ಹೂಮನದ ಹುಡುಗಿ
ಆ ದಿನ ಎಲ್ಲಾ ಕೆಲಸ ಬೇಗ ಮುಗುತ್ತು ಶ್ರಾವಣಿಗೆ ಹಾಂಗೆ ರಜ ಹೊತ್ತು ಹೆರ ಗಾಳಿಗೆ ಕೂಪ ಹೇಳಿ ಹೆರ ಲಾನ್ಲಿ ಕೂದು ಸುತ್ತಲ ಪ್ರಕೃತಿ ಸೌಂದರ್ಯವ ಸವಿಕೊಂಡಿಪ್ಪಗ ಭಗವಂತ ಎಷ್ಟು ಕರುಣಾಮಯಿ ಹೇಳಿ ಅದಕ್ಕೆ ಕಂಡತ್ತು
ಆ ದಿನ ಮನೆಲಿ ಆರೂ ಇಲ್ಲೇ ಇವುಯಾವದೋ ಮದುವೆ ಹೇಳಿ ಹೋಗಿತ್ತವು .ಮಕ್ಕೊ ರಜೆ ಹೇಳಿ ಅಜ್ಜನಮನೆಗೆ ಹೋಯಿದವು. ಒಬ್ಬನೇ ಕೂದುಗೊಂಡು ಇಪ್ಪಗ ಶ್ರಾವ್ಯನ್ಗೆ ಆದರ ಹಿಂದಣ ದಿನಂಗಳ ನೆನಪು ಒಂದೊಂದಾಗಿ ಮನಸ್ಸಿಲಿ ಹಾದು ಹೋತು
ಅಪ್ಪು ಅದು ಅಬ್ಬೆ ಅಪ್ಪನ ಮುದ್ದಿನ ಮಗಳು ಎರಡು ಜನ ಅಣ್ಣಂದಿರ ಪ್ರೀತಿಯ ತಂಗೆ ಮಗಳು ಬೇಕು ಹೇಳಿ ಬಯಸಿ ಬಯಸಿ ಪಡೆದ ಅಪರೂಪದ ಕೂಸು ಅದು
ಅದೆಂತದೋ ಒಂದು ದಿನ ಶಾಲೆಂದ ಬಂದ ಕೂಸು ತಲೆಸೆಳಿತ್ತು ಹೇಳಿ ಮನುಗಿತ್ತು ಅಬ್ಬೆ ಬೆಸಿಲಿಂಗೇ ನಡಕೊಂಡು ಶಾಲೆಗೆ ಹೋಗಿ ಬಂದು ಮಗಳಿಂಗೆ ಬಚ್ಚಿದ್ದು ಹೇಳಿ ಗ್ರೇಹಿಸಿ ಒರಗಿದರೆ ಕಮ್ಮಿ ಅಕ್ಕು ಹೇಳಿ ಮಗಳ ಹಾಸಿಗೆಲಿ ಮನುಗಿಸಿ ಮೈ ತುಂಬ ಹೊದೆಸಿ ಬೇರೆ ಕೆಲಸಕ್ಕೆ ಹೋದವು
ಇದ್ದಕ್ಕಿದ್ದ ಹಾಂಗೆ ಮಗಳು ನರಳುದು ಕೇಳಿ ಎಂತಾತಪ್ಪ ಹೇಳಿ ಕೈಲಿತ್ತ.ಕೆಲಸವ ಅಲ್ಲೇ.ಬಿಟ್ಟು ಅಬ್ಬೆ ಶ್ರೀಮತಿ ಓಡಿಗೊಂಡುಬಂತು ಮಗಳ ಹಣೆ ಮೇಲೆ ಕೈ ಮಡುಗಿದ ಶ್ರೀಮತಿ ಥಟ್ಟನೆ ಕೈ ಹಿಂದಕ್ಕೆ ತೇಕೊಂಡತ್ತು ಮಗಳ ಮೈ ಕಾದ ಹಂಚಿನ ಹಾಂಗೆ ಸುಡುದು ನೋಡಿ ಅದಕ್ಕೆ ಕೈ ಕಾಲು ಆಡದ್ದ ಹಾಂಗೆ ಆತು
ಕೂಡಲೇ ಗಂಡ ಮಕ್ಕಳ ದೆನಿಗೇಳಿತ್ತು ಅವು ಬಂದಪ್ಪದ್ದೆ ಮಗಳ.ಜ್ವರದ ಬಗ್ಗೆ ಶ್ರೀಮತಿ ತಿಳಿಸಿದ್ದು ನೋಡಿ ಕೂಡಲೇ.ಕಾರಿಲಿ ಶ್ರಾವಣಿಯ ದೊಡ್ಡ ಆಸ್ಪತ್ರೆಗೆ ಕರಕೊಂಡು ಹೋದವು
ಡಾಕ್ಟರ್ ಪರೀಕ್ಷೆ ಮಾಡಿ ನಿಂಗ ಕೂಡಲೇ ಕರಕೊಂಡು ಬಂದದು ಒಳ್ಳೆದಾತು ಇಲ್ಲದ್ದರೆ ಅದರ ಜೀವಕ್ಕೆ ಅಪಾಯ ಆವುಸಿತ್ತು ಹೇಳಿದವು ಒಂದು ಇಂಜೆಕ್ಷನ್ ಕೊಟ್ಟವು ಇಂಜೆಕ್ಷನ್ ನ ಪ್ರಭಾವಂದ ಶ್ರಾವಣಿ ಲಾಯಿಕ್ ಒರಗಿತ್ತು.
