Skip to main content

ಬದುಕು ಕವನದ ಬಗ್ಗೆ ವಿಮರ್ಶೆ

[03/10, 3:25 PM] pankajarambhat: ಪಂಕಜಾ ಕೆ ರವರ

ಬದುಕು

ದಿನ ಬೆಳಗಾದರೆ ಸಂಘರ್ಷ
ಎತ್ತಲೂ ಸಿಗುತ್ತಿಲ್ಲ ಈ ಮನಕೆ ಹರ್ಷ

ಎಂಬ ಕೊರಗಿನೊಂದಿಗೆ ಈ ಮೂರು ದಿನದ ಬದುಕಿನ ಬಂಡಿಯನ್ನು ಕಣ್ಣ ಮುಂದೆ ಚೆನ್ನಾಗಿ ಬಿಂಬಿಸಿದ್ದೀರಿ ಮೇಡಂ 👏👏

ಮನುಜ ಮನುಜನಲ್ಲಿ ನಂಬಿಕೆ ಯಿಲ್ಲದ ಮನೋಸ್ಥಿತಿ ಯು ದಿನೇ ದಿನೇ ಹೆಚ್ಚಾಗುತ್ತಿದ್ದು,  ಸಂಘರ್ಷ ಗಳಿಗೆ ಇಂಬು ನೀಡುವಂತಾಗಿದೆ, 

ಭಾವನೆಗಳು ಬರಿದಾಗಿ ಯಾಂತ್ರಿಕ ಜೀವನದಿಂದ ಬೇಸತ್ತು ಹೋಗಿ ಪ್ರೀತಿ ವಿಶ್ವಾಸ ದ ಬದುಕನ್ನು ಬಯಸುತ್ತಿರುವ ಮನದ ಭಾವನೆಗಳ ಅನಾವರಣ ಚೆನ್ನಾಗಿ ಮೂಡಿಬಂದಿದೆ 🙏🙏🙏

ಧನ್ಯವಾದಗಳು 👏👏👏

ಗೋವಿಂದಪ್ಪ ಕವಿಗಳು

2    [03/10, 3:25 PM] pankajarambhat: ಪಂಕಜಾ ಮುಡಿಪು‌ ಅವರ ಬದುಕು ಕವನ‌ ಚೆನ್ನಾಗಿದೆ. ಯಾರನ್ನು‌ ನಂಬಬೇಕು ಬೇಡ ಎನ್ನುವ ದ್ವಂದ್ವ ಕವನದಲ್ಲಿದೆ. ಪ್ರಸ್ತುತ ದಿನಗಳಲ್ಲಿ ನಂಬಿಕೆ,ಪ್ರೀತಿ ವಿಶ್ವಾಸಗಳು  ಅರ್ಥ ಕಳೆದುಕೊಳ್ಳುತ್ತಿವೆ ಎಂಬುದು ಕವಯಿತ್ರಿಯ ಅಳಲು ಕವನದಲ್ಲಿದೆ
ಅನುರಾಧ ಉಬರಡ್ಕ ಕವಯಿತ್ರಿ

3....[03/10, 3:28 PM] pankajarambhat: *ಬರಡಾಗುತಿರುವ ಬಾಳಿನ ಸಂಘರ್ಷ*
ತಾವೇ ಎಳೆದುಕೊಂಡ ಸಂಘರ್ಷ ದಲಿ ನಡೆವ ದಾರಿಯೂ ಮರೆತು, ಅಲೆದಾಡುತ್ತಿದ್ದಾನೆ. ಅಹಂಕಾರವು ಕಾಲ ಬಳಿಯಿಂದ ಮೇಲೆದ್ದು, ತಲೆಯ ಮೇಲೆ ಕುಳಿತು ತಾಂಡವವಾಡುತಿದೆ. ಅದರ ಅಟ್ಟಹಾಸಕೆ, ಉಳಿದೆಲ್ಲವೂ  ದೂರ ಹೋಗಿ  ಬರಡಾಗುದೆ. ಮನಸ್ಸು ಮನಸ್ಸನ್ನು ನಂಬದ ಸ್ಥಿತಿ. ಪ್ರೀತಿ ವ್ಯವಹಾರಿಕ ವಾದ ದುಸ್ಥಿತಿ. ಆಧುನೀಕರಣದಲಿ ಜಗವು ಹತ್ತಿರವಾದರೂ, ಮನಸ್ಸು ಇನ್ನೊಂದು ಕಡೆ ತಲುಪದ ಕಂದಕ.ಸಾವು ಎನ್ನುವುದು, ನಿರ್ಧರಿತವಾಗಿ, ಹತ್ತಿರ ಬಂದಾಗಷ್ಟೇ ನಾವು ಕಳೆದುಕೊಂಡಿರುವುದು ಗಮನಕ್ಕೆ ಬರುವುದು. ಆದರೆ ಮತ್ತೆಹಿಂತಿರುಗಿ ಪಡೆಯಪಾರದ ಸ್ಥಿತಿ. ಮುಖವಾಡ ಧರಿಸಿದ ಮುಖದಲಿ ಭಾವನೆಗಳು ಹುದುಗಿಹೋಗಿದೆ. ಎನ್ನುತ್ತಾ ಖೆದಗೊಂಡಿದ್ದಾರೆ,ಕವಿಗಳು.
ಪರಿಮಳ ಮಹೇಶ್ ಅಡ್ವೊಕೇಟ್ ಕವಯಿತ್ರಿ

[03/10, 5:54 PM] pankajarambhat: *ಪಂಕಜ ಅಕ್ಕನವರ ಬದುಕು ಕವನ*

*ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೇ ಜೀವನ ಎಂಬ ಸತ್ಯದ ಅರಿವಿದ್ದರೂ ಮನುಜ ತನ್ನ ಇಡೀ ಜೀವನವನ್ನು ಹುಡುಕುತ್ತಲೇ ಕಳೆದು ಬಿಡುತ್ತಾನೆ*

ನಾನು ನನ್ನದೆನ್ನುವ ಅಹಂಕಾರ
ಮೋಹ ಮದ ಮತ್ಸರಗಳು ತುಂಬಿದರೆ *ಜೀವನ ಬರಡು ಭೂಮಿಯಂತಾಗುವುದು ನಿಜ...*

ಒಬ್ಬರ ಏಳ್ಗೆಯನು ಸಹಿಸದ ಮನೋಸ್ಥಿತಿ ಇರುವಾಗ *ಯಾರನ್ನು ನಂಬಬೇಕು ಬಿಡಬೇಕು ಎಂಬುದೇ ತಿಳಿಯದೇ* ನಂಬಿದವರು ಕೈ ಕೊಟ್ಟಾಗ ಕೈ ಸುಟ್ಟುಕೊಂಡಾಗಲೇ ಅರಿವಾಗುತ್ತದೆ‌...ಪ್ರೀತಿ ವಿಶ್ವಾಸದ ಹೆಸರಿಗೆ ಮಂಕು ಬೂದಿ ಎರಚುವರೇ ಹೆಚ್ಚು...

ಮನುಷ್ಯ ಮನುಷ್ಯರ ನಡುವೆ ಕಂದಕ ಸಾವಿರಾರು...
ಮಮಕಾರದ ಸವಿಯ ತಿಳಿಯಲಾರದೇ ದೇಹದ ತುಂಬ ವಿಷವ ಹೊತ್ತವರಂತೆ ಆಡುವರು ಹೀನ ಜನ.. ಇದಕೆ ಕಾಲವೇ ಉತ್ತರಿಸುವುದು..
*ಕಾಲಾಯ ತಸ್ಮೈ ನಮಃ*

ಚೆಂದವಿದೆ👌
ಧನ್ಯವಾದ💐🙏 ಅಮ್ಮ...ತುಂಬ ದಿನಗಳ‌ನಂತರ ನಿಮ್ಮ ಕವಿತೆ ಓದಿ ಖುಷಿ ಆಯ್ತು...

*ಆನಂದ*

ಪಂಕಜ ಅವರ *ಬದುಕು* ಅರ್ಥಪೂರ್ಣವಾಗಿದೆ.
ಜೀವನವು ಜಂಜಾಡದ ಬಂಗಲೆ ಅಲ್ಲಿ ನೂರಾರು ಸಂಘರ್ಷಗಳು ನಡೆಯುತ್ತಿರುತ್ತವೆ ಇಂತಹದುರ ನಡುವೆ ಯಾವಾ ಸಾಧನೆಯ ಹಾದಿಯಲ್ಲಿ ಸಾಗಬೇಕು ಮತ್ತು ಮಾರ್ಗದರ್ಶಕರ ಕೊರತೆ ಇದೆ ಎಂದು ಹೇಳುತ್ತ ಇದರಿಂದ ಬಾಳು ಬರಿದಾಗಿದೆ ಎಂಬ ಸಾರ ಸುಪರ್..

ಬರೀ ಈ ಸಮಯದಲ್ಲಿ ನಾನು ಎನ್ನುವ ಅಹಂ ಹಾಗೂ ಚಟಗಳ ದಾಸರಾಗಿ ಮೋಹದ ಬಲೆಯಲ್ಲಿ ಸಿಲುಕಿ ಮೋಸ ವಂಚನೆಯ ಸುಳಿಯಲ್ಲಿ ಸಿಲುಕಿದ ಜನರು ತಮ್ಮ ಅಮೂಲ್ಯವಾದ ಜೀವನವನ್ನು ನಿರ್ಥಕಗೊಳಿಸಿಕೊಳ್ಳುತ್ತಿದ್ದಾರೆ ಎಂಬ ನೋವಿನ ನೀತಿ ಅರ್ಥಗರ್ಭಿತ..

ಬೆಳೆದರೆ ಸಹಿಸದ ಸಮಾಜವಿದು ತನ್ನ ಅಕ್ಕಪಕ್ಕದ ಜನರ ಸಾಧೆಯ ಹಾದಿಯನ್ನು ಸಹಿಸದೇ ಕೆಡಿಸುವ  ಜನರೇ ಹೆಚ್ಚು,
ತನ್ನ ಬೆಳವಣಿಗೆಯೇ ಮುಖ್ಯ ಎಂಬ ನಾನೆಂಬ ಆ ಅಹಂಕಾರದಿ ಪ್ರೀತಿಸುವುದನ್ನೇ ಮರೆತಿರುವ ಎನ್ನುವ ನೀತಿಯ ಸಾಲುಗಳು ಮಾದರಿ,,

ಇದ್ದಾಗ ಪ್ರೀತಿಸಿದೆ ಸತ್ತಾಗ ಮರುಗುವರು,
ದ್ವೇಷ, ವೈಷಮ್ಯಕ್ಕೆ ಸಿಲುಕಿ ಮಮತೆಯ ಮಡಿಲನ್ನೇ ಮರೆತು ಕಾಲವಾಗುವ ಕಾಲದಿ ಚಡಪಡಿಸುವರು ಎಂಬ ಸತ್ಯ ಸತ್ಯವಾಗಿದೆ..

ವಾಸ್ತವದ ಜನರ ಗುಣವು ಒಳಗೊಂದು,ಹೊರಗೊಂದು ಮೇಲುನೋಟಕ್ಕೆ ಬಣ್ಣದ ಮಾತು , ಮುಂದೆ ಬಿಟ್ಟು ಹಿಂದೆ ಆಡಿಕೊಳ್ಳುವ ಜನರು ಹೆಚ್ಚು ಇಲ್ಲಿ,
ಆದರೆ ಭಾವನೆಗಳಿಗೆ ಮೌಲ್ಯವಾದ ಮನಗಳು ಮರಗುತಿಲ್ಲ ಹಾಗೂ ವಿರಳ ಮತ್ತು ಭಾವನೆಗಳಿಗೆ ಬೆಲೆಯಿಲ್ಲದೆ ನೀರಿಲ್ಲದ ಭುವಿಯಂತಾದಾಗಿದೆ ,ಪ್ರೀತಿಯಿಲ್ಲದೇ ಮನಗಳ ಪಾತ್ರ ಬತ್ತಿ ಹೋಗಿದೆ ಎಂಬ ಸಾರವು ಮನಮುಟ್ಟಿತು..

         ✍🏽ಶ್ರೀಹರಿ ದ್ರಾವಿಡ್(ಲೇಖಯೋಗಿ)..

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...