ಸಕಾಲ
ಮಳೆ ಬಂದು ಇಳೆಗೆ ತಂದಿತು ತಂಪು
ಹರಡಿತು ಎಲ್ಲೆಲ್ಲೂ ಹೊಸ ಮಣ್ಣಿನ ಕಂಪು
ಬೀಜ ಬಿತ್ತಲು ಇದು ಸಕಾಲ
ವ್ಯರ್ಥ ಮಾಡಬೇಡ ಈ ಕಾಲ
ಸಕಾಲದಲ್ಲಿ ಬೀಜ ಗಳ ಬಿತ್ತಿ
ಪಡೆಯಬೇಕು ಅದರಲ್ಲಿ ಉತ್ಪತ್ತಿ
ಸಾವಯವ ತರಕಾರಿಯ ಸವಿ
ಸವಿದವನೆ ಬಲ್ಲ ಅದರ ಸವಿ
ಪ್ರತಿ ಮನೆಯಲ್ಲೂಬೆಳೆಯಿರಿ
ಸಾವಯವ ಹಣ್ಣು ತರಕಾರಿ
ಬೆಳೆಯುವಾತುರ ಕಾತುರ ತೋರಿ
ನಿತ್ಯವೂ ಸಿಗುತ್ತಿದೆ ಹೊಸ ತರಕಾರಿ
ಮನೆ ಸುತ್ತ ಮುತ್ತಲೆಲ್ಲಹಸಿರಿನ ಸಿರಿ
ಭೂತಾಯಿಯ ಮಡಿಲಿಗೆ ಸಂತಸದ ಗರಿ
ಕಣ್ಣ ತುಂಬುವ ಚೆಲುವಿನ ನೋಟ
ನಿತ್ಯ ಮನಕದುವೆ ರಸದೂಟ
ಪಂಕಜಾ.ಕೆ. ಮುಡಿಪು
Comments
Post a Comment