ವಿದ್ಯಾನಿಧಿ
ವಿದ್ಯೆಎನ್ನುವ ಅಮೃತ ಭಂಡಾರದ ನಿಧಿ
ಕದಿಯಲಾರದ ಒಂದು ಅಕ್ಷಯ ನಿಧಿ
ವಿದ್ಯೆಯಿದ್ದರೆ ಒಂದು ಯೋಗ್ಯತೆ
ಸಿಗುತಿದೆ ಎಲ್ಲೆಲ್ಲೂ ನಮಗೆ ಮಾನ್ಯತೆ
ವ್ಯವಹಾರಗಳಿಗೆ ಬೇಕು ನಮಗೆ ವಿದ್ಯೆ
ಜೀವನದಲಿ ಮೇಲೆರಲು ಬೇಕು ವಿದ್ಯೆ
ವಿದ್ಯೆಗೆ ವಿನಯವೇ ಭೂಷಣ
ಮಾಡಬಹುದು ಒಳ್ಳೆಯ ಭಾಷಣ
ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು
ಆರೋಗ್ಯವಾಗಿರಲು ಬೇಕು ದನದ ಹಾಲು
ಕಸದಿಂದ. ರಸ ತೆಗೆಯುವ ವಿದ್ಯೆ
ಸಾಧಿಸಿ ಜೀವನದಲ್ಲಿ ನಾ ಗೆದ್ದೆ
ವಿದ್ಯಾರ್ಥಿಗೆ ವಿದ್ಯೆ ಕಲಿಯುವುದೇ ಗುರಿ
ಅದಕಾಗಿ ಬಿಡಬೇಕು ನಿದ್ದೆಯ ಗರಿ
ವಿದ್ಯೆಯಿದ್ದರೆ ಲೋಕಮಾನ್ಯ
ಎಲ್ಲೆಲ್ಲೂ ಸಲ್ಲುವುದು ಸಮ್ಮಾನ
ಉದ್ವೇಗ ಚಿಂತೆಯನು ದೂರ ಇಡಿ
ಗುರಿಸೇರುವವರೆಗೆ ವಿಶ್ರಾಂತಿ ಬಿಡಿ
ಪಡೆಯಬೇಕು ಜೀವನದಲ್ಲಿ ವಿದ್ಯಾನಿಧಿ
ಸಿಗಬಹುದು ಆಗ ಜೀವನದಲ್ಲಿ ನೆಮ್ಮದಿ
ಪಂಕಜಾ .ಕೆ.
Comments
Post a Comment