Skip to main content

ಹಂಬಲ ಭಾವಗೀತೆಯ ಬಗ್ಗೆ ವಿಮರ್ಶೆ 26 9 2019

[25/09, 4:18 PM] pankajarambhat: ಪಂಕಜಾ.ಕೆ
*ಹಂಬಲ* ಕಣ್ಣ ಮುಂದೆ ದೃಶ್ಯ ಸೃಷ್ಟಿಸುವ ಕವನ.ಮನ ತಲುಪುವ ರಚನೆಯಾಗಿದೆ.

   ವೃದ್ಧ ತಾಯಿಯೋರ್ವಳು ತನ್ನ ಮಗನ ಬರುವಿಕೆಗಾಗಿ ದುಃಖತಪ್ತ ಕಣ್ಣುಗಳಿಂದ ದಿಟ್ಟಿಸಿತ್ಯ ಬಾಗಿಲ ಬಳಿ

ಇಂದು ಬಂದಾನು ನಾಳೆ ಬಂದಾನು
ಮರೆಯಲಾರ ನಾನಿತ್ತ ಕೈ ತುತ್ತನು

ಎನ್ನುತ್ತ ಕಾಯುತ್ತಿದ್ದಾಳೆ.


ಹೆತ್ತವಳ ಸಾಕಲಾಗದೆ
ಅನಾಥಾಶ್ರಮಕೆ ದೂಡಿಹೋದವ ಹೆಗೆ ಬಂದಾನು?
ಕಣ್ಣೀರು ಒರೆಸುವ ಕೈಯಿಲ್ಲ
ಮನದ ಮಾತುಗಳ ಕೇಳುವವರಿಲ್ಲ‌ಕೊನೆಯ ದಿನಗಳನ್ನು ಕಣ್ಣೀರಲ್ಲಿ ದೂಡುವ ಕರುಣಾಜನಕ ಸ್ಥಿತಿ ಅವಳದು.
  ವ್ಹಾವ್. ಸೂಪರ್ .👌🏼👌🏼 ಭಾವಗೀತೆಯನ್ನಾಗಿಸಲು ಇನ್ನೂ ಬಹಳಷ್ಟು ಕುಸುರಿ ಕೆಲಸವಾಗಬೇಕಿದೆ

ತ್ರಿನೇತ್ರಜ್
[25/09, 4:18 PM] pankajarambhat: ಪಂಕಜ ಮುಡಿಪು ರವರ

ಹಂಬಲ

ದೇವಾ ಕರುಣೆ ತೋರೆನಗೆ ಕೈ ಮುಗಿದು ಬೇಡುತಿಹಳು  ಮಾತೆ ಈ ಸಾಲು ಮನಕರಗುವಂತೆ ಮಾಡುತ್ತದೆ.‌.‌ ಮಗನಿಗಾಗಿ ಕಾಯುತ್ತಿರುವ ವಯೋವೃದ್ಧತಾಯಿಯೊಬ್ಬಳು ರಾಮನಿಗಾಗಿ ಶಬರಿ ಕಾದಂತೆ‌‌‌.ಮಗನಿಗಾಗಿ ಇಂದು ಬರುವನೋ...ನಾಳೆ ಬರುವನೋ ....ಎಂದು ಎದುರು ನೋಡುವ ತಾಯಿಯ ಮನದಳಲು ಮನಕರಗುವಂತೆ ಭಾವಗೀತೆಯಾಗಿ ಹರಿದಿದೆ....
👌👏🏻💐🙏
[25/09, 4:18 PM] pankajarambhat: ಪಂಕಜಾ.ಕೆ. ಅವರ
ಹಂಬಲ
ಭಾವಗೀತೆ ಕುರಿತು
_____,,___________
ತಾಯಿಯ ಹೃದಯ ತುಡಿತವನ್ನು ಗಾಢವಾದ ಭಾವತುಂಬಿ ಚಿತ್ರಿಸಲಾಗಿದೆ.ಭಾವಗೀತೆಯಾಗಲು ಲಯದಲ್ಲಿ ಸೋತರೂ ಭಾವದಲ್ಲಿ ಗೆದ್ದಿದೆ.ಬದುಕಿನ ಕೊನೆಯ ಹಂತದಲ್ಲಿ ವಯೋಸಹಜವಾಗಿ ಅಸಹಾಯಕರಾಗುವ ತಾಯಂದಿರ ಮನದೊಳ ಹೊಕ್ಕುವಲ್ಲಿ ಕವಿ ಯಶಸ್ವಿಯಾಗಿದ್ದಾರೆ.
[25/09, 4:18 PM] pankajarambhat: *ಪಂಕಜಾ ಕೆ ರವರ  ಹಂಬಲ ಭಾವಗೀತೆ....*

ಹೆತ್ತು ಹೊತ್ತು ಸಾಕಿ ಸಲಹಿದ ಮಗ ಮನೆಯ ತೊರೆದು ಹೋದಾಗ ಮನೆ-ಮನದ ಭಾವಗಳು ಬರಿದಾಗ ಬದುಕಲಿ ನಿರಾಸೆಯ ಕಡಲು ತುಂಬಿ ಎದೆಯಲ್ಲಿ ತೀರದ ದುಗುಡ ದುಮ್ಮಾನ...

ಇಂದು ಬರುವನೋ ನಾಳೆ ಬರುವನೋ ಎಂದು ಕಾತರದಿ ಕಾದಿದೆ.

*ಒಂದಿಷ್ಟು:*
ಕವಿತೆ ಚೆಂದವಿದೆ👌
ಆದೇ ಭಾವಗೀತೆ ಆಗಿಲ್ಲ.
ಸುಕ್ಕುಗಟ್ಟಿದ ಮೈ ಮುಖ ಎನಿವುದಕ್ಕಿಂತ
*ದೇಹ* ಎಂದರೆ ಒಂದು ರೀತಿಯ ಭಾವ ಬರಬಹುದು ನೋಡಿ.
ಎರಡನೇ ಚರಣದಲ್ಲಿ *ಒರೆಸುತ್ತ*
ಮಮತೆಯಿಂದ
ಪ್ರೀತಿಯಿಂದ
ಮಾಡುತ್ತೀರಾ ನೋಡಿ.

*ಹೆತ್ತಬ್ಬೆ* ಪದ 👌
ಅಲ್ಲಲ್ಲಿ *space kodi*
ಭವಣೆ ಅಲ್ಲ
*ಬವಣೆ ಸಾಕು*
ಇನ್ನೂ ಚೆನ್ನಾಗಿ ಬರೆಯಬಹುದು ನೀವು
ಸ್ವಲ್ಪ ಟೈಪಿಂಗ್ ದೋಷಗಳಿವೆ ತಿದ್ದಿಕೊಳ್ಳಿ

ಧನ್ಯವಾದ💐🙏

ಆನಂದ ಎಸ್ ಎನ್
[25/09, 4:18 PM] pankajarambhat: ಪಂಕಜಾರವರ ಹಂಬಲ
ಸುಂದರವಾಗಿ ಮೂಡಿಬಂದಿದೆ
ಮಗನ ಬರುವಿಕೆಯ ಕಾಯುವ ಹೆತ್ತ
ಒಡಲ ವೇದನೆಯನ್ನು ತಮ್ಮ ಭಾವಗೀತೆಯಲ್ಲಿ ತುಂಬಿದ್ದಾರೆ
👌👌💐💐

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...