[25/06, 11:16 PM] pankajarambhat: ಅಂಬಾ...ಅಂಬಾ
ಸುಮಾರು ಒಂದು ವಾರಂದ ವಿಪರೀತ ಮಳೆ ,ಹಿಡುದ ಜಡಿಮಳೆ ಬಿಡುವ ಲಕ್ಷಣ ಕಾಣುತ್ತಿಲ್ಲೆ .ಸೌಜನ್ಯ ನೋಡಿಗೊಂಡಿಪ್ಪ ಹಾಂಗೆ ಎದುರಿನ ಕಟ್ಟಡ ಮರ ಸೆಸಿ ಗುಡ್ಡೆ ಎಲ್ಲಾ ನೀರಿಲಿ ಕೊಚ್ಚಿಗೊಂಡು ಹೋವುತ್ತಾ ಇದ್ದು .ಸೌಜನ್ಯ ಇಪ್ಪ ಮನೆ ಅಕ್ಷರಶಃ ಒಂದು ದ್ವೀಪದ ಹಾಂಗೆ ಆಯಿದು .ಸೌಜನ್ಯ ಎಂತ ಮಾಡುದು ಹೇಳಿ ಆಗದ್ದೆ ಹೆದರಿ ನಡುಗಿಗೊಂಡು ಇತ್ತು. ಈ ಪ್ರಳಯ ಈಮನೆಯನ್ನೂ ಆಹುತಿ ತೆಕ್ಕೊಂಬಲೆ ಇನ್ನು ಹೆಚ್ಚು ಹೊತ್ತು ಬೇಕಾಗ ಹೇಳಿ ಅದಕ್ಕೆ ಕಂಡತ್ತು ಆನು ಸಾವಿಂಗೆ ಹತ್ತರೆ ಇದ್ದೆ ಹೇಳಿ ತಿಳುದು ಅದಕ್ಕೆ ತುಂಬಾ ದುಃಖಆತು ಎಂತ ಮಾಡುದು ದೇವಾ ಎಲ್ಲಾ ಮುಳುಗುತ್ತಾ ಇದ್ದು ಎನಗೆ ನೀನೇ ಗತಿ ಹೇಳಿ ಯೋಚನೆ ಮಾಡಿ ತಡಮಾಡದ್ದೆ ಅದಕ್ಕೆ ಅಗತ್ಯ ಬೇಕಾಪ್ಪ ವಸ್ತುಗಳ ಒಂದು ಬ್ಯಾಗಿಲಿ ತುಂಬಿಸಿ ಮನೆಯ ಮೇಲೆಹೋಗಿ ಕೆಂಪು ವಸ್ತ್ರವ ಆಡಿಸಿಗೊಂಡು ಇದ್ದತ್ತು. ಅಷ್ಟಪ್ಪಗ ಒಂದು ದೊಡ್ಡ ಶಬ್ದ ಮಾಡಿಗೊಂಡು ಅದರ ಎದುರೇ ಇತ್ತ ದೊಡ್ಡ ಕಟ್ಟಡ ಜರುದು ಬಿದ್ದು,ಜೋರಾಗಿ ಗಾಳಿ ಬಂದು ಮೋರಗೆ ಅಪ್ಪಳಿಸಿತ್ತು. ಒಟ್ಟಿಂಗೆ ದೊಡ್ಡ ಶಬ್ದ ಮಾಡುತ್ತಾ ಬಂದ ಗುಡುಗು ಮಿಂಚು ಕಂಡು ಸೌಜನ್ಯ ಕಣ್ಣು ಕಸ್ತಲೆಬಂದು ಪ್ರಜ್ಞೆ ಕಳಕೊಂಡತ್ತು.
