ರಾಧೆಯ ಅಳಲು
ನಿನ್ನಯ ಕೊಳಲಿನ ನಾದಕೆ ಒಲಿದೆ
ನಿನ್ನೊಡನಾಟದಿ ನಿತ್ಯವೂ ನಲಿದೆ
ಅಂದಿನ ಒಡನಾಟದ ಸುಂದರ ನೆನಪು
ಇಂದಿಗೂ ಇರುವುದು ಮನದಲ್ಲಿ ಹಸಿರು
ಯಮುನಾ ನದಿಯ ಆ ತೀರ
ಇಂದೀಗ ನೀನಿಲ್ಲದೆಅದು ಬಲು ದೂರ
ಕಾಯುತಿರುವೆನು ಕೃಷ್ಣಾ ನಿನಗಾಗಿ
ಎಂದು ಬರುವೆಯೋ ನೀನು ನನಗಾಗಿ
ನೀನಿದ್ದಾಗ ಜೀವನ ಹಸಿರು ಭೂಮಿ
ಇಂದೀಗ ಆಗಿದೆ ಅದು ಮರುಭೂಮಿ
ನೀನಿಲ್ಲದ ದಿನಗಳು ಬಲು ಘೋರ
ತಿಳಿಯದೆ ಹೇಳು ನಿನಗೆ ಅದು ಪೋರ
ಮಾತುಕೊಟ್ಟಿರುವಿಯಲ್ಲಾ ಅಂದು ಕೃಷ್ಣ
ಮಾತಿಗೆ ತಪ್ಪದೆ ಬೇಗ ಬಾ ಇಂದು ಕೃಷ್ಣ
ನಿನಗೊಲಿದ ಜೀವವಿದು ನೋಡು
ಇನ್ನಾರಿಗೂ ಒಲಿಯದದು ಬಿಡು
ನೀ ಬಲ್ಲೆ ನನ್ನ ಜೀವನದ ಕನಸು
ಮಾಡಲಾರೆಯ ಅದರ ನನಸು
ಪಂಕಜಾ.ಕೆ.
Comments
Post a Comment