*ಪಂಕಜರ ಒಲವಿನ ಕುರಿತು ಬರೆಯಹೊರಟರೆ.......*
ಪ್ರೀತಿ ಟಸಿಲೊಡೆಯುವ ರೀತಿಯೇ ಹಾಗೆ ಅರಿವೇ ಇರದೆ ಚಿಗುರುವ ಬಳ್ಳಿ ಅದು. ಇಲ್ಲಿ ಕವಿ ಮನಸ್ಸು ಅದರ ಕುರಿತಂತೇ ಹೇಳ ಹೊರಟಿದೆ. ತನ್ನ ಇನಿಯನ ಮೇಲೆ ಅದ್ಹೇಗೆ ಪ್ರೀತಿ ಮೂಡಿತೋ ಯಾವತ್ತು ಆತ ಮನದಲ್ಲಿ ಮನೆ ಮಾಡಿದನೋ ತಿಳಿಯಲೇ ಇಲ್ಲ. ಆದರೆ ಮನದ ಗುಡಿಯಲಿ ಹೆಸರು ಇರುವುದಂತೂ ನಿಜ. ನಿತ್ಯನೂತನ ಆ ಹೆಸರ ಆರಾಧನೆಯಾಗುತ್ತಿರುತ್ತದೆ.
ಪ್ರೀತಿ ಧೋ ಎಂದು ಒಮ್ಮೆಗೆ ಧಾರೆಯಾಗಿ ಮರೆಯಾಗುವಂತದ್ದಲ್ಲ. ಅದು ಮುದಕೊಡುವ ಸೋನೆ. ಅದು ಮನದ ಚೈತನ್ಯವ ಬಡಿದೆಬ್ಬಿಸದಿರುವುದೇ?
ಚಂಚಲವಾಗಿದ್ದ ಮನಸ್ಸನ್ನು ನಿನ್ನ ಕುರಿತಂತೇ ಚಿಂತಿಸುವಂತೆ ಮಾಡಿರುವೆ. ನಿನ್ನ ನಗುವಲೇ ನಾನೆಲ್ಲವನು ಮರೆತು, ನನ್ನಲ್ಲಿ ನೀ ತುಂಬಿಕೊಂಡಿರುವೆ. ಕವಿ ಮನಸ್ಸು ಸಂಪೂರ್ಣ ವಾಗಿ ಪ್ರೀತಿಯಲಿ ಮುಳುಗಿ ಹೋಗಿ ಆ ಅದಮ್ಯ ಪ್ರೀತಿಯನು ಇನಿಯನಿಗೆ ತಿಳಿಸಬೇಕೆಂದು ತಹತಹಿಸುತಿದೆ.
Comments
Post a Comment