ಮುದ್ದು ಕೃಷ್ಣ
ಮೆಲ್ಲ ಮೆಲ್ಲ ಬಂದನಲ್ಲ ಮುದ್ದುಕೃಷ್ಣ
ಗಲ್ಲಕೊಂದು ಮುತ್ತನಿಟ್ಟ ಚೆಲುವ ಕೃಷ್ಣ
ಕೊಳಲಗಾನ ನುಡಿಸಿ ಮನವ ಕದ್ದನಲ್ಲ
ಬೃಂದಾವನದ ಸುತ್ತು ತಿರುಗಿಸಿ ದಣಿಸಿದನಲ್ಲ
ರಾಧೆ ಒಲವ ಗೆದ್ದುಕೊಂಡ ಮೋಹನಾಂಗ
ಗೋಪಿಕೆಯರ ಮನವ ಕದ್ದ ಮದನಮೋಹನ
ಗೋವುಗಳ ಮೇಯಿಸುತ್ತ ಬೆಳೆದ ಕಂದ
ಗೋವರ್ಧನಗಿರಿಯನೆತ್ತಿದ ಗೋಪಬಾಲ
ದುಷ್ಟ ರಕ್ಕಸ ಕಂಸನನ್ನು ಕೊಂದುಬಿಟ್ಟ
ಮಧುರೆಯಲ್ಲಿ ನೆಲೆಸಿ ತಾನು ಮೆರೆದು ಬಿಟ್ಟ
ಸುಧಾಮನ ಗೆಳೆತನಕ್ಕೆ ಒತ್ತು ಕೊಟ್ಟ
ಪಾಂಡವರ ರಕ್ಷಣೆಗೆ ನಿಂತು ಬಿಟ್ಟ
ಇಂದು ಬರುವೆಯೆಂದು ಹೇಳಿ ಬಿಟ್ಟ
ಭಕುತಿಯಲಿ ಅವನ ಭಜಿಸಿ ಕರೆದು ಬಿಟ್ಟೆ
ಚಕ್ಕುಲಿ ಉಂಡೆ ಬೆಣ್ಣೆಯನ್ನು ನೈವೇದ್ಯಕ್ಕಿಟ್ಟೆ
ಬೇಗ ಬಂದು ಹರಸಬೇಕು ಮುದ್ದು ಕೃಷ್ಣ
ಪಂಕಜಾ.ಕೆ.
Comments
Post a Comment