ರೈತ ...ಅನ್ನದಾತ
ಮುಂಗಾರು ಮಳೆಯಾಗಿ
ಕೆರೆಕಟ್ಟೆಗಳು ತುಂಬಿ ತುಳುಕಾಡಿದೆ
ಹೊಲದಲ್ಲಿ ದುಡಿಯುತಿರುವನು
ರೈತ ಮಣ್ಣಿನ ಮಗನೀತ
ನೇಗಿಲಲಿ ಉಳುತ
ಬೆಳೆಯನ್ನು ಬೆಳೆದಾತ
ಉಣಿಸುವನು ನಮಗೆನಿತ್ಯ
ಈತ ನಮ್ಮ ರೈತ ಅನ್ನದಾತ
ಎಂದೆಂದೂ ನಿನಗೆ ಋಣಿಯಾದೆ
ನೀ ಭೂಮಿತಾಯಿಯ ಮಗುವಾದೆ
ನಿನ್ನಿಂದಲೇ ನಮಗೆ ಸಿಗುತ್ತಿದೆ ಅನ್ನ
ನೀ ಬಾಳಬೇಕು ಖುಷಿಯಾಗಿ ಚಿನ್ನ
ಸಾಲದ ಹೊರೆಗೆ ಕೊರಳು ಕೊಡಬೇಡ
ಅನ್ನಬೆಳೆಯುವ ಭೂತಾಯಿಕೈಬಿಡಬೇಡ
ಬರುತಿದೆ ನಿನಗೀಗ ಒಳ್ಳೆಯ ದಿನಗಳು
ತಿಳಿಯುತ್ತಿದೆ ನಿನ್ನ ಶ್ರಮದ ಬೆಲೆಗಳು
ರೈತ ನೀ ನಮ್ಮ ಅನ್ನದಾತ
ದುಡಿಮೆಯಲಿ ತೃಪ್ತಿಪಡುವಾತ
ದುಡಿಮೆಯೇ ದೇವರೆಂದು ತಿಳಿದಾತ
ನಮಿಸುವೆನು ನಿನಗೆ ಓ ಅನ್ನದಾತ
ಪಂಕಜಾ.ಕೆ. ಮುಡಿಪು
Comments
Post a Comment