ಮತ್ತೆಂತಾತೋ ಅದಕ್ಕೆ ಗೊಂತಿಲ್ಲೆ ಎಚ್ಚರಿಗೆ ಅಪ್ಪಗ ಅದು ಒಂದು ಮನೆಯ ಮಂಚಲ್ಲಿ ಮನುಗಿಗೊಂಡು ಇತ್ತು ಕಣ್ಣು ಒಡದ ಕೂಡಲೇ ಅದಕ್ಕೆ ಆನು ಎಲ್ಲಿದ್ದೆ ಹೇಳಿ ಗೊಂತಾಗದ್ದೆ ಒಂದು ಕ್ಷಣ ಗಲಿಬಿಲಿ ಆತು .ಆನು ಆರು , ಆನು ಇಲ್ಲಿಗೆ ಹೇಂಗೆ ಬಂದೆ ,ಇದು ಆರ ಮನೆ ಎಷ್ಟು ಯೋಚನೆ ಮಾಡಿದರು ಅದಕ್ಕೆ ನೆನಪ್ಪೆ ಆವುತ್ತಿಲ್ಲೆ ಮೆಲ್ಲಂಗೆ ಹಾಸಿಗೆಂದ ಏಳುಲೆ ಮಾಡುವಾಗ ಅದು ಎದ್ದದು ನೋಡಿ ಆ ಮನೆಯ ಯಜಮಾಂತಿ ಗೌರವರ್ಣದ ಹೆಮ್ಮಕ್ಕ ಅಲ್ಲಿಗೆ ಬಂದು ಎಚ್ಚರಿಗೆ ಆತಾ ಕೂಸೆ ಹೇಳಿ ಕೇಳಿತ್ತು ಸೌಜನ್ಯ ಮಾತಡದ್ದೇ ಇಪ್ಪದು ನೋಡಿ ಪುನಃ ಅದೇ ಮಾತು ಕೇಳಿ ಅಪ್ಪದ್ದೆ ಸೌಜನ್ಯ ಆನು ಎಲ್ಲಿದ್ದೆ ನಿಂಗ ಆರು ಹೇಳಿ ಕೇಳಿತ್ತು .ಅದೆಲ್ಲಾ ಮತ್ತೆ ಹೇಳುತ್ತೆ ಈಗ ನೀನು ಎದ್ದು ಹಲ್ಲುತಿಕ್ಕಿ ಮೋರೆ ತೊಳೆ ಹೊಟ್ಟೆಗೆ ಎಂತಾರು ತೆಕ್ಕ ಹೇಳಿ ಹೇಳಿ ಅದರ ಮೀವ ಕೋಣೆಗೆ ಕರಕೊಂಡು ಹೋಗಿ ಬಿಟ್ಟವು.ಹಲ್ಲು ತಿಕ್ಕುವಗಳೂ ಸೌಜನ್ಯಾಂಗೆಒಂದೇ ಯೋಚನೆ ಆನು ಆರು ಆನು ಇಲ್ಲಿಗೆ ಹೆಂಗೆ ಬಂದೆ ಹೇಳಿ ಎಷ್ಟು ಯೋಚನೆ ಮಾಡಿದರೂಅದಕ್ಕೆ ನೆನಪೇ ಆಗದ್ದೆ ತಲೆಬೆಶಿ ಆತು ಮೋರೆ ತೊಳದು ಬಪ್ಪಗ ಅದೇ ಹೆಮ್ಮಕ್ಕ ಅದಕ್ಕೆ ತಿಂಬಲೆ ದೋಸೆ ಕಾಪಿ ಕೊಟ್ಟು ಉಪಚಾರ ಮಾಡಿದವು .ಕಾಪಿ ಕುಡುದಿಕ್ಕಿ ತಲೆಗೆ ಎಣ್ಣೆ ಹಾಕಿ ತಲಗೆ ಮಿಂದು ಬಾ ಬಚ್ಚುದು ಕಮ್ಮಿ ಅಕ್ಕು ಹೇಳಿದವು ಸೌಜನ್ಯ ಮಿಂದು ಬಪ್ಪಗ ಬೆಸಿ ಬೆಸಿ ಕಾಪಿ ಕೊಟ್ಟು ರಜ್ಜ ಒರಗು ಉಂಬಲಪ್ಪಗ ಏಳುಸುತ್ತೇ ಮತ್ತೆ ಮಾತಾಡುವ ಹೇಳಿ ಹೇಳಿ ಹೋದವು .