ಪ್ರಕೃತಿ ಮುನಿದಾಗ
ಗುಡ್ಡ ಬೆಟ್ಟಗಳ ಕಡಿದು
ಭೂತಾಯಿ ಗರ್ಭವ ಕೊರೆದು
ಬಗೆದು ಹರಣ ಮಾಡಿ
ಅಟ್ಟಹಾಸದಿ ಮೆರೆದೇ ನೀ
ಮಾನವನ ಕ್ರೂರತೆಗೆ
ಬಲಿಯಾಗಿ ನರಳಿದಳು
ಕಣ್ಣೀರಿಟ್ಟು ದಿನ ದಿನವೂ
ನವೆದಳು ಸವೆದಳು
ಕೆಣಕಿದೆ ಆಕೆಯ ಸಹನೆಯನೀ
ಇಂದೀಗ ಮುನಿದಳು ಆತಾಯಿ
ವರುಣನ ರುದ್ರ ನರ್ತನ
ಗುಡ್ಡ ಬೆಟ್ಟಗಳ ಕುಸಿತ
ಎಲ್ಲೆಲ್ಲೂ ಜಲಪ್ರಳಯ
ಮನೆ ಮಠಗಳು ಕೊಚ್ಚಿಹೋಗಿ
ಭೀಕರ ಪ್ರವಾಹ ಬಂದು
ಪ್ರಕೃತಿ ಮುನಿದರೆ ಮನುಜ
ಏನಿದೆ ನಿನಗೆ ಈಗ
ಮೇಲು ಕೀಳು ನಾನು ನನ್ನದು
ಎಂದು ನಿತ್ಯ ಜಗಳವ ಮಾಡಿ
ಅಹಂಕಾರ ದಿ ಮೆರೆದಾಡಿದೆ
ಪ್ರಕೃತಿ ಲೂಟಿಯ ನಿತ್ಯ ಗೈದೆ
ಪ್ರಕೃತಿ ಮುನಿದಾಗ
ಜೀವ ಉಳಿಸಲು ಇಂದೀಗ
ನೀ ಪರದಾಡುತಿರುವೆ
ಪ್ರಕೃತಿ ಮುನಿದಾಗ
ಮನುಜಗೆಲ್ಲಿದೆ ಜಾಗ
ಎಲ್ಲವೂ ಜಲಪ್ರಳಯದಲಿ
ಕೊಚ್ಚಿ ಹೋಗಿ
ಇರುವುದೊಂದೆ ಜೀವ
ಬೇಕಿತ್ತೆ ನಿನಗೆ ಈ ಅಹಂಕಾರ
ಮೋಹ ಮದ ಮಮಕಾರ
ಪ್ರಕೃತಿ ಯ ಹರಣ ಮಾಡುವ
ಈ ನೀಚಬುದ್ಧಿ
ಪಂಕಜಾ. ಕೆ. ಮುಡಿಪು.ಕುರ್ನಾಡು
Comments
Post a Comment