. ಋಣ
ಮರಗಿಡಗಳ ಕಡಿದು ನಾಡಾಗಿಸಿಹರು
ಮಳೆಯುಮುನಿದು ಬರಡಾಯಿತು ಭೂಮಿ
ನೀರ ಸೆಳೆಯು ಅಳಿಯುತಲಿಹುದು
ನೀರೆ ನೀರಿಗಾಗಿ ಅಲೆಯುತಲಿರುವಳು
ಕೊಡವ ಹಿಡಿದು ನೀರಿಗಾಗಿ ಅಲೆದಾಟ
ಎಲ್ಲಿಹುದು ನೀರಸೆಳೆ ತಿಳಿಯದೆ ಸುತ್ತಾಟ
ಚಳಿಗಾಲದ ಈ ದಿನಗಳಲಿ ಸೆಖೆಯ ಝಳ
ಭಾಸ್ಕರನು ಸುರಿಸುತಿಹನು ಕೆಂಡದ ಮಳೆ
ಹನಿ ನೀರಿಗಾಗಿ ಬಾಯಿ ಬಿಡುವ ಪರಿಸ್ಥಿತಿ
ಪ್ರಕೃತಿ ನಾಶದಿಂದಾಗಿದೆ ಈ ಸ್ಥಿತಿ
ಪ್ರಕೃತಿ ನಾಶವಾದರೆ ಉಳಿಯಬಹುದೇ ನಮ್ಮ ಜೀವ
ಉಳಿಸಿ ಬೆಳೆಸಬೇಕು ಪ್ರಕೃತಿ ಸಿರಿಯ ಬೇಗ
ಸ್ವಚ್ಛ ಗಾಳಿ ಪರಿಸರದಲಿ ವಿಹರಿಸಲು ಆನಂದ
ಶುದ್ಧಜಲಮೂಲವ ಉಳಿಸಿದರೆ ಚಂದ
ಪ್ರಕೃತಿ ಕೊಟ್ಟ ಕೊಡುಗೆಯಿದು ನಮಗಾಗಿ
ಇಡಬಾರದು ಪ್ರಕೃತಿ ಮಾತೆಯ ಋಣವ ಬಾಕಿಯಾಗಿ
ಪಂಕಜಾ.ಕೆ.
Comments
Post a Comment