ಮಳೆಯು ಸುರಿದು
ಇಳೆಯ ತಬ್ಬಿ ಹರುಷ
ತಂದಿತು ಮನಸಿಗೆ
ನೀರ ಹರಿವು ತುಂಬಿ
ತುಳುಕಿ ಆಯಿತಲ್ಲಿ ಹೊಳೆ
ಕೊಚ್ಚಿಹೋಯಿತು ಕೊಳೆ
ಬಿಸಿಲ ಬೇಗೆಗೆ ಹೊತ್ತಿ
ಉರಿದ ಧರೆಗೆ ತಂದಿತು
ತಂಪು ಕಂಪಿನ ಉಸಿರನು
ಕೆರೆಕೊಳ ಕಟ್ಟೆಗಳು
ಉಕ್ಕಿ ಹರಿದವು ಭರದಲ್ಲಿ
ತುಂಬಿ ನಿಂತಿತು ನೀರು
ಚಂಡಮಾರುತ ಬಂದು
ಜನಜೀವನ ತತ್ತರ
ಮನೆ ಮಠ ಮುಳುಗಿ ಹೋಗಿ
ಬಾಳು ಆಯಿತು ದುರ್ಭರ
ಜೀವ ಕೋಟಿಗಳೆಲ್ಲ ನರಳಿ
ನಾಶವಾಯಿತು ಜೀವನ
ಹಸಿರು ಕಾಡನು ಕಡಿದು ಮನುಜ
ಕಾಂಕ್ರೀಟ್ ಕಾಡನು ಕಟ್ಟಿದ
ನೀರ ಹರಿವಿಗೆ ಜಾಗವಿಲ್ಲದೆ
ಕುಸಿದು ಹೋಯಿತು ಮನೆ ಮಠ
ಹಸಿರು ಕಾಡಿನ ಬದಲು
ಕಾಂಕ್ರೀಟ್ ಕಾಡು ಬೆಳೆಸಿದ ಫಲವಿದು
ಪ್ರಕೃತಿ ಉಳಿವು ನಮ್ಮಉಳಿವು
ತಿಳಿಯುವುದೆಂದಿಗೆ ಮನುಜಗೆ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment