Skip to main content

ವಿಮರ್ಶೆ ಬಾಳ ದೋಣಿ

[05/10, 2:37 PM] ಪದ್ಯಾಣ ಗೋವಿಂದ ಭಟ್: ಪಂಕಜಾ.ಕೆ. ಅವರ
ಬಾಳದೋಣಿ
ಭಾವಗೀತೆ ಕುರಿತು
____________________
ಗೀತೆಯಲ್ಲಿ ಭಾವ ಹತಾಶೆಯ ರೂಪದಲ್ಲಿ ಬಿಂಬಿತವಾಗಿದೆ.ಆರ್ದ್ರತೆಯಿದೆ,ಪ್ರಾರ್ಥನೆಯಿದೆ.ಬದುಕಿನಲ್ಲಿ ಸೋಲು,ನೋವುಗಳನ್ನುಂಡು ಜೀವ ಹಣ್ಣಾಗಿ ದೇವನ ಮೊರೆ ಹೋಗಿದೆ.
ಬಲ ತುಂಬುವುದಕ್ಕಾಗಿ ವಂದನೆಯ ಉಪಚಾರ ದೇವನಿಗೆ! ನಂಬುಗೆಯ,ವಿಶ್ವಾಸದ ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಕೆಯಾಗಿದೆ.ಖಂಡಿತ ಬಯಕೆ ನೆರವೇರಲಿ!
ಒಳ್ಳೆ ಭಾವ ಗೀತೆ.ಹಾಡುವಂತೆಯೂ ಇದೆ.
[05/10, 2:42 PM] ಅನುರಾದ ಉಬರಡ್ಕ ಹವ್ಯ ಕಾವ್ಯ: ಪಂಕಜಾ ಅವರ ಬಾಳದೋಣಿ ಭಾವಗೀತೆ ಸುಲಭವಾಗಿ ಹಾಡಬಹುದಾದಂತೆ ಇದೆ. ಕಷ್ಟ ಕಾರ್ಪಣ್ಯ ಗಳಿಗೆಷ್ಟೇ ಎದೆ ಒಡ್ಡಿದರೂ ಕಟ್ಟಕಡೆಗೆ ಆ ದೇವರಲ್ಲಿ ಶಾಂತಿ ಸಮಾಧಾನಕ್ಕಾಗಿ‌ ಶರಣಾಗತಿ ಹೊಂದುವ ಭಾವ ಕವನದಲ್ಲಿ‌ ವ್ಯಕ್ತವಾಯಿತು. ಚಂದದ ಭಾವಯಾನ
[05/10, 2:42 PM] ಪರಿಮಳ ಅಡ್ವೊಕೇಟ್: *ಬಾಳದೋಣಿಯ ನಾವಿಕಳು ಪಂಕಜ*
ಕಂಡ ಕನಸುಗಳು ನನಸಾಗಲಾರದೇ ಕರಗಿಹೋಗುತ್ತಿವೆ, ಒಡಲು ಒಡೆದಿದೆ. ನೋವೆಂಬುದೇ ಭಾಗ್ಯದಲಿ ಉಳಿದಿದೆ. ಬದುಕಿನ ನಡೆಯು ಬರೀ ಮುಳ್ಳುಹಾದಿಯಾಗಿ ಮುಂದಡಿಯಿಡಲಾರದೇ ಕುಸಿಯುತಿರುವೆ. ಒಂದಷ್ಟು ಸಮಯಗಳು ಕಳೆದು ಹೋಗಿದೆ. ಈಗ ಮೊದಲಿನ ಉತ್ಸಾಹವೂ ಉಳಿದಿಲ್ಲ ಬಾಗಿದ ಬೆನ್ನುಮೂಳೆಯದು ಸೊರಗಿದೆ. ಜೀವ ಮರುಗಿದೆ. ಏನನ್ನೂ ಸಾಧಿಸಲಾರದೆ ಜೀವನೋತ್ಸಾಹ ಕಳೆದುಕೊಂಡ ನಿರಾಶಾಭಾವ. ಜೊತೆಯಲ್ಲೇ ಮುಂದೆಂದಾದರೂ ಒಳಿತಾಗಬಹುದೆಂಬ ಸಣ್ಣ ಆಶಾಭಾವನೆಯೂ ಕಾಣಿಸುತ್ತಿದೆ. ಅದಕಾಗಿಯೇ ದೇವರ ಮೊರೆಹೋಗಿರುವುದು. ಆ ಮನಸ್ಸು ಏಕಾಗ್ರತೆಯನ್ನು ಪಡೆಯಲಿ. ದೇವನೆಂದ ಪರಂ ತತ್ವದಲಿ ನೆಲೆದಲಿ ಎನ್ನುವ ಭಾವ.

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020