Skip to main content

ಹೆಣ್ಣು ಮನೆಯ ಕಣ್ಣು ಲೇಖನ

   ಹೆಣ್ಣು ಮನೆಯ ಕಣ್ಣು

ಹೆಣ್ಣೆಂದರೆ ಸಹನಶೀಲೆ  ತ್ಯಾಗ, ಸ್ನೇಹದ ಪ್ರತೀಕ..ಹೆಣ್ಣಿನ ಬಗ್ಗೆ ಬರೆಯಲು ಹೊರಟರೆ ಶಬ್ದಗಳಿಗೆತಡಕಾಡುವಂತಾಗುತ್ತದೆ .ಆಕೆ ಸೌಂದರ್ಯದ ಗಣಿ, ಮಮತಾಮಯಿ, ಮುದ್ದಿಸುವ ಮಾತೆಯಾಗಿ ,ಒಲವಸುರಿಸುವ ಸಹೋದರಿಯಾಗಿ,ಪ್ರೇಮಮಯಿ,ಬಾಳಸಂಗಾತಿಯಾಗಿ ,ಮನೆಬೆಳಗುವಸೊಸೆಯಾಗಿ ,ಮನಸು ತುಂಬುವ ಮಗಳಾಗಿ ,ಹತ್ತು ಹಲವು ರೂಪದಲ್ಲಿ ತನ್ನ ತನವನ್ನು ಮೆರೆಯುತ್ತಿದ್ದಾಳೆ .
           ಹೆಣ್ಣು ಇಲ್ಲದ್ದೆ ಇದ್ದರೆ ಆ ಮನೆ ದೀಪವಿಲ್ಲದ ಮನೆಯಂತೆ, ಸುವಾಸನೆಯಿಲ್ಲದಹೂವಿನಂತೆಮಂಕಾಗುವುದು .ಹೆಣ್ಣು ಮನೆಯ ಕಣ್ಣು  ,ಮನೆ ಮನಗಳನ್ನು ಬೆಳಗುವ ಜ್ಯೋತಿ. ಮನೆಯ ಮಹಾಲಕ್ಷ್ಮಿ ಎಂದರೂ ತಪ್ಪಾಗಲಾರದು.  ಒಡಲಲ್ಲಿ ಹೊತ್ತು ,ಮಡಿಲಲ್ಲಿ ಮಲಗಿಸಿ, ಕೈತುತ್ತು ಉಣ್ಣಿಸಿ, ಕೈ ಹಿಡಿದು ಬಾಳು ಬೆಳಗುವ ಹೆಣ್ಣು ಮನೆಯ ಕಣ್ಣು
         ಹೆಣ್ಣು ಎಷ್ಟು ಸಹನಮೂರ್ತಿಯೊ ಅಷ್ಟೇ ಕೆಣಕಿದರೆ ಚಂಡಿ ಆಗಬಲ್ಲಳು ಎನ್ನುವುದಕ್ಕೆ ದುರ್ಗಾದೇವಿಯು ಒಂದು ಉದಾಹರಣೆ . ಮುನಿದರೆ ಮಾರಿಯು ಹೌದು . ಮನೆಯಲ್ಲಿ ಆಕೆಯ ಪಾತ್ರ ಹಿರಿದು ಆಕೆ ಮನೆ ಮಂದಿಯರ ಆರೋಗ್ಯ ಕಾಯುವ ಅನ್ನಪೂರ್ಣೆ ,ಮಕ್ಕಳಿಗೆ ವಿದ್ಯೆ ಬುದ್ದಿ ಕಲಿಸುವ ಶಾರದಾ ಮಾತೆ , ಮನೆ ಬೆಳಗುವ ಗೃಹ ಲಕ್ಷ್ಮಿ ,ಆಕೆಯಿಲ್ಲದ ಮನೆ  ಸ್ಮಶಾನಕ್ಕೆ ಸಮಾನ  .
        ಮಕ್ಕಳನ್ನು  ಹೆತ್ತು ಹೊತ್ತು  ಸಾಕಿ ಸಲಹಿ ವಿದ್ಯೆ ಬುದ್ದಿಗಳ ಕಲಿಸಿ  ತಿದ್ದಿ ತೀಡಿ ಅವರನ್ನು ಉತ್ತಮ ಪ್ರಜೆಗಳಾಗಿಸುವಲ್ಲಿ ತಾಯಿಯ ಪಾತ್ರ ಹಿರಿದು. ತಾಯಿಯಿಲ್ಲದ ಮಗುವಿನ ಬೆಳವಣಿಗೆಅಪೂರ್ಣ.ಹೆಣ್ಣೆಂದರೆ  ಮೃದುಮದುರ  ಭಾವನೆಗಳ ಗಣಿ  ,ಜೀವನೋಲ್ಲಾಸ ಹೆಚ್ಚಿಸುವ ಸಂಜೀವಿನಿ  ರೂಪ ಗುಣಗಳ ಗಣಿ ಸೃಷ್ಟಿಯ ಒಂದು ಅದ್ಭುತ

ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...