ಗಜಲ್
ನಿನ್ನ ಮುರಳಿಯ ಗಾನದಲಿ ಮೈ ಮರೆತೆ ಕೃಷ್ಣ
ಮೋಹನರಾಗದಲೆಗಳಿಗೆ ಸೋತೆ ಕೃಷ್ಣ
ಬೃಂದಾವನದಲಿ ಗೋಪಿಯರ ಒಡನಾಟದ ಮೋದ
ರಾದೆಯ ಮನವ ಸೆಳೆದು ಕದ್ದೊಯ್ದೆಯಂತೆ ಕೃಷ್ಣ
ಭಾವದಲೆಗಳ ತೇರಿನಲಿ ಕಂಪಿಸುತ್ತಿದೆ ತನುವು
ಸಪ್ತ ಸಾಗರದಲಿ ನೀನಿರುವೆಯಂತೆ ಕೃಷ್ಣ
ಭಕ್ತಿಯೊಂದೇ ಮಾಧವನನ್ನುಒಲಿಸುವ ಸಾಧನ
ಒಲಿದು ಬರದೇಕೆ ದೂರ ನಿಂತೆ ಕೃಷ್ಣ?
ಯಮುನಾ ತೀರದಲಿ ಒಡನಾಡಿದೆವಂದು
ಪಂಕಜಾ ಳ ಮನದಲ್ಲೂ ನಗುತ ಕುಳಿತೆ ಕೃಷ್ಣ
ಪಂಕಜಾ.ಕೆ.
Comments
Post a Comment