ಪ್ರಕೃತಿ ಮುನಿಸು
ಬಾನು ತುಂಬಿದೆ
ಕರಿಯ ಮುಗಿಲು
ಕಪ್ಪು ಬಂಡೆಯ
ತೆರದಲಿ
ಸುರಿದ ಮಳೆಯು
ತುಂಬುತ್ತಿರುವುದು
ಜಲಪ್ರಳಯದ
ತೆರದಲಿ
ಕೆರೆ ಕೊಳ ಕಟ್ಟೆಗಳು
ಉಕ್ಕಿ ಹರಿಯಿತು ಭರದಲಿ
ರಸ್ತೆಯೆಲ್ಲನೀರು ತುಂಬಿ
ಗುಡ್ಡ ಬೆಟ್ಟಗಳುಜರಿಯಿತು
ಗುಬ್ಬಿಗೂಡಿನ ತೆರದಲಿ
ಮುಳುಗಿ ಹೋಯಿತು
ಮನೆ ಮಠ ಕೊಚ್ಚಿ
ಹೋಯಿತು ಜೀವನ
ಅರಿವೇ ಇಲ್ಲದ ತೆರದಲಿ
ಆಸ್ತಿ ಪಾಸ್ತಿ ಜಾತಿ ವಿಜಾತಿ
ಎನುತ ಕಾದ ಜಗಳವು
ಮುಳುಗಿ ಹೋಗುವ
ದಿನಗಳಲ್ಲಿ ಯಾವ
ಜಾತಿಯು ಹೇಳು ನೀ
ಪ್ರಕೃತಿ ಮುನಿದರೆ ಇರುವುದೆಲ್ಲಿ
ತುಂಬಿ ನಿಂತಿತು ಶೂನ್ಯವು
ಉಸಿರು ಒಂದೇ ಇರುವುದೀಗ
ಬಾಳ ಬಟ್ಟೆಯು ಹರಿದಿದೆ
ದೇವ ನಿನಗೆ ಕರುಣೆ
ಬಾರದೆ ಮೊರೆಯು
ಕೇಳದೆ ಆರ್ತರ
ಒಮ್ಮೆ ನೀನು ಬಂದು
ನಿಲ್ಲಿಸು ಈ ಪ್ರಳಯ ನರ್ತನ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment