[03/10, 3:25 PM] pankajarambhat: ಪಂಕಜಾ ಕೆ ರವರ
ಬದುಕು
ದಿನ ಬೆಳಗಾದರೆ ಸಂಘರ್ಷ
ಎತ್ತಲೂ ಸಿಗುತ್ತಿಲ್ಲ ಈ ಮನಕೆ ಹರ್ಷ
ಎಂಬ ಕೊರಗಿನೊಂದಿಗೆ ಈ ಮೂರು ದಿನದ ಬದುಕಿನ ಬಂಡಿಯನ್ನು ಕಣ್ಣ ಮುಂದೆ ಚೆನ್ನಾಗಿ ಬಿಂಬಿಸಿದ್ದೀರಿ ಮೇಡಂ 👏👏
ಮನುಜ ಮನುಜನಲ್ಲಿ ನಂಬಿಕೆ ಯಿಲ್ಲದ ಮನೋಸ್ಥಿತಿ ಯು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಂಘರ್ಷ ಗಳಿಗೆ ಇಂಬು ನೀಡುವಂತಾಗಿದೆ,
ಭಾವನೆಗಳು ಬರಿದಾಗಿ ಯಾಂತ್ರಿಕ ಜೀವನದಿಂದ ಬೇಸತ್ತು ಹೋಗಿ ಪ್ರೀತಿ ವಿಶ್ವಾಸ ದ ಬದುಕನ್ನು ಬಯಸುತ್ತಿರುವ ಮನದ ಭಾವನೆಗಳ ಅನಾವರಣ ಚೆನ್ನಾಗಿ ಮೂಡಿಬಂದಿದೆ 🙏🙏🙏
ಧನ್ಯವಾದಗಳು 👏👏👏
ಗೋವಿಂದಪ್ಪ ಕವಿಗಳು
2 [03/10, 3:25 PM] pankajarambhat: ಪಂಕಜಾ ಮುಡಿಪು ಅವರ ಬದುಕು ಕವನ ಚೆನ್ನಾಗಿದೆ. ಯಾರನ್ನು ನಂಬಬೇಕು ಬೇಡ ಎನ್ನುವ ದ್ವಂದ್ವ ಕವನದಲ್ಲಿದೆ. ಪ್ರಸ್ತುತ ದಿನಗಳಲ್ಲಿ ನಂಬಿಕೆ,ಪ್ರೀತಿ ವಿಶ್ವಾಸಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂಬುದು ಕವಯಿತ್ರಿಯ ಅಳಲು ಕವನದಲ್ಲಿದೆ
ಅನುರಾಧ ಉಬರಡ್ಕ ಕವಯಿತ್ರಿ
3....[03/10, 3:28 PM] pankajarambhat: *ಬರಡಾಗುತಿರುವ ಬಾಳಿನ ಸಂಘರ್ಷ*
ತಾವೇ ಎಳೆದುಕೊಂಡ ಸಂಘರ್ಷ ದಲಿ ನಡೆವ ದಾರಿಯೂ ಮರೆತು, ಅಲೆದಾಡುತ್ತಿದ್ದಾನೆ. ಅಹಂಕಾರವು ಕಾಲ ಬಳಿಯಿಂದ ಮೇಲೆದ್ದು, ತಲೆಯ ಮೇಲೆ ಕುಳಿತು ತಾಂಡವವಾಡುತಿದೆ. ಅದರ ಅಟ್ಟಹಾಸಕೆ, ಉಳಿದೆಲ್ಲವೂ ದೂರ ಹೋಗಿ ಬರಡಾಗುದೆ. ಮನಸ್ಸು ಮನಸ್ಸನ್ನು ನಂಬದ ಸ್ಥಿತಿ. ಪ್ರೀತಿ ವ್ಯವಹಾರಿಕ ವಾದ ದುಸ್ಥಿತಿ. ಆಧುನೀಕರಣದಲಿ ಜಗವು ಹತ್ತಿರವಾದರೂ, ಮನಸ್ಸು ಇನ್ನೊಂದು ಕಡೆ ತಲುಪದ ಕಂದಕ.ಸಾವು ಎನ್ನುವುದು, ನಿರ್ಧರಿತವಾಗಿ, ಹತ್ತಿರ ಬಂದಾಗಷ್ಟೇ ನಾವು ಕಳೆದುಕೊಂಡಿರುವುದು ಗಮನಕ್ಕೆ ಬರುವುದು. ಆದರೆ ಮತ್ತೆಹಿಂತಿರುಗಿ ಪಡೆಯಪಾರದ ಸ್ಥಿತಿ. ಮುಖವಾಡ ಧರಿಸಿದ ಮುಖದಲಿ ಭಾವನೆಗಳು ಹುದುಗಿಹೋಗಿದೆ. ಎನ್ನುತ್ತಾ ಖೆದಗೊಂಡಿದ್ದಾರೆ,ಕವಿಗಳು.
