. ಕೃತಘ್ನ
ವೃದ್ಧಾಶ್ರಮದಲ್ಲಿ ಕುಳಿತು ಆಕೆ ಚಿಂತಿಸುತ್ತಿದ್ದಳು ಇಷ್ಟಕ್ಕಾಗಿ ತಾನು ತನ್ನ ರಕ್ತ ಬಸಿದು ಮಕ್ಕಳನ್ನು ಸಾಕಬೇಕಿತ್ತೆ ಅಂದು ಮಕ್ಕಳ ಅಪ್ಪ ತನ್ನನ್ನು ನಡು ಬೀದಿಯಲ್ಲಿ ಕೈ ಬಿಟ್ಟು ಹೋದಾಗ ತನಗೆ ಕೇವಲ 24 ವರ್ಷ ಆದಾಗಲೇ ಇಬ್ಬರು ಮಕ್ಕಳ ತಾಯಿ ಜೀವನ ಕಷ್ಟ ವೆಂದಾಗ ತಾನು ಮ ಕ್ಕಳಿಗಾಗಿ ಅರೆಹೊಟ್ಟೆ ಉಂಡು ಅವರಿವರ ಮನೆ ಕೆಲಸ ಮಾಡಿ ಮಕ್ಕಳನ್ನು ಸಾಕಿ ವಿದ್ಯೆ ಕಲಿಸಿ ಅವರನ್ನು ಕೆಲಸಕ್ಕೆ ಸೇರಿಸುವ ವರೆಗೆ ತಾನು ಪಟ್ಟ ಪಾಡೆಷ್ಟು ಇಂದು ಈಗ ಬೆಳೆದು ದೊಡ್ಡ ಹುದ್ದೆಯಲ್ಲಿರುವ ತನ್ನ ಮಕ್ಕಳಿಗೆ ತಾನು ಪಟ್ಟ ಕಷ್ಟ ನನ್ನ ತ್ಯಾಗ ಯಾವದೂ ಅರ್ಥವೇ ಅಗೋಲ್ಲವೇ ಎಂದು ಕಣ್ಣೀರು ಮಿಡಿಯುತ್ತಾಳೆ ಆ ದಿನ ಆ ವೃದ್ಧಾಶ್ರಮಕ್ಕೆ ಬಂದ ಆ ತರುಣ ಅವನನ್ನು ಎಲ್ಲೋ ನೋಡಿದಂತಿದೆಯಲ್ಲ ಎಂದು ಯೋಚನೆ ಮಾಡುತ್ತಾ ನಿಂತಿದ್ದಾಗ ಆತನೇ ಮುಂದೆ ಬಂದು ನಾನು ನಿಮ್ಮ ಶೇಖರ ನಿಮ್ಮನ್ನು ನನ್ನ ಮನೆಗೆ ಕರೆದೊಯ್ಯಲು ಬಂದಿದ್ದೇನೆ ನನ್ನ ಹೆಂಡತಿ ರಮಾ ನಿಮ್ಮ ನಿರೀಕ್ಷೆಯಲ್ಲೇ ಇದ್ದಾಳೆ ಬನ್ನಿ ಹೋಗೋಣ ಎಂದು ಕರೆದೊಯ್ದಾಗ ಆಕೆಗೆ ಉತ್ತರಿಸಲಾಗದೆ ನೀಡುಸುಯ್ಯುತ್ತಾಳೆ ತಾನು ಎಂದೋ ಒಂದೆರಡು ದಿವಸ ಊಟ ಹಾಕಿದ ಹುಡುಗ ಇಂದು ತನ್ನನ್ನು ತನ್ನ ಹೆತ್ತಮ್ಮನಂತೆ ಕಾಣುವಾಗ ತನ್ನ ರಕ್ತಮಾಂಸವನ್ನು ಹಂಚಿ ಬೆಳೆಸಿದ ಮಕ್ಕಳು ಯಾಕೆ ಇಷ್ಟೊಂದು ಕೃತಘ್ನ ರಾದರು ಎಂದು ಆಕೆ ಬೇಸರಿಸುತ್ತಾಳೆ
ಪಂಕಜಾ.ಕೆ. ಮುಡಿಪು.
Comments
Post a Comment