ಬರ
ನೆಟ್ಟ ಗಿಡಮರಗಳ ಬೇರು
ಅಶಿಸುತ್ತಿವೆ ಮೈತುಂಬ ನೀರು
ಭಾವಿ ಕೆರೆ ತೊರೆಗಳ ನೀರು ಬತ್ತಿ
ನೀರಿಗಾಗಿ ಭೂತಾಯಿ ಒಡಲ ಕೆತ್ತಿ
ಅಂತರ್ಜಲಕೆ ಕನ್ನ ಕೊರೆದು
ನೀರಸೆಳೆಯು ಸಂಪೂರ್ಣ ಅಳಿದು
ಎಲ್ಲೆಲ್ಲೂ ಕಾಣುತ್ತಿದೆ ನೀರಿಗೆ ಬರ
ಕೊಡಲಾರೆಯ ದೇವ ಮಳೆಯ ವರ
ಮೈಕೈ ಎಲ್ಲಾ ಬೆವರಿ ಮುದ್ದೆ
ವರುಣ ನೀನು ಬಂದರೆ ನಾಗೆದ್ದೆ
ಸೆಕೆಯ ಸಹಿಸಿ ಸಾಕಾಗಿ ಹೋಯ್ತು
ಪಂಖದ ಗಾಳಿಯೂ ಸಾಲದಾಯ್ರು
ಬಾನಿ ನಲಿ ಓಡುವ ಮೋಡವೇ
ಸುರಿಸಲಾರೆಯ ಒಮ್ಮೆಮಳೆಯ ಇಳೆಗೆ
ಕೆಂಡ ದಂತೆ ಸುಡುತಿಹನು ರವಿ
ಹೊರಟು ಹೋಗುತ್ತಿದೆ ಜೀವನದಲ್ಲಿ ಸವಿ
ಬಿರುಬಿಸಿಲಿಗೆಜೀವನೋತ್ಸಹವು ಕುಗ್ಗುತಿದೆ
ಸೆಕೆಗಾಲದಲಿ ನೀರ ಸೆಳೆ ಅಳಿಯುತಿದೆ
ಉಳಿಸಬೇಕಿತ್ತುನೀರಒಂದೊಂದು ಬಿಂದು
ಗಿಡಮರಗಳನು ನೆಟ್ಟು ಬೆಳೆಸುತಲಂದು
ಪಂಕಜಾ.ಕೆ.
Comments
Post a Comment