ವರ್ಷ ವರ್ಷ ಬರುತಿದೆ
ಸ್ವಾತಂತ್ರೋತ್ಸವ
ಎಲ್ಲೆಡೆಯೂ ಹಾರುತಿರುವುದು
ನಮ್ಮ ಬಾವುಟ
ಬಂದಿತಲ್ಲ ಅಂದು ನಮಗೆ
ಸ್ವಾತಂತ್ರ್ಯ ಕತ್ತಲೆ ಕಳೆದು
ಬೆಳಕು ಬಂದಂತೆ
ಅದಕಾಗಿ ದುಡಿದು
ಹುತಾತ್ಮರಾದರೆಷ್ಟು
ಮಂದಿಯೋ
ಆದರೀಗ ಸ್ವಾತಂತ್ರವು ಸ್ವೇಚ್ಛೆಯಾಗಿದೆ
ಸ್ವಾತಂತ್ರ್ಯಕ್ಕೂ ಸ್ವೇಚ್ಚೆಗೂ
ವ್ಯತ್ಯಾಸ ತಿಳಿಯದ
ಮೂರ್ಖರಿಂದ ತುಂಬಿಹುದು
ನಮ್ಮ ಭಾರತ
ಎಲ್ಲಿ ಇದೆ ನಮಗೆ ಈಗ ಸ್ವಾತಂತ್ರ್ಯ
ನಿತ್ಯವೂ ಕಾಣುತ್ತಿರುವುದು
ಕೊಲೆ ಸುಲಿಗೆ ದರೊಡೆಗಳ
ಚಿತ್ರಣ
ಎಳೆಯ ಮಕ್ಕಳನ್ನುಕೂಡ
ಕಾಡುವ ಕಾಮುಕರೆ
ತುಂಬಿಹರು ಈಗ ಎಲ್ಲೆಡೆಯು
ಕಾಶ್ಮೀರದಲ್ಲಿ ತುಂಬಿಹುದು
ಭಯೋತ್ಪಾದನೆ
ಜೀವಕೋಟಿ ಗಿದೆಯೆ ಅಲ್ಲಿ ರಕ್ಷಣೆ
ಅಜ್ಞಾನ ಅಹಂಕಾರ ತುಂಬಿ ತುಳುಕಿದೆ
ಎಲ್ಲವನ್ನು ಮೆಟ್ಟಿ ನಾವು
ಬೆಳೆಯ ಬೇಕಿದೆ
ರೋಷ ದ್ವೇಷ ಮತ್ಸರವ
ಮರೆತು ಮೇಲು ಕೀಳು
ಜಾತಿ ಮತ ಬೇಧ ಮರೆತು
ಒಂದಾಗಬೇಕಿದೆ
ಸೋದರತೆ ಬೆಸುಗೆಯಿಂದ
ಬಾಳಬೇಕಿದೆ
ಒಂದೇ ತಾಯ ಮಕ್ಕಳೆಂದು
ತಿಳಿದು ರಾಮ ರಹಿಮ ಏಸು
ಬುದ್ಧ ಎಲ್ಲ ಒಂದೇ ದೇವರೆಂದು
ತಿಳಿಯಬೇಕಿದೆ
ಸ್ವಾತಂತ್ರ್ಯದ ಯಜ್ಞದಲ್ಲಿ
ಬದುಕು ತೆತ್ತ ಕಲಿಗಳಿಗೆ
ಕೀರ್ತಿಯನ್ನು ತರಬೇಕಿದೆ
ಭಾರತದ ಕೀರ್ತಿಯನ್ನು
ಜಗದಗಲ ಹರಡುವಂತೆ
ಹಿಂದೂ ಮುಸ್ಲಿಂ ಕ್ರಿಸ್ತ ರೆಲ್ಲ
ಒಂದಾಗಬೇಕಿದೆ
ಪ್ರೀತಿ ಗಂಧ ಪರಿಮಳವ
ಎಲ್ಲೆಡೆ ಹರ ಡ ಬೇಕಿದೆ
ಪಂಕಜಾ .ಕೆ. ಮುಡಿಪು ಕುರ್ನಾಡು
Comments
Post a Comment