ಸೌಜನ್ಯ ತುಂಬಾ ಬಚ್ಚಿದ ಕಾರಣ ಹಾಸಿಗೆಲಿ ಮನುಗಿದ ಕೂಡಲೇ ಒರಕ್ಕು ಬಂತು .ಎಚ್ಚರಿಗೆ ಅಪ್ಪಗ ಜೋರು ಹಶುವಾಗಿಗೊಂಡಿತ್ತು ಅಷ್ಟಪ್ಪಗ ಉದಿಯಪ್ಪಗ ನೋಡಿದ ಆ ಹೆಮ್ಮಕ್ಕ ಪುನಃ ಬಂದು ಲಾಯಿಕ್ ಒರಕ್ಕೂ ಬಂತಾ ಹೇಳಿ ಕೇಳಿ ಅದರ ಉಂಬಲೆ ಕರಕೊಂಡು ಹೋದವು ಆ ಹೆಮ್ಮಕ್ಕಳ ನೋಡಿದರೆ ಒಳ್ಳೆ ಗೌರವ ಬತ್ತು ಗೌರವರ್ಣದ ಮೋರೆ ಹಣೆಲಿ ರಾರಾಜಿಸುವ ಕುಂಕುಮ ತಲೆತುಂಬಾ ಸೂಡಿದ ಹೂಗು ನೆಗೆ ಮೊರೆ ಸೌಜನ್ಯಾಂಗೆ ಅವರ ನೋಡಿಎನ್ನ ಅಬ್ಬೆಯೂ ಹಿಂಗೇ ಇದ್ದಿಕ್ಕಾ ಹೇಳಿ ಕಂಡತ್ತು ಆದರೆ ಸೌಜನ್ಯ ಅಷ್ಟುಅದೃಷ್ಟವಂತಳಲ್ಲಸಣ್ಣದಿಪ್ಪಗಳೇ ಅಬ್ಬೆ ಅಪ್ಪನ ಕಳಕೊಂಡ ಅದು ಕಷ್ಟಲ್ಲಿ ಅವರಿವರ ಸಹಾಯಂದ ಓದಿ ಮುಂದೆ ಬಂದ ಕೂಸು .
ಸೌಜನ್ಯ ಉಂಬಲೆ ಬಂದದು ನೋಡಿ ಎಲ್ಲೋರು ಬಂದು ಕೂದವು ಎಲ್ಲೋರು ಒಟ್ಟಿಂಗೆ ಉಂಡುಗೊಂಡು ಇಪ್ಪಗ ಸಂದೇಶ್ ಘಟನೆಯ ವಿವರಿಸುತ್ತ .ಸಂದೇಶ್ ಆ ಹೆಮ್ಮಕ್ಕ ಶಿವಾನಿ ಮತ್ತೆ ಆ ಮನೆಯ ಯಜಮಾನ ಶ್ರೀಪಾದರಾಯರಮಗ , ಸಂದೇಶ್ ವಿವರಿಸಿದ್ದು ಕೇಳಿ ಸೌಜನ್ಯಾಂಗೆ ತುಂಬಾ ಆಶ್ಚರ್ಯ ಆವುತ್ತು ಆನು ಅಲ್ಲಿ ಇದ್ದೆ ಹೇಳಿ ಹೇಂಗೆ ಗೊಂತಾದ್ದು ಹೇಳಿ ಸೌಜನ್ಯ ಕೇಳುವಾಗ ಸಂದೇಶ್ ಆನು ಪ್ರಳಯ ಆದಜಾಗೆಲಿ ರಕ್ಷಣಾ ಕಾರ್ಯ ಮಾಡಿಗೊಂಡಿಪ್ಪಗ ಎನ್ನ ಫ್ರೆಂಡ್ ಫೋನ್ ಮಾಡಿದ ನೀನು ಇತ್ತ ಮನೆ ಎನ್ನ ಫ್ರೆಂಡ್ ಪ್ರದೀಪಂದು ಅವ ಈಗ ಅಮೆರಿಕಲ್ಲಿ ಇದ್ದಾ ಹಿರಿಯರು ಬಾಳಿ ಬದುಕಿದ ಮನೆ ಮಾರುಲೆ ಮನಸಿಲ್ಲದ್ದೆ ಅವ ಅದರ ಆಧುನಿಕ ರೀತಿಲಿ ಕಟ್ಟಿ ನಿನಗೆ ಬಾಡಿಗೆಗೆ ಕೊಟ್ಟದು ಅವ ಟಿ. ವಿ.