Skip to main content

ಮುಖಪುಟ

ಮುಖಪುಟ( ಫೇಸ್ ಬುಕ್)
////-------///////-----//////----///

ಮುಖಪುಟವೆಂಬಹೊತ್ತಿಗೆ
ಈಗಎಲ್ಲೆಡೆಜನಪ್ರಿಯ
ದೂರದಪ್ರಪಂಚವಹತ್ತಿರತಂದು
ಒಬ್ಬರಿನ್ನೊಬ್ಬರಚಂದಕೆ ಬಿಗಿದು
ಎಲ್ಲರ ಎಲ್ಲವತೋರುವಪುಟವು

ನಿಜಕುಇದುಬಹುಉಪಯೋಗಿ
ಪ್ರಪಂಚದಎಲ್ಲವಿಷಯಗಳನ್ನು
ತಿಳಿಯಲು ಬಹುದು ಕ್ಷಣದಲ್ಲಿ
ಎಲ್ಲವೂಒಂದೇ ಪುಟದಲ್ಲಿ

ದೂರದ ಮಿತ್ರರು ಹತ್ತಿರವಾಗಿ
ಸುತ್ತಲಪ್ರಪಂಚನೆರೆಮನೆಯಾಗಿ
ಸಂಸ್ಕೃತಿಭಾಷೆಯಸೇತುವೆಯಾಗಿ
ವಿದ್ಯೆಯಬುದ್ಧಿಯ ಬೆಳವಣಿಗೆ ಗೆ
ಮುಖಪುಟವೆಂಬ ಹೊತ್ತಿಗೆ ಸಹಕಾರಿ

ಪ್ರತಿಯೊಂದರಲು ಒಳಿತಿನ
ಜತೆಗೆಕೆಡುಕು ಇರುವಂತೆ
ಮುಖಪುಟವೆಂಬಹೊತ್ತಿಗೆಯಲ್ಲೂ
ಇರುವುದು  ಈ ಎರಡೂ
ಅದನರಿತು ಬಳಸಬೇಕು ಎಚ್ಚರದಿ

ನೆರೆಮನೆಯವರ ಜತೆತನ್ನನು
ಹೋಲಿಸಿ ಕರುಬುವ ಮನ
ಪ್ರಪಂಚದ ಜನರ ಜತೆ
ಹೋಲಿಸಿ ಕರುಬುತ್ತಿದೆ

ಇತರರಜತೆ ಹೋಲಿಸುತ
ಅವರಂತಾಗುವ ಧಾವಂತದಲ್ಲಿ
ಜೀವನವೆಲ್ಲ ನಾಟಕವಾಗಿ
ತನ್ನ ತನವನು ಮರೆಯುತ್ತಿದೆ

ಭಾಂಧವ್ಯ ವೃದ್ಧಿಗೆ ಸಹಕಾರಿ
ಯಾಗಬೇಕಿದ್ದಮುಖಪುಟವೀಗ
ಇಬ್ಬರ ನಡುವಿನಪೈಪೋಟಿಗೆ
ಕಾರಣವಾಗುತ್ತಿದೆ

ಒಳ್ಳೆಯರೀತಿಯಲಿ
ಉಪಯೋಗಿಸಿದರೆ
ಪಡೆಯಲು ಬಹುದು
ಒಳ್ಳೆಯ ಜ್ಞಾನವನು
ಒಬ್ಬರು ಇನ್ನೊಬ್ಬರ
ಮೀರಿಸುವ ಭರದಲಿ
ತನ್ನತನವನು ಕಳೆಯದಿರಿ

ಉಳಿಸಿರಿಬೆಳೆಸಿರಿ ಪ್ರೀತಿ
ವಿಶ್ವಾಸದ ಭದ್ರಕೋಟೆಯನು
ಉತ್ತಮ ಹವ್ಯಾಸಗಳನ್ನು
ಕಲಿಯುತ ಕಲಿಸುತ ಮುಖಪುಟದಲ್ಲಿಮೆರೆಯೋಣ
ಮುಖಪುಟವೊಂದು ಗೀಳಾಗದ
ತೆರದಿ ವ್ಯವಹರಿಸೋಣ

ಪಂಕಜಾ. ಕೆ ಮುಡಿಪು.ಕುರ್ನಾಡು


ಹೆಸರು.. ಪಂಕಜಾ.ಕೆ.
ವಿಳಾಸ...ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶಕೃಪಾ  .ಮುಡಿಪು.
ಅಂಚೆ..ಕುರ್ನಾಡು.ದ. ಕ.  574153

ಮೊಬೈಲ್ ನಂಬರ್ 9964659620
Email  id. Pankajarambhat@gmail.com

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...