ವೀರ ಯೋಧ
ಭಾರತಾಂಬೆಯ ಶಿಖರದಲಿ
ಮಳೆ ಬಿಸಿಲಿಗೆ ಮೈಯನೊಡ್ಡಿ
ಮೈಯ ಕೊರೆವ ಚಳಿಗಾಳಿ ಯಲ್ಲಿ
ದೇಶಕಾಯುವ ವೀರಯೋಧನೆ
ಸಲ್ಲಿಸುವೆ ನಿನಗೆ ನಿತ್ಯ ವಂದನೆ
ಭಾರತಾಂಬೆಯ ಸೆರಗಸೆಳೆಯುವ
ವೈರಿಗಳ ಸದೆ ಬಡಿದು ನೀವು
ಭಾರತಾಂಬೆಯ ಮಾನವನ್ನು
ಕಾಯುತಿರುವಿರಿ ಶ್ರೀಕೃಷ್ಣನಂತೆ
ಮೆರೆಯುತಿರುವಿರಿ ಕ್ಷಾತ್ರತೇಜವ
ಬೆಚ್ಚಿ ಬೆದರದೆ ಅಂದುಇಂದುಎಂದೆಂದಿಗೂ
ಊಟ ತಿಂಡಿಯ ಪರಿವೆ ಇಲ್ಲದೆ
ಮನೆ ಮಠಗಳ ತೊರೆದು
ಜೀವದ ಹಂಗು ಕಳಚಿ ನೀವು
ದೇಶ ತಾಯಿಯ ಸೇವೆಗೈಯುತ
ಮೆರೆಯುತಿರುವಿರಿ ನಿಮ್ಮ ವೀರ ತೇಜವ
ಹಿಮಗಿರಿಯ ಮಂಜಿನ ತೆರೆಯಲಿ
ಪಾತಕಿಗಳು ನುಸುಳುತಿರಲು
ಜೀವದಹಂಗುತೊರೆದುಕಾಯ್ದೆ
ನೀಭಾರತಾಂಬೆಯ ವೀರಪುತ್ರ
ಮರೆಯಲಾರೆವು ನಾವು ಎಂದಿಗೂ
ನಿಮ್ಮ ತ್ಯಾಗ ಬಲಿದಾನಗಳ
ದೇಶಸೇವೆಯೇ ಈಶ ಸೇವೆ ಎನುತ
ಮೆರೆದಿರಿನಿಮ್ಮಯ ಕ್ಷಾತ್ರತೇಜವ
ಕಾರ್ಗಿಲ್ಲಿನ ರಣರಂಗದಲಂದು
ಭೇದಿಸುತ ವೈರಿಗಳ ಚಕ್ರವ್ಯೂಹವ
ಅಭಿಮನ್ಯುವಿನಂತೆಮೆರೆದುಮರೆಯಾಗಿ
ಆಗಸದತಾರೆಯಂದದಿ ಮಿನುಗುತಿರುವಿರಿ
ವರುಷ ಉರುಳಿದರೂ ಮರೆಯಲಾರೆವು ಮೈನವಿರೇಳಿಸುವ ನಿಮ್ಮ
ಆ ಶೂರ ಧೀರ ನಡೆಯ
ಸಲ್ಲಿಸುವೆ ನಿಮಗೆ ನಮ್ಮ ವಂದನೆಯ
ಭಾರತಾಂಬೆಯ ಹೆಮ್ಮೆಯ ಪುತ್ರರತ್ನಗಳೆ
ಬಾಳಿದರೆ ನಿಮ್ಮಂತೆ ಬಾಳಬೇಕು
ದೇಶಸೇವೆಯ ಫಣ ತೊಡಬೇಕು
ವೀರ ಯೋಧನಾಗಿಮೆರೆಯಬೇಕು
ವೈರಿಗಳ ಸದೆಬಡಿಯಬೇಕು
ಭಾರತಾಂಬೆಯ ಕೀರ್ತಿಯನು
ಜಗದಗಲ ಹರಡಬೇಕು
ಪಂಕಜಾ. ಕೆ. ಮುಡಿಪು
Comments
Post a Comment