ಗಾಂಧಿ ಮಹಾತ್ಮ
ಶಾಂತಿಯ ಮಂತ್ರವ ಜಪಿಸುತ
ಸತ್ಯಾಗ್ರಹವನ್ನು ಮಾಡಿ
ಸ್ವಾತಂತ್ರ್ಯ ವನು ತಂದು ಕೊಟ್ಟೆ
ಸ್ವತಂತ್ರ ಭಾರತದ ಕನಸನು ಕಂಡು
ಸತ್ಯ ಶಾಂತಿಯ ಜಗಕೆ ಸಾರಿ
ಸರಳ ಸಜ್ಜನ ಮೂರ್ತಿಯೇ ಆಗಿ
ಭವ್ಯ ಭಾರತದ ಕನಸನು ಕಂಡು
ಬ್ರಿಟಿಷರ ಗುಂಡಿಗೆ ಎದೆಯನು ಒಡ್ಡಿ
ಭಾರತ ಕೀರ್ತಿ ಪತಾಕೆಯ
ಜಗದಗಲ ಹರಡಿದ ಸುಪುತ್ರ
ಗಾಂಧಿ ವಾದವು ನಗೆಪಾಟಲು ಆಗಿದೆ ಇಂದೀಗ
ಎಲ್ಲೆಡೆ ತುಂಬಿದೆ ಕೊಲೆ ಸುಲಿಗೆ
ಸತ್ಯದ ದಾರಿಲಿನಡೆಯುವವರು
ಅಪಹಾಸ್ಯಕ್ಕೀಡಾಗುವರು
ಅಶಾಂತಿಯು ತುಂಬಿದೆ ಎಲ್ಲೆಡೆಯೂ
ಮಾನವತೆಯ ಮರೆತಿರುವರು ಎಲ್ಲಾ
ಇಂದೀಗ ನೀನು ಇರುತ್ತಿದ್ದರೆ
ಎದೆ ಒಡೆದೇ ಹೋಗುತ್ತಿತ್ತೇನೋ
ಗಾಂಧಿಯ ತತ್ವದ ದಾರಿಲಿ ನಡೆದು
ಕಟ್ಟಬೇಕು ನಾವು ಭವ್ಯ ಭಾರತವ
ಮರೆಯಬಾರದು ಎಂದಿಗೂ
ಗಾಂಧಿ ಮಹಾತ್ಮನ ತ್ಯಾಗ ಬಲಿದಾನವನು
ಪಂಕಜಾ.ಕೆ.
Comments
Post a Comment