ಪರಿಮಳ ಮಹೇಶ್ ಅಡ್ವೊಕೇಟ್ ಕವಯಿತ್ರಿ
[03/10, 5:54 PM] pankajarambhat: *ಪಂಕಜ ಅಕ್ಕನವರ ಬದುಕು ಕವನ*
*ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೇ ಜೀವನ ಎಂಬ ಸತ್ಯದ ಅರಿವಿದ್ದರೂ ಮನುಜ ತನ್ನ ಇಡೀ ಜೀವನವನ್ನು ಹುಡುಕುತ್ತಲೇ ಕಳೆದು ಬಿಡುತ್ತಾನೆ*
ನಾನು ನನ್ನದೆನ್ನುವ ಅಹಂಕಾರ
ಮೋಹ ಮದ ಮತ್ಸರಗಳು ತುಂಬಿದರೆ *ಜೀವನ ಬರಡು ಭೂಮಿಯಂತಾಗುವುದು ನಿಜ...*
ಒಬ್ಬರ ಏಳ್ಗೆಯನು ಸಹಿಸದ ಮನೋಸ್ಥಿತಿ ಇರುವಾಗ *ಯಾರನ್ನು ನಂಬಬೇಕು ಬಿಡಬೇಕು ಎಂಬುದೇ ತಿಳಿಯದೇ* ನಂಬಿದವರು ಕೈ ಕೊಟ್ಟಾಗ ಕೈ ಸುಟ್ಟುಕೊಂಡಾಗಲೇ ಅರಿವಾಗುತ್ತದೆ...ಪ್ರೀತಿ ವಿಶ್ವಾಸದ ಹೆಸರಿಗೆ ಮಂಕು ಬೂದಿ ಎರಚುವರೇ ಹೆಚ್ಚು...
ಮನುಷ್ಯ ಮನುಷ್ಯರ ನಡುವೆ ಕಂದಕ ಸಾವಿರಾರು...
ಮಮಕಾರದ ಸವಿಯ ತಿಳಿಯಲಾರದೇ ದೇಹದ ತುಂಬ ವಿಷವ ಹೊತ್ತವರಂತೆ ಆಡುವರು ಹೀನ ಜನ.. ಇದಕೆ ಕಾಲವೇ ಉತ್ತರಿಸುವುದು..
*ಕಾಲಾಯ ತಸ್ಮೈ ನಮಃ*
ಚೆಂದವಿದೆ👌
ಧನ್ಯವಾದ💐🙏 ಅಮ್ಮ...ತುಂಬ ದಿನಗಳನಂತರ ನಿಮ್ಮ ಕವಿತೆ ಓದಿ ಖುಷಿ ಆಯ್ತು...
*ಆನಂದ*
ಪಂಕಜ ಅವರ *ಬದುಕು* ಅರ್ಥಪೂರ್ಣವಾಗಿದೆ.
ಜೀವನವು ಜಂಜಾಡದ ಬಂಗಲೆ ಅಲ್ಲಿ ನೂರಾರು ಸಂಘರ್ಷಗಳು ನಡೆಯುತ್ತಿರುತ್ತವೆ ಇಂತಹದುರ ನಡುವೆ ಯಾವಾ ಸಾಧನೆಯ ಹಾದಿಯಲ್ಲಿ ಸಾಗಬೇಕು ಮತ್ತು ಮಾರ್ಗದರ್ಶಕರ ಕೊರತೆ ಇದೆ ಎಂದು ಹೇಳುತ್ತ ಇದರಿಂದ ಬಾಳು ಬರಿದಾಗಿದೆ ಎಂಬ ಸಾರ ಸುಪರ್..
ಬರೀ ಈ ಸಮಯದಲ್ಲಿ ನಾನು ಎನ್ನುವ ಅಹಂ ಹಾಗೂ ಚಟಗಳ ದಾಸರಾಗಿ ಮೋಹದ ಬಲೆಯಲ್ಲಿ ಸಿಲುಕಿ ಮೋಸ ವಂಚನೆಯ ಸುಳಿಯಲ್ಲಿ ಸಿಲುಕಿದ ಜನರು ತಮ್ಮ ಅಮೂಲ್ಯವಾದ ಜೀವನವನ್ನು ನಿರ್ಥಕಗೊಳಿಸಿಕೊಳ್ಳುತ್ತಿದ್ದಾರೆ ಎಂಬ ನೋವಿನ ನೀತಿ ಅರ್ಥಗರ್ಭಿತ..
ಬೆಳೆದರೆ ಸಹಿಸದ ಸಮಾಜವಿದು ತನ್ನ ಅಕ್ಕಪಕ್ಕದ ಜನರ ಸಾಧೆಯ ಹಾದಿಯನ್ನು ಸಹಿಸದೇ ಕೆಡಿಸುವ ಜನರೇ ಹೆಚ್ಚು,
ತನ್ನ ಬೆಳವಣಿಗೆಯೇ ಮುಖ್ಯ ಎಂಬ ನಾನೆಂಬ ಆ ಅಹಂಕಾರದಿ ಪ್ರೀತಿಸುವುದನ್ನೇ ಮರೆತಿರುವ ಎನ್ನುವ ನೀತಿಯ ಸಾಲುಗಳು ಮಾದರಿ,,
ಇದ್ದಾಗ ಪ್ರೀತಿಸಿದೆ ಸತ್ತಾಗ ಮರುಗುವರು,
ದ್ವೇಷ, ವೈಷಮ್ಯಕ್ಕೆ ಸಿಲುಕಿ ಮಮತೆಯ ಮಡಿಲನ್ನೇ ಮರೆತು ಕಾಲವಾಗುವ ಕಾಲದಿ ಚಡಪಡಿಸುವರು ಎಂಬ ಸತ್ಯ ಸತ್ಯವಾಗಿದೆ..
ವಾಸ್ತವದ ಜನರ ಗುಣವು ಒಳಗೊಂದು,ಹೊರಗೊಂದು ಮೇಲುನೋಟಕ್ಕೆ ಬಣ್ಣದ ಮಾತು , ಮುಂದೆ ಬಿಟ್ಟು ಹಿಂದೆ ಆಡಿಕೊಳ್ಳುವ ಜನರು ಹೆಚ್ಚು ಇಲ್ಲಿ,
ಆದರೆ ಭಾವನೆಗಳಿಗೆ ಮೌಲ್ಯವಾದ ಮನಗಳು ಮರಗುತಿಲ್ಲ ಹಾಗೂ ವಿರಳ ಮತ್ತು ಭಾವನೆಗಳಿಗೆ ಬೆಲೆಯಿಲ್ಲದೆ ನೀರಿಲ್ಲದ ಭುವಿಯಂತಾದಾಗಿದೆ ,ಪ್ರೀತಿಯಿಲ್ಲದೇ ಮನಗಳ ಪಾತ್ರ ಬತ್ತಿ ಹೋಗಿದೆ ಎಂಬ ಸಾರವು ಮನಮುಟ್ಟಿತು..
✍🏽ಶ್ರೀಹರಿ ದ್ರಾವಿಡ್(ಲೇಖಯೋಗಿ)..
Comments
Post a Comment