ಗೈರ್ ಮುರದ್ದಪ್ ಗಜಲ್
*********************
ನಿನ್ನ ಕಾಣದೆ ನನ್ನ ಕಣ್ಣುಗಳು ಸೋತಿದೆ
ಮಧುರ ನೆನಪು ತುಂಬಿ ಮನವು ನಲಿದಿದೆ
ನೂರಾರು ಆಶೆಗಳು ಮನದಲಿ ಮೂಡಿದೆ
ಹೇಳಲಾರದೆ ಹೃದಯ ಒಡೆದು ಚೂರಾಗಿದೆ
ಬಾಳ ದೋಣಿಯಲಿ ನಾವು ಜತೆಯಾದೆವಲ್ಲ
ಮನದುಮ್ಮಳವನ್ನು ಸಹಿಸಿ ಸಾಕಾಗಿದೆ
ಎದೆಯಲಿ ಸುಡುತಿದೆ ಕೆಂಡದುಂಡೆಗಳು
ತಣಿಸಲು ನೀನು ಜತೆಯಲಿ ಬರಬೇಕಿದೆ
ಬಚ್ಚಿಟ್ಟ ನೋವು ಕರಗಲೇ ಬೇಕು ಪಂಕಜಾ
ಬದುಕು ಹೂವಿನ ಹಾಸಿಗೆ ಆಗಬೇಕಿದೆ
ಪಂಕಜಾ.ಕೆ
Comments
Post a Comment