ಲಿ ವಿಷಯ ತಿಳಿದು ಎನಗೆ ಫೋನ್ ಮಾಡಿದ ಕಾರಣ ಆನು ತಕ್ಷಣ ಬಂದು ನಿನ್ನ ಇಲ್ಲಿಗೆ ಕರಕೊಂಡು ಬಂದೆ ಅಷ್ಟು ದೊಡ್ಡ ಪ್ರಳಯ ಆಗಿ ಎಲ್ಲಾ ಕೊಚ್ಚಿ ಹೋದರೂ ನೀನು ಇಪ್ಪ ಮನೆ ಮಾತ್ರ ಹಾಂಗೆ ಇದ್ದು ಇದು ಎಲ್ಲೋರಿಂಗೂ ತುಂಬಾ ಆಶ್ಚರ್ಯಆಯಿದು ಅದರ ವಿಷಯ ವಿಜ್ಞಾನಿಗಳ ತಂಡ ತನಿಖೆ ಮಾಡಿ ಅಪ್ಪದ್ದೆ ತಿಳಿದ್ದು ಎಂತ ಹೇಳಿದರೆ ಆ ಜಾಗೆ ಒಂದು ಪುಣ್ಯ ಭೂಮಿ ಆಗಿತ್ತು ಅಲ್ಲಿ ಮೊದಲು ಗೋಮಾಳ ಇತ್ತು ನೂರಾರು ಗೋವುಗ ಅಲ್ಲಿ ಹುಲ್ಲು ತಿಂದುಗೊಂಡು ಅಡ್ಡಾಡಿಗೊಂಡಿತ್ತಿದ್ದವು ಕಾಲಾಂತರಲ್ಲಿ ಆಮನೆಲಿ ನೋಡುವೊರು ಇಲ್ಲದ್ದೆ ಹಾಳು ಬಿದ್ದತ್ತು ಅಲ್ಲಿಯ ಗೋವುಗಳ ಎಲ್ಲಾ ಆ ಮನೆ ಯಜಮಾನ ಪ್ರಾಯ ಆದಕಾರಣ ಸಾಂಕುಲೆ ಎಡಿಯದ್ದೆ ಸಾಂಕುವೋರಿಂಗೆ ಕೊಟ್ಟು ಮಗನ ಒಟ್ಟಿಂಗೆ ಅಮೆರಿಕಲ್ಲಿ ಹೋಗಿ ನೆಲೆಸಿದವು
ನೀನಿತ್ತ ಮನೆ ಗೋವುಗ ವಾಸ ಮಾಡಿಗೊಂಡಿತ್ತ ಪುಣ್ಯ ಸ್ಟಳ ಆದಕಾರಣ ಎಂತದೆ ಆಗದ್ದೆ ಒಳುದತ್ತು .ಪ್ರಳಯ ಆದಿಪ್ಪಗ ಕುಸಿದ ಹೆಚ್ಚಿನ ಜಾಗೆಗ ಗೋವಧೆ ಮಾಡಿಗೊಂಡಿತ್ತ ಜಾಗೆ ಆಗಿತ್ತು ಅಲ್ಲಿ ದನಂಗಳ ಆಕ್ರಂದನ ಮುಗಿಲು ಮುಟ್ಟಿಗೊಂಡಿತ್ತು ಮುಗಿಲು ತಲುಪಿದ ಆಕ್ರಂದನ ಭೂಮಿಯ ಅಡಿಬಾಗಕ್ಕೂ ಮುಟ್ಟಿ ಅಲ್ಲಿಯ ಲಾವಾರಸ ಕೊದುದು ಭೂಮಿ ಕುಸಿತಕ್ಕೆ ಕಾರಣ ಆತು ಹೇಳಿ ವಿಜ್ಞಾನಿಗ ಕಂಡು ಹಿಡಿದವು. ನಿನಗೆ ಎಂತ ಆಯಿದಿಲ್ಲೆ ಹೆದರಿಕೆಗೆ ನೆನಪಿನ ಶಕ್ತಿ ಹೋಯಿದು ಅಷ್ಟೇ ಒಂದೆರಡು ದಿನಲ್ಲಿ ಅದು ಬತ್ತು ಎಂತ ಯೋಚನೆ ಮಾಡದ್ದೆ ಆರಾಮ ಇರು ಹೇಳಿ ಸಂದೇಶ್ ಹೇಳಿದ.
