಒಲವು ಒಮ್ಮೆ ನೀ ಬಳಿಗೆ ಬಂದು ನಕ್ಕು ಬಿಡು ಈ ಹೃದಯ ನಿನಗಾಗಿ ಮಿಡಿಯುತ್ತಿದೆ ಅಂತರಂಗವ ತೆರೆದಿಟ್ಟು ಕಾದಿರುವೆ ಹೇಗಿದ್ದವಳು  ಹೇಗಾದೆ ಎಲ್ಲವೂ ನಿನಗಾಗಿ ಹೃದಯದ ದನಿ ಕೇಳದೆ ನಿನಗೆ ಯಾಕೆ ದೂರವಾದೆ ಹೇಳು ನೀ ಪ್ರಿಯ ಇನ್ನಾದರೂ ಸರಿಯಲಿ ನನ್ನ ನಿನ್ನ  ಈ ಮುಸುಕಿನೊಳಗಿನ ಗುದ್ದಾಟ ಆಗಿದ್ದೇ ಸಾಕು ಬಿಡು ನಿನ್ನ ಕೋಪ ತಾಪವ ಯಾರಿಗೂ ಸುಖವಿಲ್ಲ ಈ ಮೌನ ಯುದ್ಧ ಸಾಕಿನ್ನು ನಿತ್ಯ ಈ ಮೌನ ಹೋರಾಟ ಸವೆಯಬೇಕಿದೆ ಬಾಳ ದಾರಿ ಇನ್ನು ಬಹುದೂರ ಒಂಟಿ ಪಯಣವಿದು ಮನಕೆ  ಬಲು ಕಷ್ಟ ಇದ್ದಾಗ ಕೋಪತಾಪದಿ ಸುಡಲೇಕೆ ಬಾಳು ನಲುಗೀತು  ನೋಡು ನಮ್ಮ ಪ್ರೀತಿಯ ಹೂವು ಪ್ರೀತಿ ತುಂಬಿದ ಮನವವಿರಲು ನಗುನಗುತಿರಲೇನಿದೆ ಖರ್ಚು ಸರಿಸು  ಬಾ ನನ್ನ ನಿನ್ನ ನಡುವಿನ  ಈ ಅಂತರ ಪಂಕಜಾ ಕೆ

ಕೂಡಿ ಬಾಳಬೇಕು

ಕೂಡಿ ಬಾಳಬೇಕು ಮನೆಯೆಂದ ಮೇಲೆ ಜನರಿರಬೇಕು ಜನರಿದ್ದಲ್ಲಿ ಭಿನ್ನಾಭಿಪ್ರಾಯ ಸಹಜವಲ್ಲವೇ? ಒಂದೇ ತಾಯಿಯ ಮಕ್ಕಳಲ್ಲೂ ಇದೆ ಕೈಯ ಬೆರಳುಗಳಂತೆ ಭಾವ ವ್ಯತ್ಯಾಸ ತಿಳಿದು ನಡೆಯಲು  ಬೇಕು ಒಡೆಯದಂತೆ ಮನೆಯ ನಡೆಸಬೇಕು ಸಾಂತ್ವನವ ಕೊಟ್ಟು ಪಡೆಯುತ  ಮನೆ ಮಂದಿಯ ಜತೆ  ಕೂಡಿ ಬಾಳಬೇಕು ಎಲ್ಲರೊಡನೆ ನಗುತ ನಗಿಸುತ  ಬಾಳಿ ಜೀವನ ಸಾರ್ಥಕ್ಯ ಪಡೆಯಬೇಕು ಸಾಂತ್ವನಿಸುವ ಕೈಗಳಿರಲು ಕಷ್ಟ ಸುಖಗಳ ದೋಣಿ ಸರಾಗ ಹರಿದೀತು ಇದನರಿತರೆ ಬಾಳು ಬಂಗಾರವಾದೀತು ಸುಖ ಶಾಂತಿ ನೆಮ್ಮದಿಯ ತವರಾದೀತು ಪಂಕಜಾ.ಕೆ

ಹೆಣ್ಣು (ಹನಿ ಕವನ)

ಹೆಣ್ಣು ಹೆಣ್ಣೆಂದು ಜರೆಯುವರು  ಹೆಣ್ಣೊಂದು ಹುಟ್ಟಿದರೆ ತಿಳಿಯುವರು ಹುಣ್ಣೆ0ದು  ಹೆಣ್ಣು ಹೆತ್ತವರ ಕಣ್ಣಲ್ಲಿ ಸುರಿಸುವರು ಕಣ್ಣೀರು  ಹೆತ್ತವಳು ಹೊತ್ತವಳು ಪ್ರೀತಿಯಿಂದ ಸಲಹಿದವಳು ಅತ್ತಾಗ ತಾ ಅತ್ತು ನಕ್ಕಾಗ ತಾ ನಗುತ   ಕಂದನ ಏಳ್ಗೆಯಲಿ ಕಣ್ಣಾದವಳು ಹೆಣ್ಣಲ್ಲವೇ? ನಗು ನಗುತ  ಸಂಸಾರದ ಭಾರವನು ತಾ ಹೊತ್ತು ನಲ್ಲನಿಗೆ ಸಿಹಿ ಮುತ್ತ ಹಂಚಿ ನೋವ ನುಂಗುತ  ಬದುಕಿದವಳು ಹೆಣ್ಣಲ್ಲವೇ? ಪಂಕಜಾ.ಕೆ

