ನೀರಿನ ಮಹತ್ವ
ಸುಡುಬಿಸಿಲ ಬೇಗೆಗೆ
ಹೊತ್ತಿ ಉರಿಯುತಿದೆ ಧರೆ
ಅಂತರ್ಜಲವ ಕೊರೆದು
ಬತ್ತಿ ಹೋಯಿತು ನೀರ ಒರತೆ
ಸಾಲು ಸಾಲು ಮರಗಳ ಕಡಿದು
ಕಟ್ಟುತಿಹರು ಕಾಂಕ್ರೀಟ್ ಕಾಡು
ನೀರಿಂಗಿಸಲು ಜಾಗವಿಲ್ಲ
ಭೂಮಿಕೊರೆದು ನೀರ
ಸೆಲೆಯನರಸುವಿಯಲ್ಲ
ಹನಿ ನೀರಿಗೆ ಬಾಯ್ಬಿಡುತ್ತಿದೆ
ಇಳೆ ಮಳೆಮುಗಿಲ ಸುಳಿವಿಲ್ಲ
ಕಾರಣವ ಬಲ್ಲೆಯೇನು ಮನುಜ
ಅತಿ ಆಶೆ ತಂದಿತು ಈ ಪರಿಯ
ಭೂತಾಯಿ ಕೊಟ್ಟಿಹಳು
ಹಸಿರು ಕಾಡು ಸಂಪತ್ತು
ಉಳಿಸಿ ಬೆಳೆಸಬೇಕು ನಾವು
ಹಸಿರು ಉಸಿರು ಆಗಲು
ನೀರಿಗಾಗಿ ಈಗ ಬಾಯಿ
ಬಿಡುವ ಬದಲು ಉಳಿಸಿ
ಕೊಳ್ಳಬೇಕು ನೀರ ಸೆಲೆಯ
ಮಳೆಯು ಬರುವ ದಿನದಲಿ
ಅಲ್ಲಲ್ಲಿ ಇಂಗು ಗುಂಡಿಗಳ
ಮಾಡಿ ಹರಿವ ನೀರಿಗೆ
ಒಡ್ಡು ಕಟ್ಟಿ ಉಳಿಸಬೇಕು
ನೀರ ಒಂದೊಂದು ಬಿಂದ
ನೀರು ಇಲ್ಲದಿದ್ದರೆ
ನಾಶವಾದೀತು ಪ್ರಕೃತಿ
ಮನುಜ ಕುಲಕೆ ಬೇಕು
ಶುದ್ಧ ಗಾಳಿ ನೀರು ಪ್ರಕೃತಿ
ಪಂಕಜಾ.ಕೆ.ಮುಡಿಪು
Comments
Post a Comment