ಗಜಲ್. 14
ಬಾನ ಬಯಲಲಿ ಮುಗಿಲು ಹರಡಿದೆ
ಮಳೆಯ ಸುರಿಸದೆ ಬಯಲು ಬಿರಿದಿದೆ
ಬಿಸಿಲ ತಾಪಕೆಸುಟ್ಟು ಹೋದ ಬುವಿಗೆ
ಮಳೆಯ ಸಿಂಚನ ಅಮಲು ತಂದಿದೆ
ಒಣಗಿದ ಗಿಡಮರಗಳು ಚಿಗುರಿ ನಿಂತು
ಭೂದೇವಿಯ ಒಡಲು ತಣಿದಿದೆ
ಬೇಸಿಗೆಯಲ್ಲಿ ತಿಳಿಯಿತಲ್ಲಾ ನೀರ ಮಹತ್ವ
ಮಳೆಯ ನೀರನು ಇಂಗಿಸಲು ಪ್ರಯತ್ನಿಸಬೇಕಿದೆ
ಮಳೆಕೊಯ್ಲು ನಿರಂತರವಾಗಿರಬೇಕು
ಮಳೆ ಸುರಿದು ಪಂಕಜಾಳ ಮನದಲು ಮುದ ತುಂಬಿದೆ
ಪಂಕಜಾ.ಕೆ.
Comments
Post a Comment