ಗಾಂಧಿ ತಾತ
ನುಡಿದಂತೆ ನಡೆದ ಕಾಯಕ ಯೋಗಿ
ಸ್ವಚ್ಛ ಭಾರತದ ಕನಸನು ಕಂಡ ತ್ಯಾಗಿ
ಆಡಂಬರದ ಬದುಕಿಗೆ ಬದ್ಧ ವಿರೋಧಿ
ಇವರೇ ನಮ್ಮ ಗಾಂಧಿ ತಾತ
ಶಾಂತಿಯ ಮಂತ್ರವ ಜಪಿಸಿದ ದೂತ
ಭಾರತ ದೇಶಕೆ ಸ್ವಾತಂತ್ರ್ಯ ತಂದು ಕೊಟ್ಟ ಪಿತ
ಅಹಿಂಸೆಯ ಮಂತ್ರವ ಜಗಕೆ ಸಾರಿದವರೀತ
ಅವರೇ ನಮ್ಮ ಗಾಂಧಿ ತಾತ
ಸರಳತೆ ಪ್ರಾಮಾಣಿಕತೆಯನು ಮೆರೆದವರೀತ
ಸತ್ಯಾಗ್ರಹ ಉಪವಾಸಗಳ ಮಹತ್ವವ ತೋರಿದವರೀತ
ಬ್ರಿಟಿಷರ ಗುಂಡಿಗೆ ಎದೆಯನು ಒಡ್ಡಿದ ಧೀರ
ಅವರೇ ನಮ್ಮ ಗಾಂಧಿ ತಾತ
ಭಾರತ ಕೀರ್ತಿಯ ಜಗದಗಲ ಹರಡಿದ ಸುಪುತ್ರ
ಅಸ್ಪೃಶ್ಯತೆ ಯ ನಿವಾರಣೆಗೆ ಪಣ ತೊಟ್ಟ ಸಂತ
ಪಾರದರ್ಶಕತೆಯ ಮೆರೆದ ಮಹಾತ್ಮ
ಅವರೇ ನಮ್ಮ ಗಾಂಧಿ ತಾತ
ಪಂಕಜಾ.ಕೆ
Comments
Post a Comment