ಗಜಲ್ 31

ಗಜಲ್ ನಿನ್ನ ಸುಮಧುರ ಗಾನದಲಿ ಮೈಮರೆಸಿದೆ ನಲ್ಲ ಕೋಗಿಲೆಯಇಂಪಾದ ದನಿಯಂತೆ ಕೇಳಿಸಿದೆ ನಲ್ಲ ಸಂಗೀತವು ಮನದ ಬೇಸರ ಕಳೆಯುವ ಸಾಧನ ಮದುರಾನುಭೂತಿಯಲಿ ನನ್ನ ತೇಲಿಸಿದೆ ನಲ್ಲ ಗಾನಸುಧೆಯಲಿ  ಅದೆಂತ ಅಮಲು  ಮನಕೆ ಸಂತಸವ ತುಂಬಿಸಿದೆ  ನಲ್ಲ ತಾಳವಿಲ್ಲದ ಗಾಯನ ಕರ್ಣಕಠೋರ   ಧ್ವನಿಯ ಮಾಧುರ್ಯ ಮರುಳಾಗಿಸಿದೆ ನಲ್ಲ ಸರಸ್ವತಿಯು  ಒಲಿದರೆ ಎಲ್ಲವೂ ಸಾಧ್ಯ ಹಾಡಲು ಕಲಿಯ  ಬೇಕೆನಿಸಿದೆ  ನಲ್ಲ ಗಾಯಕರಿಗೆ ಸಿಗುತಿದೆ ಮಾನ ಸನ್ಮಾನ ರಾಗದಲೆಗಳಲಿ ಮುಳುಗಿಸಿದೆ ನಲ್ಲ ಪಂಕಜಾಳ ಸಾನ್ನಿಧ್ಯವಿರಲು  ಮನಕೆ ಉಲ್ಲಾಸ ಹಾಡುಹಕ್ಕಿಯಂತೆ ಇರಲು ಬಯಸಿದೆ ನಲ್ಲ ಪಂಕಜಾ.ಕೆ.

ಗಜಲ್ 30

ಗಜಲ್ ನಿನ್ನ ಮುರಳಿಯ ಗಾನದಲಿ ಮೈ ಮರೆತೆ ಕೃಷ್ಣ ಮೋಹನರಾಗದಲೆಗಳಿಗೆ ಸೋತೆ ಕೃಷ್ಣ ಬೃಂದಾವನದಲಿ ಗೋಪಿಯರ ಒಡನಾಟದ ಮೋದ ರಾದೆಯ  ಮನವ ಸೆಳೆದು ಕದ್ದೊಯ್ದೆಯಂತೆ ಕೃಷ್ಣ ಭಾವದಲೆಗಳ ತೇರಿನಲಿ ಕಂಪಿಸುತ್ತಿದೆ ತನುವು ಸಪ್ತ ಸಾಗರದಲಿ ನೀನಿರುವೆಯಂತೆ  ಕೃಷ್ಣ ಭಕ್ತಿಯೊಂದೇ ಮಾಧವನನ್ನುಒಲಿಸುವ ಸಾಧನ ಒಲಿದು ಬರದೇಕೆ ದೂರ ನಿಂತೆ ಕೃಷ್ಣ? ಯಮುನಾ ತೀರದಲಿ ಒಡನಾಡಿದೆವಂದು ಪಂಕಜಾ ಳ ಮನದಲ್ಲೂ ನಗುತ ಕುಳಿತೆ ಕೃಷ್ಣ ಪಂಕಜಾ.ಕೆ.

ಹಾಷ್ಯ ಚುಟುಕು ಚಂದ

ಹಾಸ್ಯ ಚುಟುಕು ಚಂದ ಹೆಂಡತಿ. ಎಲ್ಲರೂ ನನ್ನನ್ನೇ ನೋಡುತ್ತಾ ಇದ್ದಾರೆ ನಾನೆಷ್ಟು ಚಂದ ಇದ್ದೇನೆ ನೋಡಿ ರೀ ಗಂಡ...ಅದು ಹಾಗಲ್ಲ ಕಣೆ ನೀನು ಒಲೆಯ  ಬೂದಿಯನ್ನು ಮುಖಕ್ಕೆ ಹಚ್ಚಿದ್ದಿಯಾ ಅದಕ್ಕಿರಬಹುದು ಪಂಕಜಾ.ಕೆ

