ಮಕರ ಸಂಕ್ರಾಂತಿ
ನೇಸರನು ಮಕರ ರಾಶಿಗೆ ಬಂದ
ಮನೆ ಮನದಲಿ ಹರ್ಷವ ತಂದ
ಉತ್ತರಾಯಣದ ಪುಣ್ಯ ಕಾಲವಿದು
ಸ್ವರ್ಗದ ಬಾಗಿಲುತೆಗೆಯುವ ದಿನವಿದು
ಬೀಸುವ ಚಳಿ ಗಾಳಿಯು ಕರಗಿ
ಬಂದಿತು ಮಂದಮಾರುತ ಭರದಿ
ತುಂಬಿತು ದವಸಧಾನ್ಯದ ಕಣಜ
ಎಲ್ಲೆಲ್ಲೂ ತುಂಬಿತುಹರ್ಷದ ಕಣಜ
ಧಾನ ಧರ್ಮಕ್ಕಿದು ಪುಣ್ಯಕಾಲ
ಅದಕ್ಕಾಗಿ ಹಂಚುವರು ಎಳ್ಳು ಬೆಲ್ಲ
ಎಳ್ಳುಬೆಲ್ಲಗಳಸವಿತುಂಬಲಿಬಾಳಲಿಸಿಹಿ
ಮಕರ ಸಂಕ್ರಾಂತಿಯ ಶುಭ ದಿನವು
ಮೈಮನಕೆ ಉಲ್ಲಾಸದ ಸಂಭ್ರಮವು
ಎಳ್ಳು ಬೆಲ್ಲವ ಹಂಚಿ ಬಾಳಲಿ ಸಿಹಿತುಂಬಿ
ಸಹೋದರ ಪ್ರೇಮವ ಎಲ್ಲೆಡೆ ಹರಡಿ
ಮನಸಿನ ಕಹಿ ಭಾವನೆಗಳ ಕಳೆದು ತೊಳೆದು
ಸಿಹಿಭಾವವತುಂಬಿನಲಿಯೋಣ ಅನುದಿನವು
ಪಂಕಜಾ.ಕೆ.
Comments
Post a Comment