[15/08, 12:21 PM] pankajarambhat: ( ಹನಿಕವನ )ಮುಕ್ತಿ
ಬ್ರಿಟಿಷರ ದಾಸ್ಯದಿಂದ ಸಿಕ್ಕಿತಂದು ಮುಕ್ತಿ
ಭ್ರಷ್ಟ ರಾಜಕಾರಣಿಗಳಿಂದ ಎಂದಿಗೆ ಮುಕ್ತಿ?
ಮಕ್ಕಳನ್ನು ಬಿಡದ ಕಾಮುಕರ ಅಟ್ಟಹಾಸ
ಮಕ್ಕಳು ಮಹಿಳೆಯರ ಮೊಗದಲಿ ಕಾಣಬಹುದೇ ಮಂದಹಾಸ?
ನಡೆಯುತ್ತಿದೆ ಸ್ವಾತಂತ್ರ್ಯದ ಹೆಸರಲಿ ಸ್ವೇಚ್ಛಾಚಾರ
ಆಗಿದೆ ಸ್ವಾತಂತ್ರೋತ್ಸವ ಕೇವಲ ಡಂಬಾಚಾರ
ಜಾತಿ ಮತ ಪಂಥಗಳಲಿ ಹೊಡೆದಾಟ
ಜಾತಿ ಬೀಜವ ಬಿತ್ತಿ ಮಾಡುವರು ಡೊಂಬರಾಟ
ಪಂಕಜಾ.ಕೆ
ವಿಮರ್ಶೆ
[15/08, 3:19 PM] pankajarambhat: ಪಂಕಜ ರವರ ಹನಿ
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಇಲ್ಲವೆಂದು ಸಮಸ್ಯೆ
ಆದರೆ ಈಗ
ಸ್ವತಂತ್ರರಾಗಿದ್ದರೂ ಭ್ರಷ್ಟಾಚಾರದ
ಅನೀತಿ ಅನ್ಯಾಯದ ದಾಸ್ಯ ಕಾಡುತಿದೆ
[15/08, 3:19 PM] pankajarambhat: ಪಂಕಜ ಮೇಡಂ ರವರ
ಹನಿಗವನ ಮುಕ್ತಿ
ಬ್ರಿಟಿಷರಿಂದ ಪಡೆದ ಈ ಸ್ವಾತಂತ್ರ್ಯ ಇಂದು ಸ್ವೇಚ್ಠಾಚಾರ ಆಗಿದೆ ಎನ್ನುವ ವಿಷಾದದ ಛಾಯೆ ನಿಮ್ಮ ಹನಿಗವನ ದಲ್ಲಿ ಪ್ರಕಟವಾಗಿದೆ.
ರಾಜಕೀಯ ಅರಾಜುಕತೆ
ನಿಲ್ಲದ ಅಮಾಯಕರ ಗೋಳು
ಇಂದಿನ ದೊಂಬರಾಟಕ್ಕೆ ಈ ಜಾತಿ ಪದ್ಧತಿ ಎಂಬ ಅನಿಷ್ಟ ವೇ ಕಾರಣ.
ಇದು ತೊಲಗದೇ ಈ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ.
ಈ ಎಲ್ಲಾ ಆಟೋಪಗಳಿಗೆ ಮುಕ್ತಿ ದೊರತಾಗಲೇ ದೇಶಕ್ಕೂ ನಿಜವಾದ ಸ್ವಾತಂತ್ರ್ಯ ಬಂದಂತೆ ಎನ್ನುವ ಆಶಯ
ಪ್ರಸ್ತುತ ದೇಶದ ವಾಸ್ತವಿಕತೆಯನ್ನು ತುಂಬಾ ಸೊಗಸಾದ ರೀತಿಯಲ್ಲಿ ಚಿತ್ರಸಿದ್ದೀರಿ ಮೇಡಂ.
👌🏼👌🏼👌🏼🙏🏾🙏🏾
#ನನಗನಿಸಿದ್ದು
ಶಶಿಧರ್ ಬಡಿಗೇರ್
Comments
Post a Comment