ದಿನಂದ ದಿನಕ್ಕೆ ಸೌಜನ್ಯ ಚೇತರಿಸಿ ಗೊಂಡತ್ತು ಕಳೆದು ಹೋದ ನೆನಪಿನ ಶಕ್ತಿ ಪುನಃ ಬಂದಾಪ್ಪದ್ದೆ ಅದಕ್ಕೆ ಆನೊಬ್ಬ ಡಾಕ್ಟರ್ ಹೇಳಿ ಗೊಂತಾತು ಮತ್ತೆ ಎನ್ನೋರು ಹೇಳಿ ಆರು ಇಲ್ಲದ್ದೆ ಕಷ್ಟಪಟ್ಟು ಓದಿ ಮೇಲೆ ಬಂದು ಆವಾಗತಾನೆ ಕೆಲಸಕ್ಕೆ ಸೇರಿದ್ದು ಎಲ್ಲಾ ನೆಂಪು ಆತು ಸೌಜನ್ಯ ಶಿವಾನಿಯ ಹತ್ತರೆ ಎಲ್ಲಾ ಹೇಳಿ ಬೇಜಾರ ಮಾಡಿತ್ತು. ಈಗ ಅದು ಕೆಲಸ ಮಾಡಿಗೊಂಡಿತ್ತ ಆಸ್ಪತ್ರೆ ಕುಸಿದು ಅಲ್ಲಿಯ ಹೆಚ್ಚಿನ ಜನ ನೀರು ಪಾಲು ಆಯಿದವು ಹೇಳಿ ತಿಳಿದು ಸೌಜನ್ಯ ಮುಂದೆ ಎಂತ ಮಾಡುದು ಹೇಳಿ ತಿಳಿಯದ್ದೆ ಹೆದರುವಾಗ ಸಂದೇಶ್ ಮತ್ತೆ ಅವನ ಅಮ್ಮ ಇಬ್ಬರೂ ಸೇರಿ ನೀನು ಇಲ್ಲೇ ಒಂದು ಸಣ್ಣ ಕ್ಲಿನಿಕ್ ತೆಗೆ ಎಲ್ಲಾ ಅನುಕೂಲ ಎಂಗ ಮಾಡಿ ಕೊಡುತ್ತೆಯ ಹೇಳಿ ಸಮಾಧಾನ ಮಾಡಿದವು. ಅದಕ್ಕೆ ಬೇಕಾದ ಎಲ್ಲಾ ಸಹಾಯ ಸಂದೇಶ್ ಮಾಡಿ ಕೊಟ್ಟ ಒಂದೇವಾರಲ್ಲಿ ಶಿವಾನಿ ಕ್ಲಿನಿಕ್ ತಲೆ ಎತ್ತಿತ್ತು ಸೌಜನ್ಯ ಒಳ್ಳೆಯ ಗುಣದ ಕೂಸು ದಿನಂದ ದಿನಕ್ಕೆ ಅದರ ಕ್ಲಿನಿಕ್ ಪ್ರಸಿದ್ದಿ ಆತು.ಸಂದೇಶನ ಅಮ್ಮಂಗೆ ಸೌಜನ್ಯನ ನೋಡುವಾಗ ತುಂಬಾ ಖುಷಿ ಆಯಿಕೊಂಡಿತ್ತು ಎಷ್ಟು ಒಳ್ಳೆಯ ಕೂಸು ಯಾವ ಅಬ್ಬೆ ಹೆತ್ತ ಮಗಳೋ ಇಂತಹ ಒಳ್ಳೆಯ ಮಗಳ ಪಡವಲೆ ಆ ಅಬ್ಬೆ ಅಪ್ಪ ಎಷ್ಟು ಪುಣ್ಯ ಮಾಡಿದ್ದವಾ ಏನ ಆದರೆ ಇಂತಹ ಮಗಳ ಒಟ್ಟಿಂಗೆ ಬಾಳುವ ಯೋಗ ಅವಕ್ಕಿಲ್ಲೆನ್ನೇ ಹೇಳಿ ಬೇಜಾರ ಮಾಡಿಗೊಂಡಿತ್ತಿದ್ದವು.