ಕೊಡುಗೆ
ದೇವನ ಪ್ರೀತಿಯ ಕೊಡುಗೆಯಿದು
ಪ್ರಕೃತಿ ರಮ್ಯ ಸುಂದರ ತಾಣವಿದು
ಪರಿಸರ ಉಳಿಸಿಕೊಂಡರೆ ಹಸಿರು
ಸಿಗುವುದು ನಿತ್ಯ ನಮಗೆ ಉಸಿರು
ಬಿರುಬಿಸಿಲ ಬೇಗೆಯಲ್ಲಿ ನಿಂದು
ಗಿಡಮರಗಳು. ಬಸವಳಿದಿವೆ
ನೀರಸೆಳೆಯನರಸಿ ಪಕ್ಷಿಗಳು
ವಲಸೆ ಹೋಗುತಿವೆ
ಹೆಚ್ಚುತ್ತಿದೆ ಭೂಮಿಯ ತಾಪಮಾನ
ಎಲ್ಲೆಲ್ಲೂ ಕಾಣುತ್ತಿದೆ ನೀರಿಗೆ ಹಾಹಾಕಾರ
ಅಂತರ್ಜಲದ ಒರತೆ ಬತ್ತುತಿದೆ ದಿನ ದಿನವೂ
ಗಿದಮರ ಪ್ರಕೃತಿ ನಾಶ ಇದಕೆ ಕಾರಣ
ನೆಡಬೇಕು ಗಿಡ ರಕ್ಷಿಸಬೇಕು ಗಿಡ ಮರಗಳ
ಹೆಚ್ಚಬಹುದಾಗ ಅಂತರ್ಜಲದ ಒರತೆ
ಪ್ರಕೃತಿ ಕೊಡುಗೆಯ ಉಳಿಸಬೇಕು
ಸ್ವಚ್ಛ ಶುದ್ಧ ಗಾಳಿಯ ಸವಿಯಬೇಕು
ಪಂಕಜಾ.ಕೆ. ಮುಡಿಪು
Comments
Post a Comment