Skip to main content

ಮುಕ್ತಿ ಹನಿಕವನ

[15/08, 12:21 PM] pankajarambhat: ( ಹನಿಕವನ )ಮುಕ್ತಿ

ಬ್ರಿಟಿಷರ ದಾಸ್ಯದಿಂದ ಸಿಕ್ಕಿತಂದು ಮುಕ್ತಿ
ಭ್ರಷ್ಟ ರಾಜಕಾರಣಿಗಳಿಂದ ಎಂದಿಗೆ ಮುಕ್ತಿ?

ಮಕ್ಕಳನ್ನು ಬಿಡದ ಕಾಮುಕರ ಅಟ್ಟಹಾಸ
ಮಕ್ಕಳು ಮಹಿಳೆಯರ ಮೊಗದಲಿ ಕಾಣಬಹುದೇ ಮಂದಹಾಸ?

ನಡೆಯುತ್ತಿದೆ ಸ್ವಾತಂತ್ರ್ಯದ ಹೆಸರಲಿ ಸ್ವೇಚ್ಛಾಚಾರ
ಆಗಿದೆ ಸ್ವಾತಂತ್ರೋತ್ಸವ ಕೇವಲ ಡಂಬಾಚಾರ

ಜಾತಿ ಮತ ಪಂಥಗಳಲಿ ಹೊಡೆದಾಟ
ಜಾತಿ ಬೀಜವ ಬಿತ್ತಿ ಮಾಡುವರು ಡೊಂಬರಾಟ

ಪಂಕಜಾ.ಕೆ

ವಿಮರ್ಶೆ

[15/08, 3:19 PM] pankajarambhat: ಪಂಕಜ ರವರ ಹನಿ
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಇಲ್ಲವೆಂದು ಸಮಸ್ಯೆ
ಆದರೆ ಈಗ
ಸ್ವತಂತ್ರರಾಗಿದ್ದರೂ ಭ್ರಷ್ಟಾಚಾರದ
ಅನೀತಿ ಅನ್ಯಾಯದ ದಾಸ್ಯ ಕಾಡುತಿದೆ
[15/08, 3:19 PM] pankajarambhat: ಪಂಕಜ ಮೇಡಂ ರವರ
ಹನಿಗವನ  ಮುಕ್ತಿ

ಬ್ರಿಟಿಷರಿಂದ ಪಡೆದ ಈ ಸ್ವಾತಂತ್ರ್ಯ ಇಂದು ಸ್ವೇಚ್ಠಾಚಾರ ಆಗಿದೆ ಎನ್ನುವ ವಿಷಾದದ ಛಾಯೆ ನಿಮ್ಮ ಹನಿಗವನ ದಲ್ಲಿ ಪ್ರಕಟವಾಗಿದೆ.

ರಾಜಕೀಯ ಅರಾಜುಕತೆ
ನಿಲ್ಲದ ಅಮಾಯಕರ ಗೋಳು
ಇಂದಿನ ದೊಂಬರಾಟಕ್ಕೆ ಈ ಜಾತಿ ಪದ್ಧತಿ ಎಂಬ ಅನಿಷ್ಟ ವೇ ಕಾರಣ.
ಇದು ತೊಲಗದೇ ಈ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ.

ಈ ಎಲ್ಲಾ ಆಟೋಪಗಳಿಗೆ ಮುಕ್ತಿ ದೊರತಾಗಲೇ ದೇಶಕ್ಕೂ ನಿಜವಾದ ಸ್ವಾತಂತ್ರ್ಯ ಬಂದಂತೆ ಎನ್ನುವ ಆಶಯ
ಪ್ರಸ್ತುತ ದೇಶದ ವಾಸ್ತವಿಕತೆಯನ್ನು ತುಂಬಾ ಸೊಗಸಾದ ರೀತಿಯಲ್ಲಿ ಚಿತ್ರಸಿದ್ದೀರಿ ಮೇಡಂ.
👌🏼👌🏼👌🏼🙏🏾🙏🏾

#ನನಗನಿಸಿದ್ದು
ಶಶಿಧರ್ ಬಡಿಗೇರ್

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...