ಶಿವಾನಿಗೆ ಸಂದೇಶ್ ಮತ್ತೆ ಸೌಜನ್ಯಾನ ಮದುವೆ ಮಾಡಿದರೆ ಹೇಂಗೆ ಹೇಳಿ ಯೋಚನೆ ಬಂದು ಮೊದಲು ಸೌಜನ್ಯನ ಅಭಿಪ್ರಾಯ ತಿಳುಕೊಂಬ ಹೇಳಿ ಒಂದು ದಿನ ಸೌಜನ್ಯ ಆರಾಮ ಇಪ್ಪಗ ನೋಡಿ ವಿಷಯ ತೆಗದವು. ಸೌಜನ್ಯಾಂಗೆ ಸಂದೇಶ್ ವಿಷಯಲ್ಲಿ ತುಂಬಾ ಅಭಿಮಾನ ಕಷ್ಟಲ್ಲಿಪ್ಪೋರಿಂಗೆ ಸಹಾಯ ಮಾಡುವ ಅವನ ಗುಣ ಕಂಡು ಮನಸ್ಸಿಲಿಯೇ ಪ್ರೀತಿ ಮಾಡಿಗೊಂಡಿತ್ತು ಹಾಂಗಾಗಿ ಶಿವಾನಿಕೇಳಿದ ಕೂಡಲೇ ಒಂದರಿ ನಾಚಿಗೆ ಆದರೂ ಸಂದೇಶ್ ಒಪ್ಪಿದರೆ ಎನ್ನ ಅಭ್ಯಂತರ ಇಲ್ಲೆ ಆದರೆ ಆನು ಒಬ್ಬ ಅನಾಥ ಕೂಸು ಎನ್ನ ಕುಲ ಗೋತ್ರ ಗೊಂತಿಲ್ಲೆ ಹೇಳಿ ಬೇಜಾರ ಮಾಡಿತ್ತು ಶಿವಾನಿ ಥಟ್ಟನೆ ಅದರ ಬಾಯಿ ಮುಚ್ಚಿ ಹಾಂಗೆಲ್ಲಾ ಹೇಳಡ ಕೂಸೆ ನಿನ್ನ ಗುಣ ನೋಡಿದರೆಗೊಂತಾವುತ್ತು ನೀನು ಒಳ್ಳೆಯ ಮನೆತನಲ್ಲಿ ಹುಟ್ಟಿದ ಕೂಸು ಹೇಳಿ ನಿನಗೆ ಎಂಗ ಇದ್ದೆಯ ಇನ್ನೆಂದೂ ಎನಗೆ ಆರೂ ಇಲ್ಲೇ ಆನು ಅನಾಥ ಹೇಳಿ ಬೇಜಾರ ಮಾಡಡ ಹೇಳಿದವು.ಶಿವಾನಿ ಸಂದೇಶನತ್ತರೆ ಈ ವಿಷಯ ಹೇಳಿದವು ಸಂದೇಶನೂ ಕುಶಿಲಿ ಒಪ್ಪಿಗೆ ಕೊಟ್ಟ ಒಂದು ಶುಭಮುಹೂರ್ತಲ್ಲಿ ಸಂದೇಶ್ ಮತ್ತೆ ಸೌಜನ್ಯರ ಮದುವೆ ನಿರ್ವಿಘ್ನ ವಾಗಿ ಆತು .ಒಂದು ದಿನ ಸಂದೇಶ್ ಅಮ್ಮನತ್ತರೆ ಅಮ್ಮಾ ನಾವೊಂದು ದನ ಸಾಂಕಿದರೆ ಹೇಂಗೆ ದನ ಇದ್ದರೆ ಅದರ ಸಗಣ ಉಚ್ಚುದೆ ಉಪಯೋಗ ಬತ್ತು ಅದರ ಮಹತ್ವ ನವಗೆ ಈಗಾಗಲೇ ಅನುಭವಕ್ಕೆ ಬೈಂದು ನವಗೆ ಜಾಗೆ ಇದ್ದು ಅಲ್ಲದಾ ಹೇಳಿದ . ಅವನ ಅಮ್ಮನೂ ಅಪ್ಪನೂ ಇದಕ್ಕೆ ಒಪ್ಪಿದವು ಒಂದು ಶುಭ ದಿನ ಒಂದು ಒಳ್ಳೆಯ ದನವು ಮನೆಗೆ ಬಂತು ಮನೆಯೊರೆಲ್ಲಾ ಗೋ ಸೇವೆ ಮಾಡಿಗೊಂಡು ಖುಷಿಲಿ ಇತ್ತಿದ್ದವು ಈಗ ಆ ಮನೆಲಿ ನಿತ್ಯ ಅಂಬಾ ಅಂಬಾ ಹೇಳುವ ದನದ ಸ್ವರ ಸಣ್ಣ ಪುಟ್ಟು0ಬೆ ಅತ್ತೆ ಇತ್ತೆ ಓಡುದರ ನೋಡುದೇ ಒಂದು ಖುಷಿ ಸೌಜನ್ಯಾಂಗೂ ದನ ಹೇಳಿದರೆ ಬಾರಿ ಪ್ರೀತಿ ದಿನಕ್ಕೆ ಒಂದರಿ ಆದರೂ ಹಟ್ಟಿಗೆ ಹೋಗಿ ದನದ ಕೊರಳು ಸವರದ್ದೆ ಇದ್ದರೆ ಅದಕ್ಕೆ ಒರಕ್ಕೂ ಬಾರ. ದನದೆ ಅಷ್ಟೇ ಒಂದು ದಿನ ಸೌಜನ್ಯ ಬಪ್ಪ ಸಮಯಕ್ಕೆ ಬಾರದ್ದರೆ ಒಂದೇ ಸಮನೆ ಅಂಬಾ ಅಂಬಾ ಹೇಳಿ ದೇನಿಗೇಳುತ್ತು ಅದು ಗೊಂತಿದ್ದು ಸೌಜನ್ಯ ಎಷ್ಟೇ ಕೆಲಸ ಇದ್ದರೂ ಆ ಸಮಯಕ್ಕೆ ಬಂದು ಒಂದರಿ ದನವ ಮುದ್ದು ಮಾಡಿಕ್ಕಿ ಹೋವುತ್ತು ದಿನಾ ಉದಿಯಪ್ಪಗ ಹಾಲು ಕರದು ಮಿಂದು ದೇವರಿಂಗೆ ತುಳಸಿಗೆ ಅತ್ತೆಮಾವಂಗೆಗೆಂಡಂಗೆಹೊಡಾಡಿ ದನಕ್ಕೆ ಎಂತಾರು ತಿಂಬಲೆ ಹಾಕಿದ ಮೇಲೆಯೇ ಕಾಪಿ ತಿಂಡಿ ತಿಂಬದು ಸೌಜನ್ಯನ ದಿನಚರಿ. ಅತ್ತೆ ಮಾವ ಗೆಂಡ ಎಲ್ಲೋರ ಪ್ರೀತಿಯ ಪಡಕೊಂಡ ಅದಕ್ಕೆ ಆನು ಅನಾಥ ಹೇಳುವ ಭಾವನೆಯೇ ಈಗ ಬತ್ತಿಲ್ಲೆ
ಪಂಕಜಾ.ಕೆ ಮುಡಿಪು
[25/06, 11:16 PM] pankajarambhat: ಸೂಪರ್ ಸೂಪರ್ ಸೂಪರ್ ಕತೆ. ಗುಡ್ ಲಕ್ ಬಹುಮಾನ ಬಕ್ಕು ಹೇಳಿ ಎನ್ನ ಅಭಿಪ್ರಾಯ. ವಾಕ್ಯ ರಚನಾ ಕ್ರಮ, ವಿನ್ಯಾಸ ಎಲ್ಲಾ ಲಾಯಕ ಇದ್ದು ...ಲಕ್ಷ್ಮಿ ವಿ ಭಟ್
Comments
Post a Comment