ಜಾತಿ ಹನಿಕವನ

ಜಾತಿ ಜಾತಿಯ ಹೆಸರಲಿ ಕಿಚ್ಚನು ಹಚ್ಚುತ ಸಂತಸಪಡುತಿಹರು ಮೀಸಲಾತಿಯಅಡಿಯ ಫಲವನು ಪಡೆಯುತ ಪ್ರತಿಭೆಯ ತುಳಿಯುವರು ಉರಿಯುವ ಬೆಂಕಿಗೆ ತುಪ್ಪವ ಸುರಿಯುತ ಮೈಯನು ಕಾಸುವರು ನೀತಿಯು ಇಲ್ಲದಜಾತಿಯು ಇದ್ದರೆ ಏಳಿಗೆ ಎಲ್ಲಿಹುದು? ಜಾತಿಯ ಭೇದವ ತೊಡೆಯುತ ದಿನವೂ ವಿಶ್ವಮಾನ್ಯತೆ ಪಡೆಯೋಣ ಪಂಕಜಾ ಕೆ

ಅತ್ತಿಗೆಯ ನೆನಪಲ್ಲಿ ಸಾಯುಜ್ಯ6.10 2019

ಅತ್ತಿಗೆಯ ನೆನಪಲ್ಲಿ ಕರುಳಕುಡಿಗಳ ಬಿಟ್ಟು ಕರ್ತವ್ಯದ ಕರೆಯಲಿ ವ್ಯಸ್ಥಳಾಗಿರಲು ನಾನಂದು ಮನಕೆ ದೈರ್ಯವ ಕೊಟ್ಟು ನೀನಿಂತೆ ಅವರ ಪಾಲನೆಗೆ ನಿನ್ನ ಸಹಕಾರವಿರಲು ನಿರಾಳವಾಗುತ ಕರ್ತವ್ಯವನು ನಿರ್ವಹಿಸಿ ದಕ್ಷೆ ನಾನೆಂದು ಹೆಸರು ಪಡೆದೆ ಮಾತೆ ಮಮತೆಯ ತೋರಿ ಮನೆಮನವ ಗೆದ್ದು ನೀನಿಂದು ಅಮರಳಾದೆ ಮಾತಿನರಗಿಣಿ ನೀನು ಮೌನವಾಗಿಹೆಯಿಂದು ಮನೆಯಲ್ಲಿ ತುಂಬಿರುವುದೀಗ ಮೌನ ಸಾಮ್ರಾಜ್ಯ ಹುಡುಕುತಿದೆ ಕಣ್ಣುಗಳು ಮನೆಯ ಮೂಲೆ ಮೂಲೆಗಳಲ್ಲೂ ತುಂಬುತಿದೆ ಕಣ್ಣೀರು ನಿನ್ನ ಸವಿನೆನಪಿನಲಿ ನೀ ಮಾಡಿರುವ ಸಹಾಯ ಸಹಕಾರಗಳ ನೆನೆಯುತ್ತ ನಿನ್ನ ನೆನಪಲಿ ಇಂದು ನಾ ದಿನಕಳೆಯುತಿರುವೆ ಎಲ್ಲಿರಲಿ ನೀನಿಂದು ನಿನ್ನಾತ್ಮ ದೇವ ಪಾದವ ಸೇರಿ ಸದ್ಗತಿಯ ಪಡೆಯಲೆಂದು ದೇವ ಸನ್ನಿಧಿಯಲ್ಲಿ ಶಿರಬಾಗಿ ನಮಿಸುತ್ತ ನಾ ಬೇಡುತಿರುವೆ ಪಂಕಜಾ.ಕೆ

ಒಡನಾಟ ಚಿತ್ರದುರ್ಗದ ಕವಿಗೋಷ್ಠಿಗೆ ಹೋದ ಸಂಧರ್ಭ

ಒಡನಾಟ ಪ್ರಜ್ವಲಿಪ ದೀಪದ ಜತೆಯಲ್ಲಿ ಸಾಗಿ ಪಡೆದೆ ನಾನಿಂದು ಕವಿ ಕವಯಿತ್ರಿಯರ ಒಡನಾಟದ ಬಾಗ್ಯ ಕಳೆದ ಮಧುರ ಕ್ಷಣಗಳ ನೆನಪು ಮರೆಯಲಾರದ ಸವಿ ಸವಿ ನೆನಪು ಸಜ್ಜನರ ಒಡನಾಟ ಹೆಜ್ಜೇನು ಸವಿದಂತೆ ಗಾದೆ ಮಾತಿದು ಸುಳ್ಳಲ್ಲ ಎನ್ನುವ ಸತ್ಯವ ಕಂಡೆನಿಂದು ಕ್ಷಣ ಕ್ಷಣಕೂ ಅನಂದದಿ ಬಿರಿಯುತ್ತಿದೆ ಹೃದಯ ಎನಿತು ಭಾಗ್ಯವೋ ಕಾಣೆ ನಿಮ್ಮೆಲ್ಲರ ಒಡನಾಟದ ಹೆಜ್ಜೇನು ಸವಿದು ಕೃತಾರ್ಥಳಾದೆ ನಿಂದು ಪ್ರೀತಿ ವಿಶ್ವಾಸ ತುಂಬಿದ ಹೃದಯಗಳ ಒಡನಾಟ ಹಿಗ್ಗಿ ಹೂವಾದ ಹೃದಯ ಸುರಿಸಿತು ಆನಂದ ಭಾಷ್ಪ ನಮಿಸುವೆ ನಿಮಗೆ ಕವಿ  ಬಾಂದವರೆ ಸ್ಥಿರವಾಗಿರಲಿ ಈ ನಿಮ್ಮ ಪ್ರೀತಿಯ ಬಂದ ಹಸಿರಾಗಿರಲಿ ನಮ್ಮ ಈ ಬಾಂಧವ್ಯ ಪಂಕಜಾ.ಕೆ.