ಮಗಳ ಬಾಡಿದ ಮೊರೆ ನೋಡಿ ಅಣ್ಣಂದಿರು ಹಾಗೂ ಅಪ್ಪ ಕಂಗಾಲು ಆದವು ದೇವರ ಧ್ಯಾನ ಮಾಡಿಗೊಂಡು ಕೂದವು ಒಂದು ವಾರ ಬಿಡದ್ದೆ ಕಾಡಿದ.ಜ್ವರ ಮಗಳ ಹಿಂಡಿ ಹಿಪ್ಪೆ ಮಾಡಿದ್ದು ನೋಡಿ ಶ್ರೀಮತಿ ಗೆ ಕಣ್ಣಿಲಿ ನೀರು ಬಂತು ಬೇಗ ಹುಸಾರಿ ಆಗಲಿ ಹೇಳಿ ದೇವರಿಂಗೆ ಪ್ರಾರ್ಥನೆ ಮಾಡಿದವು ಎಲ್ಲೋರ ಪ್ರಾರ್ಥನೆಯ ಫಲವೋ ಹೇಳುವಾಂಗೆ ಶ್ರಾವಣಿ ಚೇತರಿಸಿಗೊಂಡತ್ತು
ದಿನಂದ ದಿನಕ್ಕೆ ಶ್ರಾವಣಿ ಚೇತರಿಸಿಗೊಂಡು ಮೊದಲಿನ ಹಾಂಗೆ ಆಡಿಗೊಂದು ಶಾಲೆಗೆ ಹೋಪಲೆ ಸುರುಮಾಡಿದ್ದು ನೋಡಿ ಎಲ್ಲೋರು ನಿಟ್ಟುಸಿರು ಬಿಟ್ಟವು ಅಣ್ಣಂದಿರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ದೂರದ ಊರಿಂಗೆ ಹಾಸ್ಟೆಲ್ ಲಿಲಿದ್ದು ಕಾಲೇಜಿಂಗೆ ರಜೆ ಇಪ್ಪಗ ಮಾತ್ರ ಬಪ್ಪ ಅಭ್ಯಾಸ ಮಾಡಿದವು ಅವಾಗ ಈಗಣ ಹಾಂಗೆ ಮೊಬೈಲ್ ಎಲ್ಲಾ ಇಲ್ಲೇ ಎಲ್ಲಾ ವಿಷಯಕ್ಕೂ ಕಾಗದವೆ ಬರೆಯಕ್ಕೂ ಹಾಂಗೆ ಅಣ್ಣಂದಿರು ಆಗಾಗ ಶ್ರಾವಣಿಗೆ ಕಾಗದ ಬರಕೊಂಡು ಇತ್ತಿದ್ದವು
ಇದ್ದಕ್ಕಿದ್ದ ಹಾಂಗೆ ಒಂದು ದಿನ ಶ್ರಾವಣಿಗೆ ಕೆಮಿ ಕೇಳುದು ಕಮ್ಮಿ ಆದ ಅನುಭವ ಆತು ಶಾಲೆಲಿ ಟೀಚರ್ ದೆನಿಗೇಳಿದರೆ ಕೇಳದ್ದೇ ತಳಿಯದ್ದೇ ಕೂದ್ದು ನೋಡಿ ಹತ್ತರೆ ಕೂದ ಅದರ ಫ್ರೆಂಡ್ ಶ್ರಾವಣಿಯ ನೂಕಿತ್ತು ಶ್ರಾವಣಿ ಗಡಿ ಬಿಡಿಲಿ ಎದ್ದು ನಿಂದತ್ತು ಟೀಚರ್ ಇನ್ನೊಂದರಿ ಹೇಳಿದ ಮೇಲೆ ಶ್ರಾವಣಿಉತ್ತರ ಕೊಟ್ಟತ್ತು ಏರ್ ವಿಷಯವ ಮನೆಲಿ ಬಂದು ಅಬ್ಬೆಗೆ ಹೇಳಿದರು ಅಬ್ಬೆ ಅದು ಅಂತೆ ಆದಿಕ್ಕು ಹೇಳಿ ಗ್ರೇಹಿಸಿತ್ತು ಹಿಂಗೇ ಇಪ್ಪಗ ಒಂದು ದಿನ ಅಬ್ವೆ ಅದರ ಎಷ್ಟು ದೆನಿಗೆಳಿದರೂ ಶ್ರಾವಣಿ ಉತ್ತರ ಕೊಡದ್ದದು ನೋಡಿ ಶ್ರೀಮತಿ ಅದರ ಹತ್ತರೆ ಬಂದು ತಲೆ ಸವರಿ ಆಗಂದ ದೆನಿಗೇಳುತ್ತೆ ಆನು ನೀನು ತಳಿಯದ್ದೇ ಕೂಯಿದೆ ಎಂತ ಯೋಚನೆ ಕೂಸೆ ಹೇಳಿ ಕೇಳಿತ್ತು ಶ್ರಾವಣಿಗೆ ಅಶ್ವರ್ಯ ಅಮ್ಮಾ ನೀನು ಎನ್ನ ದೇನಿಗೆಲಿದ್ದೆಯಾ ಎನಗೆ ಕೇಳಿದ್ದೆ ಇಲ್ಲೆನ್ನೇ ಹೇಳಿತ್ತು ಅಮ್ಮಂಗೆ ಚಿಂತೆ ಆಗಿ ಅಪ್ಪನತ್ತರೆ ಈ ವಿಷಯ ಹೇಳಿದವು ಅಪ್ಪಾ ಶ್ರಾವಣಿ ಯ ಕಿವಿ ಮೂಗು ತಜ್ಞರ ಹತ್ತರೆ ಕರಕೊಂಡು ಹೋದವು
Comments
Post a Comment