Skip to main content

ಸೋಷಿಯಲ್ ಮೀಡಿಯಾ

ಸೋಷಿಯಲ್ ಮೀಡಿಯಾ.   (ವಿಜಯವಾಣಿ ದೀಪಾವಳಿ ವಿಶೇಷಾಂಕ2018)

ರವಿಯು ಉದಯಿಸುವ ಮದಲೇ
ಮೊಬೈಲ್ ನೋಡುವ ಕಾಲವಿದು
ಮೊಬೈಲ್ ಇಲ್ಲದೆ ಒಂದು ಕ್ಷಣವೂ
ಕಳೆಯಲಾರದ  ದಿನಗಳಿದು

ಫೇಸ್ ಬುಕ್ ಟ್ವಿಟ್ಟರ್ ವಾಟ್ಸಪ್
ಇನ್ಸ್ಟಾಗ್ರಾಮ್  ಎಲ್ಲೆಡೆ ಈಗ ಜನಪ್ರಿಯ
ಬೆಸೆದಿದೆ   ಇವುಗಳು ಇಂದು
ಪ್ರಪಂಚದೆಲ್ಲೆಡೆಯ ಜನರನು
ನೀರು ಕುಡಿದಂತೆ ಸಂಪರ್ಕವು ಸರಾಗವೀಗ

ದೂರದ ಪ್ರಪಂಚವ ಹತ್ತಿರ ತಂದು
ಒಬ್ಬರಿನ್ನೊಬ್ಬರ ಚಂದಕೆ  ಬಿಗಿದು
ಎಲ್ಲರ ಎಲ್ಲವ ತೋರುವ ಪುಟವು
ಮುಖಪುಟವೆಂಬ ಹೊತ್ತಿಗೆಯು

ಸೋಷಿಯಲ್ ಮೀಡಿಯಾ ಇದ್ದರೆ
ಜಗತ್ತೇ ಇರುವುದು ಕೈ ಬೆರಳ ತುದಿಯಲ್ಲಿ
ಗೂಗಲ್ ಮ್ಯಾಪ್ ಇದ್ದರೆ  ಸಾಕು
ಎಲ್ಲಿಗೆ ಬೇಕಾದರೂ ಹೋಗಲು  ಭಯವಿಲ್ಲ

ಗೂಗಲ್ಎಂಬಾ ಅಜ್ಜನು ತಿಳಿಸುವ
ಹೊಸ ಹೊಸ ವಿಷಯಗಳ ಕಂತೆಯನು
ಜ್ಞಾನದ ವೃದ್ಧಿಗೆ ಸಾಧನವೀತ
ಉಪಯೋಗಿಸಿದರೆ ಸರಿಯಾಗಿ

ಸೋಷಿಯಲ್  ಮೀಡಿಯಾ
ಜನಜೀವನದ ಅವಿಭಾಜ್ಯ
ಅಂಗವೇ ಆಗಿದೆ  ಈಗ
ಕ್ಷಣಮಾತ್ರದಲ್ಲಿ ಪ್ರಪಂಚದೆಲ್ಲರ ಸಂಪರ್ಕ

ದೂರದ ಮಿತ್ರರು ಹತ್ತಿರವಾಗಿ
ಸುತ್ತಲಪ್ರಪಂಚನೆರೆಮನೆಯಾಗಿ
ಸಂಸ್ಕೃತಿಭಾಷೆಯಸೇತುವೆಯಾಗಿ
ಕೊಡುತಿದೆ ಮನಕೆ ಉಲ್ಲಾಸ

ಕೈ ಬೆರಳ ತುದಿಯಲೆ ಎಲ್ಲವೂ ಆಗಿ
ಜಗತ್ತಿನ ಸುದ್ದಿಯ ಕ್ಷಣದಲಿ ತಿಳಿವ
ವಾಟ್ಸಪ್ ಅಣ್ಣನ ಮೋಹವ ಬಿಟ್ಟವರುಂಟೆ
ವಾಟ್ಸಪ್ ಇದ್ದರೆ ಸಮಯವು
ಕಳೆಯುವುದು ತಿಳಿಯುವುದೇ ಇಲ್ಲ

ಪ್ರತಿಯೊಂದರಲ್ಲೂ ಒಳಿತಿನ
ಜತೆಗೆ ಕೆಡುಕು ಇರುವ ತೆರದಲಿ
ಸೋಷಿಯಲ್ ಮೀಡಿಯಾ ದ ಅತಿ ಬಳಕೆ ತರುವುದುಮನಸಿಗೆ ಖಿನ್ನತೆ

ಸೋಷಿಯಲ್ ಮೀಡಿಯಾ ದಲ್ಲಿ
ವಿಹರಿಸುತ್ತ  ಮುಖಾಮುಖಿ
ಮಾತನು ಮರೆಯುವರು
ಫೇಸ್ ಬುಕ್ ಸ್ನೇಹಿತರಜತೆಯಲಿ ಸೇರುತ
ಮನೆಯವರೊಡನಾಟವಮರೆಯುವರು

ಅತಿಯಾದರೆ ಅಮೃತವೂ ವಿಷ
ಸೋಷಿಯಲ್ ಮೀಡಿಯಾ ಗೀಳಾದರೆ
ಅದೇವು ನಾವದರ ಅಡಿಯಾಳು
ಮಾನಸಿಕ ದೈಹಿಕ ಆರೋಗ್ಯಕೆ ಕುತ್ತಾದೀತು

ಸೋಷಿಯಲ್ ಮೀಡಿಯಾದ
ವ್ಯಾಪಕ ಬಳಕೆ   ಅದೀತೊಂದು ಚಟ
ಜೀವನವಾದೀತು ಯಾಂತ್ರೀಕೃತ
ಕಾಲ್ಪನಿಕ ವಿಹಾರವ ಮಾಡುತ್ತ
ವಾಸ್ತವ ಜೀವನ ಮರೆಸುವುದು

ಮಕ್ಕಳ ಓದನು ಕೆಡಿಸಿ
ಬೊಜ್ಜಿನ ದೇಹವ ಬೆಳೆಸುವುದು
ವ್ಯಕ್ತಿ ವ್ಯಕ್ತಿಗಳ ಸಂಬಂಧವು ಹಳಸಿ
ಸಂವಹನ ಶಕ್ತಿಯು ಕುಂದುವುದು

ನೆರೆಮನೆಯವರ ಜತೆ ತನ್ನನು ಹೋಲಿಸಿ
ಕರುಬುವಮನ ಪ್ರಪಂಚದ
ಜನರಜತೆ ಹೋಲಿಸಿಕರುಬುತಿದೆ

ಇತರರ ಜತೆ ಹೋಲಿಸುತ
ಅವರಂತಾಗುವ ಧಾವಂತದಲ್ಲಿ
ಜೀವನವೆಲ್ಲ ನಾಟಕವಾಗಿ
ತನ್ನ ತನವನು ಮರೆಯುತಿದೆ

ಅತಿಯಾದ ಬಳಕೆಯ ಮಾಡುವ
ಬದಲು ನಿಯಂತ್ರಣದಲ್ಲಿ ಇರುತ
ಸರಿಯಾದ ರೀತಿಯಲಿ ಬಳಸುತ
ಪಡೆಯೋಣ ನಾವು ಇದರ ಉಪಯೋಗ

ಪಂಕಜಾ.ಕೆ.

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...