[25/09, 4:18 PM] pankajarambhat: ಪಂಕಜಾ.ಕೆ
*ಹಂಬಲ* ಕಣ್ಣ ಮುಂದೆ ದೃಶ್ಯ ಸೃಷ್ಟಿಸುವ ಕವನ.ಮನ ತಲುಪುವ ರಚನೆಯಾಗಿದೆ.
ವೃದ್ಧ ತಾಯಿಯೋರ್ವಳು ತನ್ನ ಮಗನ ಬರುವಿಕೆಗಾಗಿ ದುಃಖತಪ್ತ ಕಣ್ಣುಗಳಿಂದ ದಿಟ್ಟಿಸಿತ್ಯ ಬಾಗಿಲ ಬಳಿ
ಇಂದು ಬಂದಾನು ನಾಳೆ ಬಂದಾನು
ಮರೆಯಲಾರ ನಾನಿತ್ತ ಕೈ ತುತ್ತನು
ಎನ್ನುತ್ತ ಕಾಯುತ್ತಿದ್ದಾಳೆ.
ಹೆತ್ತವಳ ಸಾಕಲಾಗದೆ
ಅನಾಥಾಶ್ರಮಕೆ ದೂಡಿಹೋದವ ಹೆಗೆ ಬಂದಾನು?
ಕಣ್ಣೀರು ಒರೆಸುವ ಕೈಯಿಲ್ಲ
ಮನದ ಮಾತುಗಳ ಕೇಳುವವರಿಲ್ಲಕೊನೆಯ ದಿನಗಳನ್ನು ಕಣ್ಣೀರಲ್ಲಿ ದೂಡುವ ಕರುಣಾಜನಕ ಸ್ಥಿತಿ ಅವಳದು.
ವ್ಹಾವ್. ಸೂಪರ್ .👌🏼👌🏼 ಭಾವಗೀತೆಯನ್ನಾಗಿಸಲು ಇನ್ನೂ ಬಹಳಷ್ಟು ಕುಸುರಿ ಕೆಲಸವಾಗಬೇಕಿದೆ
ತ್ರಿನೇತ್ರಜ್
[25/09, 4:18 PM] pankajarambhat: ಪಂಕಜ ಮುಡಿಪು ರವರ
ಹಂಬಲ
ದೇವಾ ಕರುಣೆ ತೋರೆನಗೆ ಕೈ ಮುಗಿದು ಬೇಡುತಿಹಳು ಮಾತೆ ಈ ಸಾಲು ಮನಕರಗುವಂತೆ ಮಾಡುತ್ತದೆ.. ಮಗನಿಗಾಗಿ ಕಾಯುತ್ತಿರುವ ವಯೋವೃದ್ಧತಾಯಿಯೊಬ್ಬಳು ರಾಮನಿಗಾಗಿ ಶಬರಿ ಕಾದಂತೆ.ಮಗನಿಗಾಗಿ ಇಂದು ಬರುವನೋ...ನಾಳೆ ಬರುವನೋ ....ಎಂದು ಎದುರು ನೋಡುವ ತಾಯಿಯ ಮನದಳಲು ಮನಕರಗುವಂತೆ ಭಾವಗೀತೆಯಾಗಿ ಹರಿದಿದೆ....
👌👏🏻💐🙏
[25/09, 4:18 PM] pankajarambhat: ಪಂಕಜಾ.ಕೆ. ಅವರ
ಹಂಬಲ
ಭಾವಗೀತೆ ಕುರಿತು
_____,,___________
ತಾಯಿಯ ಹೃದಯ ತುಡಿತವನ್ನು ಗಾಢವಾದ ಭಾವತುಂಬಿ ಚಿತ್ರಿಸಲಾಗಿದೆ.ಭಾವಗೀತೆಯಾಗಲು ಲಯದಲ್ಲಿ ಸೋತರೂ ಭಾವದಲ್ಲಿ ಗೆದ್ದಿದೆ.ಬದುಕಿನ ಕೊನೆಯ ಹಂತದಲ್ಲಿ ವಯೋಸಹಜವಾಗಿ ಅಸಹಾಯಕರಾಗುವ ತಾಯಂದಿರ ಮನದೊಳ ಹೊಕ್ಕುವಲ್ಲಿ ಕವಿ ಯಶಸ್ವಿಯಾಗಿದ್ದಾರೆ.
[25/09, 4:18 PM] pankajarambhat: *ಪಂಕಜಾ ಕೆ ರವರ ಹಂಬಲ ಭಾವಗೀತೆ....*
ಹೆತ್ತು ಹೊತ್ತು ಸಾಕಿ ಸಲಹಿದ ಮಗ ಮನೆಯ ತೊರೆದು ಹೋದಾಗ ಮನೆ-ಮನದ ಭಾವಗಳು ಬರಿದಾಗ ಬದುಕಲಿ ನಿರಾಸೆಯ ಕಡಲು ತುಂಬಿ ಎದೆಯಲ್ಲಿ ತೀರದ ದುಗುಡ ದುಮ್ಮಾನ...
ಇಂದು ಬರುವನೋ ನಾಳೆ ಬರುವನೋ ಎಂದು ಕಾತರದಿ ಕಾದಿದೆ.
*ಒಂದಿಷ್ಟು:*
ಕವಿತೆ ಚೆಂದವಿದೆ👌
ಆದೇ ಭಾವಗೀತೆ ಆಗಿಲ್ಲ.
ಸುಕ್ಕುಗಟ್ಟಿದ ಮೈ ಮುಖ ಎನಿವುದಕ್ಕಿಂತ
*ದೇಹ* ಎಂದರೆ ಒಂದು ರೀತಿಯ ಭಾವ ಬರಬಹುದು ನೋಡಿ.
ಎರಡನೇ ಚರಣದಲ್ಲಿ *ಒರೆಸುತ್ತ*
ಮಮತೆಯಿಂದ
ಪ್ರೀತಿಯಿಂದ
ಮಾಡುತ್ತೀರಾ ನೋಡಿ.
*ಹೆತ್ತಬ್ಬೆ* ಪದ 👌
ಅಲ್ಲಲ್ಲಿ *space kodi*
ಭವಣೆ ಅಲ್ಲ
*ಬವಣೆ ಸಾಕು*
ಇನ್ನೂ ಚೆನ್ನಾಗಿ ಬರೆಯಬಹುದು ನೀವು
ಸ್ವಲ್ಪ ಟೈಪಿಂಗ್ ದೋಷಗಳಿವೆ ತಿದ್ದಿಕೊಳ್ಳಿ
ಧನ್ಯವಾದ💐🙏
ಆನಂದ ಎಸ್ ಎನ್
[25/09, 4:18 PM] pankajarambhat: ಪಂಕಜಾರವರ ಹಂಬಲ
ಸುಂದರವಾಗಿ ಮೂಡಿಬಂದಿದೆ
ಮಗನ ಬರುವಿಕೆಯ ಕಾಯುವ ಹೆತ್ತ
ಒಡಲ ವೇದನೆಯನ್ನು ತಮ್ಮ ಭಾವಗೀತೆಯಲ್ಲಿ ತುಂಬಿದ್ದಾರೆ
👌👌💐💐
Comments
Post a Comment