ಮಳೆ ಹಾಡು
(ಮಂಗಳೂರು ಹವ್ಯಕ ವಾರ್ತೆ ಜೂಲೈ 2018 ರಲ್ಲಿ ಪ್ರಕಟಿತ)
ಆಗಸದಿ ತುಂಬಿರುವ ಮೋಡಗಳ ದಂಡು
ಭುವಿಗೆ ತಂದಿತು ಹರ್ಷದ ದಿಂಡು
ಬಾನು ಭುವಿ ಒಂದಾಗುವ ಮಳೆ
ಇಳೆಗೆ ತಂದಿತು ಹರ್ಷದ ಹೊಳೆ
ಕೆರೆಕಟ್ಟೆ ಕೊಳಗಳಲಿ ತುಂಬಿದ ನೀರು
ಪ್ರಕೃತಿಯಲಿ ತುಂಬಿದೆ ಹೂವ ತೇರು
ವರುಣನಾಗಮನದಿಂದನಲಿಯುತ್ತಿದೆ ಪ್ರಕೃತಿ
ತೊಳೆದು ಹೋಯಿತು ಎಲ್ಲಾ ವಿಕೃತಿ
ತುಂಬಿ ತುಳುಕಲಿ ಕೆರೆ ಕಟ್ಟೆ ಹೊಳೆ
ರೈತಾಪಿ ಮಕ್ಕಳು ಬೆಳೆಯಲಿ ಬೆಳೆ
ಪ್ರಕೃತಿ ಕೊಟ್ಟಿದೆ ಹಸಿರು ಉಸಿರು
ಕಾಯಬೇಕು ನಾವು ಅದರ ಬಸಿರು
ಎಲ್ಲೆಲ್ಲೂ ತುಂಬಿರುವ ಹಸಿರು
ಕಣ್ಣು ಮನ ತುಂಬುವ ಚಿಗುರು
ಬಿರುಬಿಸಿಲಿಗೆ ಬಾಡಿಬೆಂಡಾದ ಇಳೆ
ತೊನೆದು ಕುಣಿಯಿತು ಸುರಿವ ಮಳೆಗೆ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment