ಅತ್ತಿಗೆಯ ನೆನಪಲ್ಲಿ
ಕರುಳಕುಡಿಗಳ ಬಿಟ್ಟು
ಕರ್ತವ್ಯದ ಕರೆಯಲಿ
ವ್ಯಸ್ಥಳಾಗಿರಲು ನಾನಂದು
ಮನಕೆ ದೈರ್ಯವ ಕೊಟ್ಟು
ನೀನಿಂತೆ ಅವರ ಪಾಲನೆಗೆ
ನಿನ್ನ ಸಹಕಾರವಿರಲು
ನಿರಾಳವಾಗುತ ಕರ್ತವ್ಯವನು
ನಿರ್ವಹಿಸಿ ದಕ್ಷೆ ನಾನೆಂದು ಹೆಸರು ಪಡೆದೆ
ಮಾತೆ ಮಮತೆಯ ತೋರಿ
ಮನೆಮನವ ಗೆದ್ದು
ನೀನಿಂದು ಅಮರಳಾದೆ
ಮಾತಿನರಗಿಣಿ ನೀನು
ಮೌನವಾಗಿಹೆಯಿಂದು
ಮನೆಯಲ್ಲಿ ತುಂಬಿರುವುದೀಗ
ಮೌನ ಸಾಮ್ರಾಜ್ಯ
ಹುಡುಕುತಿದೆ ಕಣ್ಣುಗಳು
ಮನೆಯ ಮೂಲೆ
ಮೂಲೆಗಳಲ್ಲೂ
ತುಂಬುತಿದೆ ಕಣ್ಣೀರು
ನಿನ್ನ ಸವಿನೆನಪಿನಲಿ
ನೀ ಮಾಡಿರುವ ಸಹಾಯ
ಸಹಕಾರಗಳ ನೆನೆಯುತ್ತ
ನಿನ್ನ ನೆನಪಲಿ ಇಂದು ನಾ
ದಿನಕಳೆಯುತಿರುವೆ
ಎಲ್ಲಿರಲಿ ನೀನಿಂದು
ನಿನ್ನಾತ್ಮ ದೇವ ಪಾದವ ಸೇರಿ
ಸದ್ಗತಿಯ ಪಡೆಯಲೆಂದು
ದೇವ ಸನ್ನಿಧಿಯಲ್ಲಿ ಶಿರಬಾಗಿ
ನಮಿಸುತ್ತ ನಾ ಬೇಡುತಿರುವೆ
ಪಂಕಜಾ.ಕೆ
Comments
Post a Comment