ಪ್ರಶ್ನೆಯಾಗಿದೆ

ಪ್ರಶ್ನೆಯಾಗಿದೆ ಮನೆಯ ಮಾಡಿನಲಿ ಪುಟ್ಟ ಗೂಡನು ಕಟ್ಟಿ ಚಿಲಿ ಪಿಲಿ ಗಾನವ ಹಾಡುತ್ರ ನಲಿದಾಡುತ್ತಿದ್ದ ಪುಟ್ಟ ಹಕ್ಕಿಗಳೆಲ್ಲಿ? ಜುಳು ಜುಳು ಹರಿಯುವ ನದಿ ಬೆಟ್ಟ ಗುಡ್ಡಗಳಲ್ಲಿ ತುಂಬಿದ ಹಸಿರು ಸ್ವಚ್ಛಂದ ವಾಗಿ ಸಂಚರಿಸುತ್ತಿದ್ದ ಬಗೆಬಗೆಯ ಪ್ರಾಣಿಗಳೆಲ್ಲಿ? ಬತ್ತಿದೆ ಊರ ಬಾವಿಯ ನೀರು ಅಂತರ್ಜಲ ವನು ಕೊರೆದರೂ ಸಿಗಲಾರದ  ಸಿಹಿ ನೀರು ಮಾನವನ ದುರಾಶೆಗೆ ಪ್ರಕೃತಿ ನಾಶ ಉತ್ತರವ ಹುಡುಕುತ್ತ ಅಲೆಯುತಿದೆ ಮನಸು ಪ್ರಕೃತಿ ಸಿರಿಯಲ್ಲಿ ಕಳೆದು ಉಲ್ಲಾಸವ ತುಂಬುವ ಬಯಕೆ ಬೇಯುತ್ತಿದೆ ಮೈ ಮನಗಳು ಪ್ರಕೃತಿ ನಾಶದ ಬಗ್ಗೆ ಅಳಿಯುತ್ತಿದೆ ಪ್ರಾಣಿ ಪಕ್ಷಿ ಸಂಕುಲ ಪ್ರಕೃತಿ  ಮುನಿದರೆ  ಇರಬಲ್ಲೆವೇ ನಾವು? ಯಾರೊಡನೆ ಹೇಳಲಿ ನನ್ನ ಈಅಳಲು ಕಾಯುವವನೆ ಕೊಲುವಂತಾದಾಗ ರಕ್ಷಣೆಗೆ ಯಾರಿಹರು ಉತ್ತರವೇ ಸಿಗದ ಪ್ರಶ್ನೆಗಳಿವು ಪಂಕಜಾ.ಕೆ

ಹಾಸ್ಯ ಚುಟುಕು ಚಂದ

ಹಾಸ್ಯ ಚುಟುಕು ಚಂದ ಹೆಂಡತಿ. ಎಲ್ಲರೂ ನನ್ನನ್ನೇ ನೋಡುತ್ತಾ ಇದ್ದಾರೆ ನಾನೆಷ್ಟು ಚಂದ ಇದ್ದೇನೆ ನೋಡಿ ರೀ ಗಂಡ...ಅದು ಹಾಗಲ್ಲ ಕಣೆ ನೀನು ಒಲೆಯ  ಬೂದಿಯನ್ನು ಮುಖಕ್ಕೆ ಹಚ್ಚಿದ್ದಿಯಾ ಅದಕ್ಕಿರಬಹುದು ಪಂಕಜಾ.ಕೆ

