Skip to main content

ಲೇಖನ ನಾನೇಕೆ ಬರೆಯುತ್ತೇನೆ

ನಾನೇಕೆ ಬರೆಯುತ್ತೇನೆ

ನಾನೇಕೆ ಬರೆಯುತ್ತೇನೆ ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟ . ಏಕೆಂದರೆ ನಾನು ಪೂರ್ಣ ಪ್ರಮಾಣದ ಬರವಣಿಗೆಯನ್ನು ಪ್ರಾರಂಭಿಸಿದ್ದು ಇತ್ತೀಚೆಗೆ, ಅಂದರೆ ನನ್ನ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಕೊಂಡ ಬಳಿಕ
              .ನನ್ನ ಮದುವೆ ನಿಶ್ಟಿತಾರ್ಥ ಆದಮೇಲೆ  ನನ್ನವರು ಬರೆಯುತ್ತಿದ್ದ ಪತ್ರಗಳಿಗೆ  ಉತ್ತರ ರೂಪದಲ್ಲಿ ಒಂದೆರಡು ಕವನಗಳನ್ನು ಬರೆದಿದ್ದೆ ಅಲ್ಲದೆ  ಶಾಲಾದಿನಗಳಲ್ಲಿ ಕೆಲವು ಕಥೆ ಕವನಗಳನ್ನು ಬರೆದಿದ್ದೇನಾದರು ಆ ದಿನಗಳಲ್ಲಿ ನನಗೆ ಬರವಣಿಗೆಗಿಂತ ಓದುವುದೇ  ಹೆಚ್ಚು ಇಷ್ಟವಾಗಿತ್ತು ,ಕಥೆ ಲೇಖನಗಳನ್ನು  ಓದುತ್ತಾ ಅದರಲ್ಲಿರುವ ಉತ್ತಮ ಅಂಶಗಳನ್ನು ಒಂದು ಪುಸ್ತಕದಲ್ಲಿ ದಾಖಲಿಸುವ ಹವ್ಯಾಸ ನನ್ನದಾಗಿತ್ತು. ಇತ್ತೀಚೆಗೆ  ಕವಿಗಳು, ಸಾಹಿತಿಗಳು ,ನಿವೃತ್ತ ಪ್ರಾಧ್ಯಾಪಕರು ಹಾಗೂ ನನ್ನ ನೆಂಟರೂ ಆದ ಶ್ರೀ ಗುಣಾಜೆ ರಾಮಚಂದ್ರ ಭಟ್ ಅವರು ತಮ್ಮ ಒಂದು ವಾಟ್ಸಪ್ ಗ್ರೂಪಿಗೆ ನನ್ನನ್ನು ಸೇರಿಸಿ ನನ್ನ ಸಾಹಿತ್ಯಕ್ಕೆ ತುಂಬು ಪ್ರೋತ್ಸಾಹ ವನ್ನು ಕೊಟ್ಟು ನಾನೂ ಬರೆಯಬಲ್ಲೆ ಎನ್ನುವ ಭಾವನೆ ಬೇರೂರಲು ಕಾರಣರಾದರು .  ನಾನು ಬರೆದದ್ದನ್ನು ತಿದ್ದಿ , ನನ್ನಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು  ಗುರುತಿಸಿ ಪ್ರೋತ್ಸಾಹಿಸಿ ನನ್ನ  ಕವನ ಸಂಕಲನಕ್ಕೆ ಮುನ್ನಡಿಯನ್ನು ಬರೆದು ಹುರಿದುಂಬಿಸಿದರು ಈ ಸಂದರ್ಭದಲ್ಲಿ ನನ್ನ ಪತಿ ಮಕ್ಕಳು ಇದಕ್ಕೆ ತುಂಬು ಪ್ರೋತ್ಸಾಹ ವನ್ನು ಕೊಟ್ಟು ನನ್ನ ಬರವಣಿಗೆಯ ಉತ್ಷಾಹ ಇಮ್ಮಡಿಯಾಗಲು ಸಹಕರಿಸಿದರು  .ಇತ್ತೀಚೆಗೆ ಸ್ನೇಹ ಸಂಗಮ ಬಳಗದ  ಶ್ರೀಮತಿ  ಪ್ರಮೀಳಾ ಚುಳ್ಳಿಕಾನ ಅವರು ನನ್ನನ್ನು ಸ್ನೇಹ ಸಂಗಮ ಬಳಗಕ್ಕೆ ಪರಿಚಯಿಸಿದರು  .ಈ ಬಳಗಕ್ಕೆ ಸೇರಿದಮೇಲೆ ಬಳಗದೆಲ್ಲರ  ನಿರಂತರ ಪ್ರೋತ್ಸಾಹ  ಮತ್ತುಬಳಗದ  ಸಾಹಿತ್ಯಾಭಿಮಾನಿಗಳ ಜತೆಯ ಒಡನಾಟದಿಂದ ನಿತ್ಯವೂ ನಾನು ಬರವಣಿಗೆಯಲ್ಲಿ ತೊಡಗಿಕೊಳ್ಳಲು ಕಾರಣವಾಯಿತು .ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಅನ್ನುವ ಗಾದೆಯಂತೆ ಈ ಬಳಗದ ಸಜ್ಜನರು ನನ್ನ ಬರವಣಿಗೆಯ ಲೋಪ ದೋಷಗಳನ್ನು ತಿದ್ದಿ ನನಗೆ ದಾರಿದೀಪವಾದರು .ನನ್ನ ಬರವಣಿಗೆಗೆ  ವಿಮರ್ಶೆಯ ಮುಖಾಂತರ ಶಕ್ತಿ ತುಂಬಿ ನಿತ್ಯವೂ ಬರೆಯಲು ಪ್ರೇರಣೆಯಾದರು .ಈಗ ದಿನಕ್ಕೊಮ್ಮೆ ಏನನ್ನಾದರೂ ಬರೆಯದೆ ಇದ್ದರೆ ಏನನ್ನೋ ಕಳೆದುಕೊಂಡ ಭಾವನೆ ನನ್ನನ್ನುಕಾಡುತ್ತದೆ  .ಬಳಗದೆಲ್ಲರ  ಸಹಕಾರ ಪ್ರೋತ್ಸಾಹದಿಂದ  ಸಾಹಿತ್ಯ ಸರಸ್ವತಿ ಸೇವೆಗಾಗಿ ನಿತ್ಯವೂ ಬರೆಯುತ್ತೇನೆ...... ಬರೆಯುತ್ತಲೇ. ..... ಇರುತ್ತೇನೆ ಉಸಿರು ನಿಲ್ಲುವ ತನಕ.......
ಪಂಕಜಾ. ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020