ಸ್ವಚ್ಛ ಭಾರತ
ಮಹಾತ್ಮ ಗಾಂಧಿಯವರು ಕಂಡ ಕನಸು
ಅದುವೇ ಸ್ವಚ್ಛ ಭಾರತದ ಕನಸು
ನನಸಾಯಿತೆ ಅವರ ಈ ಕನಸು
ಎಲ್ಲೆಲ್ಲೂ ತುಂಬಿದೆ ಕಸದ ತ್ಯಾಜ್ಯ
ಸುರಿಯುವರು ರಸ್ತೆಗೆ ಮನೆ ಮನೆಯ ತ್ಯಾಜ್ಯ
ಇದರಿಂದ ಹರಡುತಿದೆ ಹೆಸರಿಲ್ಲದ ರೋಗ
ಆಗಬೇಕು ಸ್ವಚ್ಛತೆಯು ಜೀವನದ ಭಾಗ
ಮಾತಿನಲಿ ಹೇಳದೆ ಮಾಡಬೇಕು ಕಾಯಕ
ಪ್ರತಿಯೊಬ್ಬರ ಮನಸಿನಲ್ಲಿ ಇರಬೇಕು ಸ್ವಚ್ಛತೆಯ ಪಾಕ
ಸ್ವಚ್ಛ ಪರಿಸರ ತರುವುದು ಆರೋಗ್ಯ ಭಾಗ್ಯ
ಆದಕಾಗಿ ಇಡಬೇಕು ಪರಿಸರವ ಸ್ವಚ್ಛ
ಎಲ್ಲೆಂದರಲ್ಲಿಎಸೆಯಬಾರದು ಕಸದ ತ್ಯಾಜ್ಯ
ತಿಳಿಯಬೇಕು ಇದನು ನಾವು ನಿತ್ಯ
ಪಂಕಜಾ ಕೆ.
Comments
Post a Comment