ನನ್ನೊಲವೇ ನೀನು

ನನ್ನೊಲವೇ ನೀನು ನನ್ನೆದೆಯ ಬಾಂದಳದಿ ನಗೆ ಹೂವ ಹನಿಸುತ್ತ ಸುಗಂಧ ಬೀರುವ ಕುಸುಮ ನೀನು ನಿನ್ನ ಒಡನಾಟದಲಿ ನವಿಲ ನರ್ತನದ ಬಾವ ತನು ಮನವ ಸೆಳೆವ ಸೊಬಗಿ  ನೀನು ಬಾಳ  ದೋಣಿಯ ಏರಿ ನೀ ಬಂದ  ಆ ಹೊತ್ತು ಒಲವ ಪಯಣಕೆ ಜತೆಯಾದೆ  ನೀನು ಸವಿಯಾದ  ಕನಸಿಂದು ಮೈ ಮನಕೆ ಪುಳಕ ಕನಸನೂರಿನ ಮುದ್ದು ಚೆಲುವೆ ನೀನು ನನ್ನೊಲವೆ ನೀನಿರಲು ಮನದಲೇನೋ ಹರ್ಷ ಬಾಳಲ್ಲಿ ಚೆಲು ಬಣ್ಣ ತುಂಬಿದೆ ನೀನು ಪಂಕಜಾ ಕೆ.

ವಿಮರ್ಶೆ ಬಾಳ ದೋಣಿ

[05/10, 2:37 PM] ಪದ್ಯಾಣ ಗೋವಿಂದ ಭಟ್: ಪಂಕಜಾ.ಕೆ. ಅವರ ಬಾಳದೋಣಿ ಭಾವಗೀತೆ ಕುರಿತು ____________________ ಗೀತೆಯಲ್ಲಿ ಭಾವ ಹತಾಶೆಯ ರೂಪದಲ್ಲಿ ಬಿಂಬಿತವಾಗಿದೆ.ಆರ್ದ್ರತೆಯಿದೆ,ಪ್ರಾರ್ಥನೆಯಿದೆ.ಬದುಕಿನಲ್ಲಿ ಸೋಲು,ನೋವುಗಳನ್ನುಂಡು ಜೀವ ಹಣ್ಣಾಗಿ ದೇವನ ಮೊರೆ ಹೋಗಿದೆ. ಬಲ ತುಂಬುವುದಕ್ಕಾಗಿ ವಂದನೆಯ ಉಪಚಾರ ದೇವನಿಗೆ! ನಂಬುಗೆಯ,ವಿಶ್ವಾಸದ ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಕೆಯಾಗಿದೆ.ಖಂಡಿತ ಬಯಕೆ ನೆರವೇರಲಿ! ಒಳ್ಳೆ ಭಾವ ಗೀತೆ.ಹಾಡುವಂತೆಯೂ ಇದೆ. [05/10, 2:42 PM] ಅನುರಾದ ಉಬರಡ್ಕ ಹವ್ಯ ಕಾವ್ಯ: ಪಂಕಜಾ ಅವರ ಬಾಳದೋಣಿ ಭಾವಗೀತೆ ಸುಲಭವಾಗಿ ಹಾಡಬಹುದಾದಂತೆ ಇದೆ. ಕಷ್ಟ ಕಾರ್ಪಣ್ಯ ಗಳಿಗೆಷ್ಟೇ ಎದೆ ಒಡ್ಡಿದರೂ ಕಟ್ಟಕಡೆಗೆ ಆ ದೇವರಲ್ಲಿ ಶಾಂತಿ ಸಮಾಧಾನಕ್ಕಾಗಿ‌ ಶರಣಾಗತಿ ಹೊಂದುವ ಭಾವ ಕವನದಲ್ಲಿ‌ ವ್ಯಕ್ತವಾಯಿತು. ಚಂದದ ಭಾವಯಾನ [05/10, 2:42 PM] ಪರಿಮಳ ಅಡ್ವೊಕೇಟ್: *ಬಾಳದೋಣಿಯ ನಾವಿಕಳು ಪಂಕಜ* ಕಂಡ ಕನಸುಗಳು ನನಸಾಗಲಾರದೇ ಕರಗಿಹೋಗುತ್ತಿವೆ, ಒಡಲು ಒಡೆದಿದೆ. ನೋವೆಂಬುದೇ ಭಾಗ್ಯದಲಿ ಉಳಿದಿದೆ. ಬದುಕಿನ ನಡೆಯು ಬರೀ ಮುಳ್ಳುಹಾದಿಯಾಗಿ ಮುಂದಡಿಯಿಡಲಾರದೇ ಕುಸಿಯುತಿರುವೆ. ಒಂದಷ್ಟು ಸಮಯಗಳು ಕಳೆದು ಹೋಗಿದೆ. ಈಗ ಮೊದಲಿನ ಉತ್ಸಾಹವೂ ಉಳಿದಿಲ್ಲ ಬಾಗಿದ ಬೆನ್ನುಮೂಳೆಯದು ಸೊರಗಿದೆ. ಜೀವ ಮರುಗಿದೆ. ಏನನ್ನೂ ಸಾಧಿಸಲಾರದೆ ಜೀವನೋತ್ಸಾಹ ಕಳೆದುಕೊಂಡ ನಿರಾಶಾಭಾವ. ಜೊತೆಯಲ್ಲೇ ಮುಂದೆಂದಾದರೂ ಒಳಿತಾಗಬಹುದೆಂಬ ಸಣ್ಣ ಆಶಾಭಾ

