ಶ್ರೀ ಕೃಷ್ಣ ಭಕ್ತಿಗೀತೆ ಶ್ರಾವಣ ಮಾಸದ ಅಷ್ಟಮಿ ದಿನದಲಿ ದೇವಕಿ ಉದರದಲಿ ಜನಿಸುತಲಿ ಮಾವನ ಕೈಗೆ ಸಿಗದೆಯೇ ತಾನು ಮಾಯೆಯ ತೋರುತ ಬೆಳೆಯುತಲಿ ಗೋಕುಲದಲ್ಲಿ ನಂದನ ಮನೆಯಲಿ ಯಶೋದೆ ಮಡಿಲಲಿ ನಲಿದ ಬಾಲಲೀಲೆಯ ತೋರುತ ಬೆಳೆದ ನಂದನ ಕಂದ ಮುಕುಂದ ಬೆಳೆಯುತ ಗೋವುಗಳ ಕಾಯುತಲಿರುತ ಕಳೆದನು ಪುರದೆಲ್ಲರ ಭಯವನ್ನು ರಕ್ಕಸರೆಲ್ಲರ ಸದೆಬಡಿಯುತಲಿ ಗೆದ್ದನು ರಾಧೆಯ ಮನವನ್ನು ಬೆಣ್ಣೆಯ ಮೆದ್ದು ಮಣ್ಣನು ತಿಂದು ಬಾಯಲಿ ಜಗವನು ತೋರಿದನು ಕೊಳಲನು ಊದಿ ಗೋಪಿಯರೆಲ್ಲರ ಮನವನು ಸೆಳೆಯುತ ನಲಿದಿಹನು ಅಷ್ಟಮಿ ದಿನದಲಿ ಭಕ್ತಿಯಲಿ ಪೂಜಿಸಿ ವರಗಳ ಬೇಡಲು ಹರಸುವನು ಕಷ್ಟವ ಕಳೆಯುತ ಇಷ್ಟವ ಕೊಡುತಲಿ ಭಕ್ತರ ನೋವನು ಕಳೆಯುವನು ತುಳಸಿಯ ಅರ್ಪಿಸಿ ಕರಗಳ ಮುಗಿದು ಭಜನೆಯ ಮಾಡುತ ಒಲಿಸುವರು ಬಗೆ ಬಗೆ ಹೂಗಳ ಅರ್ಪಿಸಿ ಬೇಡಲು ಹರುಷದಿ ಕೊಡುವನು ವರಗಳನು ಪಂಕಜಾ ಕೆ ಮುಡಿಪು