ಗಜಲ್
ನಿನ್ನ ಅಗಲಿಕೆಯ ವಿರಹ ಕಾಡಿದೆ ನಲ್ಲೆ
ಮನೆಯಲ್ಲಿ ಶೂನ್ಯ ತುಂಬಿದೆ ನಲ್ಲೆ
ಕೋಪ ತಾಪಗಳನ್ನು ಮುಂದುವರಿಸಬಾರದು
ಅತಿಯಾದರೆ ಅಮೃತವೂ ವಿಷವಾಗುತ್ತದೆ ನಲ್ಲೆ
ನೀನಿಲ್ಲದೆ ಮನೆ ಸ್ಮಶಾನ ವಾಗಿರುವುದು
ಮನವು ಬೇಸರದ ಕಡಲು ಆಗಿದೆ ನಲ್ಲೆ
ಯಾರೂ ಈ ಜಗತ್ತಿನಲ್ಲಿ ಶಾಶ್ವತವಲ್ಲ
ಹೊಂದಾಣಿಕೆಯಿಂದ ಇರಬೇಕಿದೆ ನಲ್ಲೆ
ಹುಸಿಮುನಿಸು ಆಗಾಗ ಇರಬೇಕು ಪಂಕಜಾ
ಬಾಳು ನಂದನವನ ಆಗಬೇಕಿದೆ ನಲ್ಲೆ
ಪಂಕಜಾ. ಕೆ
Comments
Post a Comment