ಬಾಳ ದೋಣಿ

ಬಾಳ. ದೋಣಿ ಒಡಲು ಬಿರಿದಿದೆ ಕನಸು ಕರಗಿದೆ ಮನಸು ನೋವಲಿ ಮಿಡಿದಿದೆ ಬಾಳ ಬಯಲಲಿ ಮುಳ್ಳು ಹರಡಿದೆ ಬದುಕು  ಬಾರವಾಗಿದೆ ಬಾಳ ತೇರನು ಎಳೆಯಲಾರದೆ ಬೆನ್ನು ಮೂಳೆಯು ಬಾಗಿದೆ ದೇವ ಕರುಣೆಯ ತೋರಿ ಕಳೆದುದೆಲ್ಲವ ಮರಳಿಸು ಬಾಳ ದೋಣಿಯ ತೇಲಿಸು ನಿತ್ಯ ವಂದನೆ ಸಲಿಸುತ ಮನವು ನಿನ್ನಲೇ ನೆಲೆಸಿದೆ ತನುವು ಕರುಣೆಯ ಕೋರಿದೆ ನನ್ನದೆಲ್ಲವು ನಿನ್ನದೆನುತ ನಾನು ಎಂಬುದ ಮರೆತಿದೆ ಮನಸು  ಶಾಂತಿಯ ಬಯಸಿದೆ ಪಂಕಜಾ ಕೆ

ನಮೋ ದುರ್ಗೆ ಭಕ್ತಿಗೀತೆ

ನಮೋ ದುರ್ಗೆ   (ಭಕ್ತಿಗೀತೆ) ನವರಾತ್ರಿಯು ಬಂತಮ್ಮ ನವದಿನಗಳು ನಿನಗೆ ಮುಡಿಪಮ್ಮ ನವದುರ್ಗೆಯೇ ಬಾರಮ್ಮ ನಮಿಸುವೆ ನಿನಗೆ ನೋಡಮ್ಮ ಅಭಯ ಹಸ್ತವ ತೋರಮ್ಮ ಅನುದಿನ ನಮ್ಮನು ಪೊರೆಯಮ್ಮ ಅರ್ಚನೆ ಮಾಡುವೆ ಒಲಿಯಮ್ಮ ಆರತಿ ಬೆಳಗುವೆ ಕರುಣಿಸಮ್ಮ ನಿನ್ನನೇ ನಂಬಿರುವೆ  ದುರ್ಗಮ್ಮ ನೀನೇ ಗತಿಯೆನಗೆ ಕಾಯಮ್ಮ ನಾನು. ಎಂಬುದ ಕಳೆಯಮ್ಮ ನಿನ್ನಲ್ಲೇ  ಶರಣು ಬಂದಿಹೆ ನೋಡಮ್ಮ ಅರಸಿನ ಕುಂಕುಮ ಅರ್ಪಿಸುವೆನಮ್ಮ ಆಯುರಾರೋಗ್ಯಗಳ ಕೊಡು ಅಮ್ಮ ಅನಂದದಿ ಇರಲು ಹರಸಮ್ಮ ಅಗಣಿತ ಮಹಿಮಳು ನೀನಮ್ಮ ಭಕ್ತಿಯಲಿ  ನಿನಗೆ ಪೊಡಮಡುವೆ ಬೇಗನೆ ಬಂದೆನ್ನ ಹರಸು ದುರ್ಗಮ್ಮ ಬೇಡಿದ ವರಗಳ ಕೊಡು ಅಮ್ಮ ಬಾರೇ  ಬೇಗನೆ ನನ್ನಮ್ಮ ಪಂಕಜಾ ಕೆ

ಬದುಕು ಕವನದ ಬಗ್ಗೆ ವಿಮರ್ಶೆ

[03/10, 3:25 PM] pankajarambhat: ಪಂಕಜಾ ಕೆ ರವರ ಬದುಕು ದಿನ ಬೆಳಗಾದರೆ ಸಂಘರ್ಷ ಎತ್ತಲೂ ಸಿಗುತ್ತಿಲ್ಲ ಈ ಮನಕೆ ಹರ್ಷ ಎಂಬ ಕೊರಗಿನೊಂದಿಗೆ ಈ ಮೂರು ದಿನದ ಬದುಕಿನ ಬಂಡಿಯನ್ನು ಕಣ್ಣ ಮುಂದೆ ಚೆನ್ನಾಗಿ ಬಿಂಬಿಸಿದ್ದೀರಿ ಮೇಡಂ 👏👏 ಮನುಜ ಮನುಜನಲ್ಲಿ ನಂಬಿಕೆ ಯಿಲ್ಲದ ಮನೋಸ್ಥಿತಿ ಯು ದಿನೇ ದಿನೇ ಹೆಚ್ಚಾಗುತ್ತಿದ್ದು,  ಸಂಘರ್ಷ ಗಳಿಗೆ ಇಂಬು ನೀಡುವಂತಾಗಿದೆ,  ಭಾವನೆಗಳು ಬರಿದಾಗಿ ಯಾಂತ್ರಿಕ ಜೀವನದಿಂದ ಬೇಸತ್ತು ಹೋಗಿ ಪ್ರೀತಿ ವಿಶ್ವಾಸ ದ ಬದುಕನ್ನು ಬಯಸುತ್ತಿರುವ ಮನದ ಭಾವನೆಗಳ ಅನಾವರಣ ಚೆನ್ನಾಗಿ ಮೂಡಿಬಂದಿದೆ 🙏🙏🙏 ಧನ್ಯವಾದಗಳು 👏👏👏 ಗೋವಿಂದಪ್ಪ ಕವಿಗಳು 2    [03/10, 3:25 PM] pankajarambhat: ಪಂಕಜಾ ಮುಡಿಪು‌ ಅವರ ಬದುಕು ಕವನ‌ ಚೆನ್ನಾಗಿದೆ. ಯಾರನ್ನು‌ ನಂಬಬೇಕು ಬೇಡ ಎನ್ನುವ ದ್ವಂದ್ವ ಕವನದಲ್ಲಿದೆ. ಪ್ರಸ್ತುತ ದಿನಗಳಲ್ಲಿ ನಂಬಿಕೆ,ಪ್ರೀತಿ ವಿಶ್ವಾಸಗಳು  ಅರ್ಥ ಕಳೆದುಕೊಳ್ಳುತ್ತಿವೆ ಎಂಬುದು ಕವಯಿತ್ರಿಯ ಅಳಲು ಕವನದಲ್ಲಿದೆ ಅನುರಾಧ ಉಬರಡ್ಕ ಕವಯಿತ್ರಿ 3....[03/10, 3:28 PM] pankajarambhat: *ಬರಡಾಗುತಿರುವ ಬಾಳಿನ ಸಂಘರ್ಷ* ತಾವೇ ಎಳೆದುಕೊಂಡ ಸಂಘರ್ಷ ದಲಿ ನಡೆವ ದಾರಿಯೂ ಮರೆತು, ಅಲೆದಾಡುತ್ತಿದ್ದಾನೆ. ಅಹಂಕಾರವು ಕಾಲ ಬಳಿಯಿಂದ ಮೇಲೆದ್ದು, ತಲೆಯ ಮೇಲೆ ಕುಳಿತು ತಾಂಡವವಾಡುತಿದೆ. ಅದರ ಅಟ್ಟಹಾಸಕೆ, ಉಳಿದೆಲ್ಲವೂ  ದೂರ ಹೋಗಿ  ಬರಡಾಗುದೆ. ಮನಸ್ಸು ಮನಸ್ಸನ್ನು ನಂಬದ ಸ್ಥಿತಿ. ಪ್ರ

ಬದುಕು

ಬದುಕು ನೂರು ಸಂಘರ್ಷಗಳ  ನಡುವೆ ಎತ್ತ ಸಾಗಬೇಕೆನ್ನುವುದ ತಿಳಿಯದೆ ಬರಿದೆ ಸಾಗುತಿದೆ ಜೀವನ ನಾನು ನನ್ನದೆನ್ನುವ ಅಹಂಕಾರ ಮೋಹ ಮದ ಮತ್ಸರಗಳ ಹಾರ ತುಂಬಿ ತುಳುಕಿ ಬರಡಾಗುತಿದೆ ಜೀವನ ನೆರೆಯವನನ್ನೂ ನಂಬಲಾಗದ ಸ್ಥಿತಿ ಒಬ್ಬರ ಏಳ್ಗೆಯನು ಸಹಿಸದ ಮನೋಸ್ಥಿತಿ ಪ್ರೀತಿವಿಶ್ವಾಸಕ್ಕೆ  ಬೆಲೆಯಿಲ್ಲದಾ ಗತಿ ಮನುಷ್ಯ ಮನುಷ್ಯರ ನಡುವೆ ಕಂದಕ ಮಮಕಾರದ ಸವಿಯ ತಿಳಿಯಲಾರದ ಜನ ಕಾಲನಕರೆ ಬಂದಾಗಳಷ್ಟೇ ತಪ್ಪುಒಪ್ಪುಗಳ ಪರಿವೀಕ್ಷಣ ಮುಖವಾಡದ ಬದುಕಿನಲಿ ನಲುಗುತಿದೆ ಭಾವನೆಗಳಿಲ್ಲದೆ ಬಾಳು ಬರಡಾಗುತಿದೆ ಪ್ರೀತಿ ವಿಶ್ವಾಸವಿಲ್ಲ ದೆ ಬದುಕು ಕೊರಡಾಗುತಿದೆ ಪಂಕಜಾ.ಕೆ

ವಿಮರ್ಶೆ ಕ್ಷಮಿಸುವೆಯಾ ಕವನದ ಬಗ್ಗೆ

*ಪಂಕಜ  ಅವರ ಕವನದ ಕುರಿತು ಒಂದೆರಡು ಮನದ ಮಾತು* 🙏🙏🙏🙏🙏🙏🙏🙏 *ಪ್ರೀತಿ ತುಂಬಿ ಹರಿಯುವಾಗ ಅದರ ಅರಿವು ನಮಗೆ ಇರುವುದಿಲ್ಲ ಅದು ದೂರವಾದಾಗಲೇ ನಮಗೆ ಅದರ ನೋವು ನಲಿವು ತಾಗುವುದು ಹೃದಯಕ್ಕೆ ಎಂಬ ಸಾಲುಗಳು ಸೊಗಸಾಗಿವೆ*   *ಈ ಅಂತರ ಎಂಬುದೇ ಹಾಗೆ ಕಾಡುವ ದುಸ್ವಪ್ನ ಹಾಗೆ ಸುಂದರ ಸಂಬಂಧಗಳನ್ನು ಬೇರ್ಪಡಿಸುವ ಶಕ್ತಿ ಈ ಅಂತರ ಎಂಬ ದುಃಸ್ವಪ್ನದಿಂದ ನಮ್ಮ ಸ್ನೇಹ ದೂರಾಯಿತು ಎನ್ನುವ ಸಾಲು ಸುಂದರ* *ಈ ಬಂಧ ಸಂಬಂಧಗಳಲ್ಲಿ ಯಾರಾದರೂ ಒಬ್ಬರು ಸೋಲಲೇಬೇಕು ನಾನು ಏಕೆ ಸೋಲಬೇಕು ಎನ್ನುವ ಅಂತರ ಕಾಯ್ದುಕೊಂಡರೆ ಈ ರೀತಿಯ ಸುಂದರ ಸಂಬಂಧಗಳು ಹಾಳಾಗುವುದು ಖಚಿತ ಎಂಬ ಸಾಲುಗಳು ಸೊಗಸಾಗಿವೆ* *ಬಂದ ಸಂಬಂಧಗಳು ದೂರವಾದಾಗಲೇ ಅದರ ಮಹತ್ವ ಗೊತ್ತಾಗುವುದು ಸುಂದರ ಸಂಬಂಧಗಳು ಶಾಶ್ವತವಾಗಿ ಉಳಿಯಬೇಕೆಂದರೆ ಅಂತರವನ್ನು ದೂರ ಮಾಡಿ ಬದುಕಿ ಎಂಬುದು ನೀತಿ ತುಂಬಾ ಸುಂದರವಾಗಿ* *ನೀವು ನಮ್ಮ ಬಳಗದ ಆಸ್ತಿ *ಕನ್ನಡ ಚಿತ್ರರಂಗದ ಸುರದ್ರೂಪಿ ನಟಿ ಮಹಾಲಕ್ಷ್ಮಿ ಅವರು ಇದ್ದಂತೆ ನೀವು ನಮ್ಮ ಬಳಗಕ್ಕೆ** *ಇಂತಿ ನಿಮ್ಮ ತುಂಟ*

ಕ್ಷಮಿಸುವೆಯಾ ?

ಕ್ಷಮಿಸುವೆಯಾ? ನಮ್ಮಿಬ್ಬರಲಿತ್ತು  ಒಲವು ಕಳೆಯಿತು ದಿನ ಹಲವು ಒಲವ ಸುರಿಸುವಲ್ಲಿಯೂ ನೀ ಕಾಯ್ದೆಯೇಕೆ ಅಂತರ? ಅಂತರವು ನಮ್ಮಿಬ್ಬರನು ಅಂದು  ಬೇರ್ಪಡಿಸಿತೇ? ಮನದ ಮಾತುಗಳೆಲ್ಲ ಬರಿದಾಗಿ ಹೋಯಿತೆ? ಅಂದು  ನೀನಿಟ್ಟ ಅಂತರ ನನ್ನೊಳಗೆ ತಂತು ಮತ್ಸರ ಕೆಣಕಿತೇನೋ ನನ್ನ ಸ್ವಾಭಿಮಾನವ? ಬಿರುಕು ಬಿಟ್ಟಿತು ಸ್ನೇಹ ಅನಂತರ ಅಂತರದ ಗುಟ್ಟು ತಿಳಿದಾಗ ಇಳಿಯಿತು ನನ್ನ ಗತ್ತು ಆದರೇನು ನೀನಾದೆ ಆಗ .ಪರರ  ಸೊತ್ತು ವಿರಹದ ಉರಿಯಲ್ಲಿ ಬೇಯುತಿಹೆ ನಾನು ನಿನ್ನ ನೋಯಿಸಿದೆ ಅಂದು ಕ್ಷಮಿಸುವೆಯ ಗೆಳತಿ ? ಪಂಕಜಾ.ಕೆ.